Don't Miss!
- News ಧಾರವಾಡ: ದಿಂಗಾಲೇಶ್ವರ ಶ್ರೀಗಳ ಬೆನ್ನಿಗೆ ನಿಂತ 'ವೀರಶೈವ ಲಿಂಗಾಯತ ಮಹಾಸಭಾ'
- Lifestyle ಕಂಡ ಕಂಡಲ್ಲಿ ಏಕೆ ಉಗುಳಬಾರದು ಗೊತ್ತಾ? ಈ ವಿಡಿಯೋ ನೋಡಿ..!
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Sports IPL 2024: ರಾಜಸ್ಥಾನ್ ರಾಯಲ್ಸ್ vs ಡೆಲ್ಲಿ ಕ್ಯಾಪಿಟಲ್ಸ್ ರೋಚಕ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ್ಮೈಲ್ ಗುರು ; ಚಿತ್ರ ಚಿಕ್ಕದ್ದು, ಆಲೋಚನೆ ದೊಡ್ಡದ್ದು!
ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಹೆಚ್ಚು ಹೆಚ್ಚು ಕಿರುಚಿತ್ರಗಳು ತಯಾರಾಗುತ್ತಿವೆ. ಕಡಿಮೆ ಖರ್ಚಿನಲ್ಲಿ ತಮಗೆ ಸಿಗುವ ಸೌಲಭ್ಯಗಳನ್ನೇ ಬಳಸಿಕೊಂಡು ಮಾಡಲ್ಪಡುವ ಈ ಚಿತ್ರಗಳು ಗುಣಮಟ್ಟದಲ್ಲಿ ಯಾವ ದೊಡ್ಡ ಚಿತ್ರಕ್ಕೂ ಕಡಿಮೆ ಇಲ್ಲದಂತೆ ಮೂಡಿಬರುತ್ತಿವೆ. ಹಾಗೂ ಅಷ್ಟೇ ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿವೆ.
ಈಗ ಇದೇ ಸಾಲಿಗೆ ಸೇರಲು ಇನ್ನೊಂದು ಕಿರುಚಿತ್ರ ಅಣಿಯಾಗುತ್ತಿದ್ದು, ಅದರ ಹೆಸರು 'ಸ್ಮೈಲ್ ಗುರು'. ಇತ್ತೀಚೆಗಷ್ಟೆ ಈ ಚಿತ್ರ ರಾಜರಾಜೇಶ್ವರಿ ನಗರದ ಷಣ್ಮುಗಂ ದೇವಸ್ಥಾನದಲ್ಲಿ ದೊಡ್ಡ ಮಟ್ಟದಲ್ಲಿ ಮುಹೂರ್ತ ಆಚರಿಸಿಕೊಂಡಿತು. ಈ ಕಿರುಚಿತ್ರಕ್ಕೆ ಹಾರೈಸಲು ನಿರ್ಮಾಪಕ ಸಾರಾ ಗೋವಿಂದು, ಚಿತ್ರ ನಿರ್ದೇಶಕ ಅಲೆಮಾರಿ ಸಂತು ಸೇರಿದಂತೆ ಹಲವಾರು ಗಣ್ಯರು ಆಗಮಿಸಿದ್ದರು. [ಯೂಟ್ಯೂಬಲ್ಲಿ ಕನ್ನಡ ಕಿರುಚಿತ್ರಕ್ಕೆ ಸಿಕ್ಕಾಪಟ್ಟೆ ಹಿಟ್ಸ್]
'ಸ್ಮೈಲ್ ಗುರು' ಚಿತ್ರವನ್ನ ನವ ಪ್ರತಿಭೆ ಉಜ್ವಲ್ ಪ್ರಸಾದ್ ನಿರ್ದೇಶಿಸುತ್ತಿದ್ದು, ನಾಯಕನಾಗಿ ರಕ್ಷಿತ್ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಇದೊಂದು ಉತ್ಸಾಹಿ ತಂಡವನ್ನು ಒಳಗೊಂಡಿದ್ದು ಅರ್ಜುನ್ ಕುಮಾರ್, ಆನಂದ್ ಸಾಲುಂಡಿ ಹಾಗೂ ಇನ್ನಿತರರ ಪ್ರತಿಭೆಗಳ ಸಂಗಮದಲ್ಲಿ ಕನ್ನಡಕ್ಕೊಂದು ಸದಭಿರುಚಿಯ ಕಿರುಚಿತ್ರ ಕೊಡುವ ತವಕದಲ್ಲಿದೆ. [ಬೈಟೂ ಕಾಫಿ ಕುಡಿದು ಒಂದು ಕಿರುಚಿತ್ರ ಕಳಿಸಿ ನೋಡೋಣ]
ಮನರಂಜನೆಯೇ ಮೂಲ ಉದ್ದೇಶ - ಕಿರುಚಿತ್ರ ಅಂದ ಕೂಡಲೆ ಏನೋ ಒಂದು ಮೆಸೇಜ್ ಒಳಗೊಂಡಿರುವುದು ಮಾಮೂಲಿ. ಆದರೆ, ಈ ಚಿತ್ರದಲ್ಲಿ ಅಂತಹ ಯಾವುದೇ ಸಂದೇಶ ಸಾರುವ ಉದ್ದೇಶ ಇಲ್ಲ. ಕೇವಲ ಮನರಂಜಿಸುವ ಉದ್ದೇಶದಿಂದ ಈ ಕಿರುಚಿತ್ರ ಮೂಡಿಬರುತ್ತಿದ್ದು, ಪಕ್ಕಾ ಕರ್ಮರ್ಶಿಯಲ್ ಫಾರ್ಮ್ಯಾಟ್ ನಲ್ಲಿ ತಯಾರಾಗುತ್ತಿದೆ.