ಪವನ್ ಕಲ್ಯಾಣ್ ಬೆಂಗಾಳಿ ಹುಡುಗಿಯರಿಂದ ಮಸಾಜ್ ಮಾಡಿಸಿಕೊಳ್ತಾರಂತೆ.!
Recommended Video

'ಕಾಸ್ಟಿಂಗ್ ಕೌಚ್' ವಿರುದ್ಧ ತೆಲುಗು ಇಂಡಸ್ಟ್ರಿಯಲ್ಲಿ ನಡೆಯುತ್ತಿರುವ ಕ್ರಾಂತಿಕಾರಿ ಹೋರಾಟದಲ್ಲಿ ದಿನದಿನಕ್ಕೆ ದೊಡ್ಡ ದೊಡ್ಡ ಕಲಾವಿದರ ಅಸಲಿ ಮುಖಗಳು ಬಯಲಾಗುತ್ತಿದೆ. ಒಬ್ಬರ ನಂತರ ಮತ್ತೊಬ್ಬರ ಬಗ್ಗೆ ಯುವ ನಟಿಯರು ಅಚ್ಚರಿಯ ಸಂಗತಿಗಳನ್ನ ಬಯಲಿಗೆಳೆಯುತ್ತಿದ್ದಾರೆ.
ಸುರೇಶ್ ಬಾಬು ಮಗ ಅಭಿರಾಮ್, ನಿರ್ಮಾಪಕ ವಾಕಡಾ ಅಪ್ಪಾರಾವ್, ನಿರ್ದೇಶಕ ಮಹೇಶ್ ಕತ್ತಿ, ನಟ ರಾಜಶೇಖರ್ ಹೀಗೆ, ತೆಲುಗಿನ ಖ್ಯಾತನಾಮರ ಬಗ್ಗೆ ಗಂಭೀರವಾದ ಆರೋಪಗಳನ್ನ ಹೊರಹಾಕುತ್ತಿದ್ದಾರೆ.
ಇನ್ನು ಲೇಟೆಸ್ಟ್ ಏನಪ್ಪಾ ಅಂದ್ರೆ, ರಾಜಕಾರಣಿ ಹಾಗೂ ಪವರ್ ಸ್ಟಾರ್ ಪವನ್ ಕಲ್ಯಾಣ್ ಬಗ್ಗೆ ಈಗ ಬೆಚ್ಚಿಬೀಳಿಸುವ ಅಂಶಗಳನ್ನ ಬಹಿರಂಗಪಡಿಸಿದ್ದಾರೆ. ಪವನ್ ಕಲ್ಯಾಣ್ ಅಂದ್ರೆ ಅಭಿಮಾನಿಗಳ ಏನೋ ಎಂದುಕೊಂಡಿದ್ದಾರೆ, ಆದ್ರೆ, ನಿಜವಾದ ಪವನ್ ಕಲ್ಯಾಣ್ ಏನು ಎಂಬುದು ನಾನು ಹೇಳ್ತೀನಿ ಕೇಳಿ ಎಂದು ಬಹಿರಂಗಪಡಿಸುತ್ತಿದ್ದಾರೆ. ಅಷ್ಟಕ್ಕೂ, ಪವನ್ ಬಗ್ಗೆ ಕೇಳಿ ಬಂದಿರುವ ಆರೋಪವೇನು.?

ಬೆಂಗಾಳಿ ಹುಡುಗಿಯರಿಂದ ಮಸಾಜ್
ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಬೆಂಗಾಳಿ ಹುಡುಗಿಯರಿಂದ ಮಸಾಜ್ ಮಾಡಿಸಿಕೊಳ್ಳುತ್ತಾರೆ ಎಂಬ ಗಂಭೀರ ಆರೋಪವನ್ನ ನಟಿ ಶ್ರುತಿ ಮಾಡಿದ್ದಾರೆ. ನೀವು ಅಂದುಕೊಂಡಿರುವಂತೆ ಪವನ್ ಕಲ್ಯಾಣ್ ಅಲ್ಲ. ನಾನು ತೋರಿಸ್ತೀನಿ ಬನ್ನಿ ಪವನ್ ಕಲ್ಯಾಣ್ ಯಾರು ಎಂದು ಹೇಳುವ ಮೂಲಕ ಆಶ್ಚರ್ಯ ಉಂಟು ಮಾಡಿದ್ದಾರೆ.

ದುಡ್ಡು ಮಾಡ್ತಿದ್ದಾರೆ ಅಷ್ಟೇ.!
ಪವನ್ ಕಲ್ಯಾಣ್ ಅಭಿಮಾನಿಗಳಿಗಾಗಿ ಏನ್ ಮಾಡಿದ್ದಾರೆ. ಸಿನಿಮಾ ಆಯ್ತು, ಈಗ ಅಭಿಮಾನಿಗಳನ್ನ ಬಳಸಿಕೊಂಡು ರಾಜಕೀಯ ಆರಂಭಿಸಿದ್ದಾರೆ. ಅಮರಾವತಿಯಲ್ಲಿ ಮನೆ ಕಟ್ಟಿಕೊಂಡ್ರು. ಬರಿ ಸಿನಿಮಾದಲ್ಲಿ ಮಾತ್ರ ಪವನ್ ಕಲ್ಯಾಣ್ ಇದನ್ನೆಲ್ಲ ಸಂಪಾದನೆ ಮಾಡಿದ್ರಾ.? ಸಿನಿಮಾ ಪವನ್ ಸಿನಿಮಾ ಹಿಟ್ ಆಗಿದ್ದೇ ಕೆಲವೇ. ಆದ್ರೂ, ಇಷ್ಟೊಂದು ಹಣ ಹೇಗೆ ಬಂತು ಎಂದು ಶ್ರುತಿ ಪ್ರಶ್ನಿಸಿದ್ದಾರೆ.

ಹೀರೋಗಳು ಆಗುವ ಮುಖಗಳೇ ಅಲ್ಲ..
ತೆಲುಗಿನಲ್ಲಿ ಅಲ್ಲು ಅರವಿಂದ್, ಸುರೇಶ್ ಬಾಬು ಇನ್ನು ಕೆಲವರ ಕುಟುಂಬದವರೇ ಹೀರೋಗಳು. ಅವರಲ್ಲಿ ಒಬ್ಬರಾದರೂ ಹೀರೋಗಳು ಮುಖನಾ.? ಮೂವತ್ತು ನಾಲವತ್ತು ಸರಿ ಸರ್ಜರಿ ಮಾಡಿಕೊಂಡ್ರು ಹೀರೋ ರೀತಿ ಇಲ್ಲ. ಒಬ್ಬನಾದರೂ ಹೈಟ್ ಇದ್ದಾರ.? ಆದ್ರೂ, ಅವರ ಮಕ್ಕಳೇ ಹೀರೋಗಳು. ಬೇರೆ ಯಾರೂ ಅವಕಾಶ ಸಿಗಲ್ಲ ಎಂದು ತಮ್ಮ ಆಕ್ರೋಶವನ್ನ ಶ್ರುತಿ ಹೊರಹಾಕಿದ್ದಾರೆ.

ಕೋತಿಗಳೆಲ್ಲವೂ ಹೀರೋ, ನಾವು ಹೀರೋಯಿನ್ ಆಗಲ್ಲ.!
ಕೋತಿಗಳಂತಿರುವ ಮಕ್ಕಳೆಲ್ಲ ಹೀರೋಗಳು ಆಗ್ತಾರೆ. ಆದ್ರೆ, ತೆಲುಗು ಹುಡುಗಿಯರು ಮಾತ್ರ ನಾಯಕಿ ಆಗಬಾರದು. ಇಲ್ಲಿ ಎಲ್ಲವೂ ಅರಿಯಿಲ್ಲ. ಜನಗಳಿಗೆ ಗೊತ್ತಾಗಿದೆ. ಸಿನಿಮಾ ಇಂಡಸ್ಟ್ರಿ ಅಂದ್ರೆ ಏನು, ಅಲ್ಲಿ ಏನು ನಡೆಯುತ್ತಿದೆ ಎಂದು ಎಲ್ಲರಿಗೂ ಅರಿವಾಗಿದೆ ಎಂದು ತಮ್ಮ ನೋವನ್ನ ತೋಡಿಕೊಂಡರು.


Click it and Unblock the Notifications











