Don't Miss!
- Sports CSK vs LSG IPL 2024: ರುತುರಾಜ್ ಭರ್ಜರಿ ಶತಕ, ದುಬೆ ಸ್ಫೋಟಕ ಬ್ಯಾಟಿಂಗ್; ಲಕ್ನೋಗೆ ಬೃಹತ್ ಗುರಿ ನೀಡಿದ ಚೆನ್ನೈ
- News Narendra Modi: ಕರ್ನಾಟಕಕ್ಕೆ ಏಪ್ರಿಲ್ 29, 29ಕ್ಕೆ ಪ್ರಧಾನಿ ಮೋದಿ ಆಗಮನ
- Lifestyle UPSCಯಲ್ಲಿ 2ನೇ ರ್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶ್ರವಣ್ ರಿಗ್ರೇಟ್ ಅಯ್ಯರ್ ಗೆ ಫಾಲ್ಕೆ ಪುರಸ್ಕಾರ
ರಾಮನಗರದ ಬುಡಕಟ್ಟು ಜನಾಂಗ ಇರುಳಿಗರ ಜೀವನಶೈಲಿ ಬಗ್ಗೆ ಹೇಳುವ ಮೊಬೈಲ್ ಸಾಕ್ಷ್ಯಚಿತ್ರಕ್ಕೆ ಮೊಬೈಲ್ ವಿಭಾಗದ ಅತ್ಯುತ್ತಮ ಚಿತ್ರ ಎಂದು ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಆದರೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನೋಯಿಡಾದಲ್ಲಿ ನಡೆದಿದ್ದರಿಂದ ಶ್ರವ್ಪಣ್ ಅವರು ನೇರವಾಗಿ ಕಾರ್ಯಕ್ರಮಕ್ಕೆ ಹೋಗಲಾಗಲಿಲ್ಲವಂತೆ. ಆದರೆ, ನೂರಾರು ದೇಶಗಳ ಸಾಕ್ಷ್ಯಚಿತ್ರಗಳ ನಡುವೆ ಸ್ಪರ್ಧಿಸಿ 'ಕತ್ತಲಲ್ಲಿ ಇರುಳಿಗರು' ಪ್ರಶಸ್ತಿ ಗಳಿಸಿರುವುದು ಖುಷಿಕೊಟ್ಟಿದೆ ಎಂದು ಶ್ರವಣ್ ಹೇಳಿದ್ದಾರೆ.
21 ವರ್ಷದ ಪತ್ರಿಕೋದ್ಯಮದ ವಿದ್ಯಾರ್ಥಿ ಶ್ರವಣ್ ರಿಗ್ರೆಟ್ ಅಯ್ಯರ್ ಭಾರತೀಯ ಚಿತ್ರರಂಗದಲ್ಲಿ ಈ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಚಿಕ್ಕಂದಿನಿಂದಲೇ ಜಗತ್ತನ್ನು ಬೆರಗು ಗಣ್ಣಿನಿಂದ ನೋಡುತ್ತಾ, ವಿಭಿನ್ನ ದೃಷ್ಟಿಕೋನದಲ್ಲಿ ಯೋಚಿಸುವ ಹವ್ಯಾಸ ಬೆಳೆಸಿಕೊಂಡು ಚಿತ್ರಗಳನ್ನು ತೆಗೆಯುತ್ತಿದ್ದ ಶ್ರವಣನಿಗೆ ಆ ಫೋಟೋಗ್ರಫಿ ಹವ್ಯಾಸವೇ "ಸ್ಟಾಪ್-ಮೋಶನ್"ಸಾಕ್ಷ್ಯಚಿತ್ರ ತೆಗೆಯಲು ಪ್ರೇರಣೆ ನೀಡಿತಂತೆ.
ನೋಕಿಯಾ- N8 ಮೊಬೈಲ್ ಬಳಸಿ ತೆಗೆದ ಮತ್ತೊಂದು ಸಾಕ್ಷ್ಯ ಚಿತ್ರ - "ರೆಕ್ಕೆ ಮುರಿದ ಹಕ್ಕಿ ನಾನು". ಬಗ್ಗೆ ಈಗಾಗಲೇ ನಮ್ಮ Gizbot ವಿಭಾಗದಲ್ಲಿ ವಿವರವಾಗಿ ಬರೆದಿದ್ದೆವು. [ಲೇಖನ ಓದಿ] ಈಗ ಅದಕ್ಕಿಂತ ಒಂದು ಹೆಜ್ಜೆ ಮುಂದಿಟ್ಟಿರುವ ಶ್ರವಣ್, ಜರ್ಮನಿ, ಫ್ರಾನ್ಸ್, ಸ್ಪೇನ್ ಸೇರಿದಂತೆ ನೂರಾರು ದೇಶದ ಪ್ರತಿಭಾವಂತರನ್ನು ಮಣಿಸಿ ಪ್ರತಿಷ್ಠಿತ ಪ್ರಶಸ್ತಿ ಗಳಿಸಿ ನಾಡೀಗೆ ಹೆಮ್ಮೆ ಎನಿಸಿದ್ದಾರೆ.
ರಾಜ್ಯದ ಎಲ್ಲಾ ಆದಿವಾಸಿಗಳ ಬಗ್ಗೆ ಸಾಕ್ಷ್ಯಚಿತ್ರ ತೆಗೆಯಬೇಕು. ಅವರ ಜೀವನಶೈಲಿ ಸಾರ್ವಜನಿಕರಿಗೆ ಪರಿಚಯವಾಗಬೇಕು. ಬುಡಕಟ್ಟು ಜನಾಂಗದವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರಬೇಕು ಎಂಬ ಮಹದಾಸೆ ಕೂಡಾ ಶ್ರವಣ್ ಗೆ ಇದೆ. ಶ್ರವಣ್ ತೆಗೆದ ಇರುಳಿಗರ ಬದುಕಿನ ಕಥೆ ಸಾಕ್ಷ್ಯಚಿತ್ರ ನೋಡಿ