Don't Miss!
- News 500 ವರ್ಷಗಳ ವನವಾಸಕ್ಕೆ ಮುಕ್ತಿ, ಪ್ರಧಾನಿ ನರೇಂದ್ರ ಮೋದಿ ಅವರಿಂದ ರಾಮರಾಜ್ಯ ನಿರ್ಮಾಣ: ಡಾ. ಕೆ. ಸುಧಾಕರ್
- Lifestyle ಬದಲಾಯ್ತು ಡಿಡಿ ಲೋಗೋ: ಕೇಸರಿ ಬಣ್ಣಕ್ಕೆ ತಿರುಗಿರುವುದಕ್ಕೆ ಕೆಲವರ ಮೆಚ್ಚುಗೆ, ಕೆಲವರ ಟೀಕೆ
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Sports GT vs DC: ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಬೌಲಿಂಗ್ ಆಯ್ಕೆ
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬುಲೆಟ್ ಓಡಿಸಲು ಹೋಗಿ ಬಿದ್ದ ನಟಿ ಶ್ರದ್ಧಾ ಶ್ರೀನಾಥ್
ಸ್ಯಾಂಡಲ್ ವುಡ್ ನಟಿ ಶ್ರದ್ಧಾ ಶ್ರೀನಾಥ್ ಸದ್ಯ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿಯೂ ಬ್ಯುಸಿಯಾಗಿದ್ದಾರೆ. ದಕ್ಷಿಣ ಬಾರತದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವ ಶ್ರದ್ಧಾ ಸದ್ಯ ಕೃಷ್ಣ ಆಂಡ್ ಹಿಸ್ ಲೀಲಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಿದ್ಧರಾಗಿದ್ದಾರೆ.
Recommended Video
ಯೂ ಟರ್ನ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶ್ರದ್ಧಾ ಈಗ ಕನ್ನಡ, ತಮಿಳು, ತೆಲುಗು ಸೇರಿದ್ದಂತೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಕೊರೊನಾ ವೈರಸ್ ಹಾವಳಿಯ ಪರಿಣಾಮ ಮನೆಯಲ್ಲಿಯೆ ಇದ್ದರೂ, ಕೃಷ್ಣ ಆಂಡ್ ಹಿಸ್ ಲೀಲಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಈ ನಡುವೆ ಶ್ರದ್ಧಾ ಬುಲೆಟ್ ಓಡಿಸಿ ಕೆಳಗೆ ಬಿದ್ದಿರುವ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ. ಮುಂದೆ ಓದಿ..
ಋತುಚಕ್ರವಾದಾಗ ಪೂಜೆಯಲ್ಲಿ ಭಾಗಿಯಾಗಿದ್ದೆ: ನಟಿ ಶ್ರದ್ಧಾ ಶ್ರೀನಾಥ್ ಬೋಲ್ಡ್ ಹೇಳಿಕೆ
ಬುಲೆಟ್ ಓಡಿಸಿ ಬಿದ್ದ ಶ್ರದ್ಧಾ
ನಂದಿ ಬೆಟ್ಟದಲ್ಲಿ ಬುಲೆಟ್ ರೈಡ್ ಮಾಡಲು ಕೆಳಗೆ ಬಿದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಶೇರ್ ಮಾಡಿ "ಭಾರತೀಯ ಚಲನಚಿತ್ರದಲ್ಲಿ ಧೈರ್ಯಶಾಲಿ ಸ್ತ್ರೀ ಆಗಬೇಕಾದರೆ, ಕನಿಷ್ಟ ಒಂದು ಬೈಕ್ ರೈಡಿಂಗ್ ಶಾಟ್ ಹೊಂದಿಲ್ಲದಿದ್ದರೆ? "ಎಂದು ಪ್ರಶ್ನಿಸಿದ್ದಾರೆ.
ಶೂಟಿಂಗ್ ಸಮಯದಲ್ಲಿ ನಡೆದ ಘಟನೆ
"ಜೂನ್ 2017 ನಾವು ನಂದಿ ಬೆಟ್ಟದಲ್ಲಿ ಶೂಟಿಂಗ್ ಮಾಡುತ್ತಿದ್ದೆವು. ಇದು ಮೋಡ ಕವಿದ ದಿನ ಮತ್ತು ರಸ್ತೆಗಳು ಒದ್ದೆಯಾಗಿತ್ತು. ರವಿ ಪೆರ್ಪು ಆಕಸ್ಮಿಕವಾಗಿ ನನ್ನ ಬಳಿ ಬಂದು ಬೈಕ್ ಸವಾರಿ ಮಾಡಲು ಬರುತ್ತಾ ಎಂದು ಕೇಳಿದರು. ನಾನು ನೇರವಾಗಿ ಇಲ್ಲ ಅಂತ ಹೇಳಿದೆ. ಆದರೆ ನಾನು ಪ್ರಯತ್ನ ಪಡುತ್ತೇನೆ ಎಂದು ಹೇಳಿ ಬೈಕ್ ಸ್ಟಾರ್ಟ್ ಮಾಡಿದೆ" ಎಂದಿದ್ದಾರೆ.
'ಆ ಪಾತ್ರ ನನ್ನಿಂದ ಮಾಡಲು ಆಗೊಲ್ಲ' ಎಂದು ಬಾಲಿವುಡ್ ಸಿನಿಮಾ ತಿರಸ್ಕರಿಸಿದ್ದ ರಶ್ಮಿಕಾ ಮಂದಣ್ಣ
ರಾಯಲ್ ಎನ್ ಫೀಲ್ಡ್ ಯಾಕೆ ಇಷ್ಟು ಭಾರ
"8 ವರ್ಷದವಳಾಗಿದ್ದಾಗ ಬೈಕ್ ಓಡಿಸಲು ಕಲಿತಿದ್ದೆ. ಹಾಗಾಗಿ ತುಂಬಾ ಕಷ್ಟವಿಲ್ಲ ಎಂದು ಭಾವಿಸಿದ್ದೆ. ಗೇರ್ ಬದಲಾಯಿಸುವ ಬಗ್ಗೆ ಗೊತ್ತಿತ್ತು. ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ನಾನು ಬಿದ್ದಾಗ ಎಲ್ಲರೂ ನನಗೆ ಸಹಾಯ ಮಾಡಲು ಧಾವಿಸದರು. ಆದರೆ ಬೈಕ್ ಹಾಳಾಗುತ್ತೆ ಎಂದು ಕಳವಳ ವ್ಯಕ್ತಪಡಿಸಿದರು. ರಾಯಲ್ ಎನ್ ಫೀಲ್ಡ್ ಯಾಕೆ ಇಷ್ಟು ಭಾರ" ಎಂದು ಶ್ರದ್ಧಾ ಬರೆದುಕೊಂಡಿದ್ದಾರೆ.
ಕೊರೊನಾ ಕ್ವಾರಂಟೈನ್ ವದಂತಿ: ಗರಂ ಆದ ನಟಿ ಶ್ರದ್ಧ ಶ್ರೀನಾಥ್
ಶ್ರದ್ಧಾ ಶ್ರೀನಾಥ್ ಬಳಿ ಇರುವ ಸಿನಿಮಾಗಳು
ಶ್ರದ್ಧಾ ಶ್ರೀನಾಥ್ ಬಳಿ ಸಾಕಷ್ಟು ಸಿನಿಮಾಗಳಿವೆ. ಕೃಷ್ಣ ಅಂಡ್ ಹಿಸ್ ಲೀಲಾ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ. ಜೊತೆಗೆ ತಮಿಲಿನ ಮಾರಾ, ಚಕ್ರ ಸಿನಿಮಾ ಸೇರಿದ್ದಂತೆ ಕನ್ನಡದಲ್ಲಿ ಗೋದ್ರ, ಫ್ಯಾಂಟಮ್, ರುದ್ರಪ್ರಯಾಗ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.