Don't Miss!
- Automobiles Maruti Suzuki: 1 ವರ್ಷದಲ್ಲಿಯೇ ಹೊಸ ದಾಖಲೆ.. 134,735 ಫ್ರಾಂಕ್ಸ್ ಕಾರುಗಳು ಮಾರಾಟ, ಬೆಲೆ ರೂ.7.51 ಲಕ್ಷ
- News Water Crisis: ಜಲಕ್ಷಾಮ ತಡೆಗೆ ಜಲಸಂರಕ್ಷಣೆಯೇ ಪರಿಹಾರ: ಎಚ್ಚೆತ್ತುಕೊಳ್ಳುತ್ತಾ ಸರ್ಕಾರ?
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Lifestyle ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡಕ್ಕೆ ಕಾಲಿಟ್ಟ ಬಾಲಿವುಡ್ ನಟ ಶ್ರೇಯಸ್ ತಲ್ಪಡೆ
ಈ ಚಿತ್ರ ಕನ್ನಡ, ತೆಲುಗು ಹಾಗೂ ಹಿಂದಿಯಲ್ಲಿ ನಿರ್ಮಾಣವಾಗುತ್ತಿರುವುದು ವಿಶೇಷ. 30 ಕ್ಕೂ ಹೆಚ್ಚು ಬಾಲಿವುಡ್ ಹಾಗೂ ಮರಾಠಿಯಲ್ಲಿ ಚಿತ್ರಗಳಲ್ಲಿ ನಟಿಸಿರುವ ಶ್ರೇಯಸ್ ತಲ್ಪಡೆ, ಹೆಚ್ಚಾಗಿ ಹಾಸ್ಯ ಪಾತ್ರಗಳನ್ನೇ ಮಾಡಿದ್ದಾರೆ. ಆದರೆ ಈಗವರು ನಟಿಸಲಿರುವ ತ್ರಿಭಾಷಾ ಚಿತ್ರದ ಸಬ್ಜೆಕ್ಸ್ 'ರೊಮ್ಯಾಂಟಿಕ್ ಥ್ರಿಲ್ಲರ್'. ಈ ಚಿತ್ರದಲ್ಲಿ ಶ್ರೇಯಸ್ 'ಹಾರ್ಡ್ವೇರ್ ಎಂಜಿನಿಯರ್' ಪಾತ್ರ ಮಾಡಲಿದ್ದಾರೆ.
ಅಣಜಿ ನಿರ್ಮಾಣದ ಈ ಚಿತ್ರದಲ್ಲಿ ನಾಯಕರು ಬೇರೆ ಬೇರೆ. ಕನ್ನಡದಲ್ಲಿ ಶ್ರೀನಗರ ಕಿಟ್ಟಿ, ತೆಲುಗಿನಲ್ಲಿ ತರುಣ್ ಹಾಗೂ ಹಿಂದಿಯಲ್ಲಿ ಮಿಥುನ್ ಚಕ್ರವರ್ತಿ ಮಹಾಕ್ಷಯ್ ಚಕ್ರವರ್ತಿ ನಾಯಕರಾಗಿರುತ್ತಾರೆ. ಆದರೆ ಈ ಶ್ರೇಯಸ್ ತಲ್ಪಡೆ ಪ್ರಮುಖ ಪಾತ್ರ ಹಿಂದಿ, ಕನ್ನಡ ಮತ್ತು ತೆಲುಗು ಮೂರರಲ್ಲೂ ಇರಲಿದೆ. ಹಾಗೇ, ನಟಿ ಟಿಯಾ ಬಾಜಪೇಯಿ ಕೂಡ ಮೂರೂ ಭಾಷೆಗಳಲ್ಲಿ ಇರಲಿದ್ದಾರೆ.
ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿರುವ ಟಿಯಾ ಬಾಜಪೇಯಿ, 'ಸರಿಗಮಪ ಚಾಲೆಂಜ್ 2005' ಮೂಲಕ ಬೆಳಕಿಗೆ ಬಂದ ಪ್ರತಿಭೆ. ಈಗಾಗಲೇ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಹೆಚ್ಚು ಖ್ಯಾತಿ ಪಡೆದಿಲ್ಲ. ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಒರಿಸ್ಸಾ ಮೂಲದ ಹಿಂದಿ ನಟ ಪಿಟೋಬಾಶ್ ಹಾಗೂ ಅಜಯ್ ಕೂಡ ನಟಿಸಲಿದ್ದಾರೆ. ಹೆಚ್ಚಾಗಿ ವಿದೇಶಗಳಲ್ಲೇ ಚಿತ್ರೀಕರಣ ನಡೆಯಲಿದ್ದು ಬ್ಯಾಂಕಾಕ್ ಮತ್ತು ಜೋರ್ಡಾನ್ ಪ್ರಮುಖ ಚಿತ್ರೀಕರಣ ತಾಣವಾಗಿದೆ.
ವಿದೇಶಗಳನ್ನು ಹೊರತುಪಡಿಸಿ ಬೆಂಗಳೂರು ಹಾಗೂ ಮುಂಬೈನಲ್ಲಿ ಚಿತ್ರೀಕರಣ ನಡೆಸಲು ತೀರ್ಮಾನಿಸಿದೆ ಚಿತ್ರತಂಡ. ಅಣಜಿ ನಿರ್ಮಾಣದ ಈ ಚಿತ್ರವು 'ನಮ್ಮಣ್ಣ ಫಿಲಂಸ್' ಬ್ಯಾನರ್ ಅಡಿಯಲ್ಲಿ ರು. 15 ಕೋಟಿ ಬಜೆಟ್ ನಲ್ಲಿ ಮೂರು ಭಾಷೆಗಳಲ್ಲಿ ನಿರ್ಮಾಣವಾಗಲಿದೆ. ಹೆಸರಿಡದ ಈ ಚಿತ್ರವನ್ನು ನವೀನ್ ಕೌಶಿಕ್ ಮತ್ತು ವಿಜಯ್ ಕಿರಣ್ (ಪ್ರದೀಪ್) ನಿರ್ದೇಶಿಸಲಿದ್ದಾರೆ.
ಅರ್ಜುನ್ ಜನ್ಯ ಸಂಗೀತವಿರುವ ಚಿತ್ರಕ್ಕೆ ಮಂಜು ಮಾಂಡವ್ಯ ಸಂಭಾಷಣೆ ಬರೆದಿದ್ದಾರೆ. ಕವಿರಾಜ್ ಸಾಹಿತ್ಯ ಹಾಗೂ ರಾಜೇಶ್ ಕಟ್ಟಾ ಛಾಯಾಗ್ರಾಹಣವಿದೆ. ಭೀಮಾ ತೀರದಲ್ಲಿ (ಚಂದಪ್ಪ) ನಂತರ ಅಣಜಿ ನಾಗರಾಜ್ ನಿರ್ಮಾಣದ ಚಿತ್ರ ಇದಾಗಿದೆ. ಪರಭಾಷೆಯ ನಟ ಶ್ರೇಯಸ್ ತಲ್ಪಡೆ ತಮ್ಮ ಪಾತ್ರಕ್ಕೆ ಸ್ವತಃ ತಾವೇ ಡಬ್ಬಿಂಗ್ ಮಾಡಲಿದ್ದಾರಂತೆ. ಒಟ್ಟಿನಲ್ಲಿ ಅಣಜಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. (ಒನ್ ಇಂಡಿಯಾ ಕನ್ನಡ)