Don't Miss!
- News ಎನ್ಕೌಂಟರ್ ಮಾಡುವುದಾಗಿ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ!
- Lifestyle ಮದ್ಯದ ಅಮಲಲ್ಲಿ ತೇಲಾಡುತ್ತಿದ್ದ ಶಿಕ್ಷಕನಿಗೆ ಮಕ್ಕಳಿಂದಲೇ ಚಪ್ಪಲಿ ಏಟು..!
- Finance 2.3 ಲಕ್ಷ ರೂಪಾಯಿಗೆ 9 ನಿಂಬೆಹಣ್ಣು ಹರಾಜು, ಏನಿದರ ವಿಶೇಷತೆ ತಿಳಿಯಿರಿ
- Sports RR vs DC: ಐಪಿಎಲ್ನಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾದ ರಿಷಭ್ ಪಂತ್
- Technology ಮತ್ತೊಂದು ಅಗ್ಗದ 5G ಫೋನ್ ಲಾಂಚ್ ಮಾಡಲು ಸಜ್ಜಾದ ರಿಯಲ್ಮಿ!..ಫೀಚರ್ಸ್ ಏನು?
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕರಿಯ ಆದರೂ ಮದುವೆ ಆಗ್ತೀನಿ' ಎಂದ ಶುಭಾ ಪೂಂಜಾ
Recommended Video
''ನಾನು ಈಗ ಪ್ರೀತಿಯಲ್ಲಿ ಬೀಳಬೇಕು... ನನಗೂ ಒಬ್ಬ ಗೆಳೆಯ ಬೇಕು..'' ಎಂದು ಬೆಳ್ಳಿತೆರೆ ಮೇಲೆ ಹಾಡಿ ಕುಣಿದಿದ್ದ ನಟಿ ಶುಭಾ ಪೂಂಜಾ ನಿಜ ಜೀವನದಲ್ಲಿ ಇದೀಗ ನನಗೂ ಒಬ್ಬ ಗೆಳೆಯ ಬೇಕು ಎನ್ನುತ್ತಿದ್ದಾರೆ.
ಸಿನಿಮಾ ನಾಯಕಿಯರು ಸಾಮಾನ್ಯವಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಹಾಗೂ ಉದ್ಯಮದಲ್ಲಿರುವ ಗಣ್ಯರನ್ನ ಮದುವೆ ಆಗುವುದು ಕಾಮನ್. ಆದರೆ ಶುಭಾ ಎಲ್ಲರಿಗಿಂತಲೂ ಭಿನ್ನ ಎನ್ನುವುದು ಅವರ ಅಭಿರುಚಿಯಲ್ಲಿ ತಿಳಿದು ಬರುತ್ತಿದೆ.
ಶುಭಾ ಅಭಿನಯದ 'ಮೊಗ್ಗಿನ ಮನಸ್ಸು' ಚಿತ್ರದಲ್ಲಿ ಹಾಡಿರುವಂತೆ ಒಂದಿಷ್ಟು ಕ್ವಾಲಿಟಿ ಇರುವ ಹುಡುಗನನ್ನೇ ಮದುವೆ ಆಗುವುದು ಅಂತ ಹೇಳಿದ್ದಾರೆ. ಹಾಗಾದರೆ ಅವರಿಗೆ ಎಂತಹ ಹುಡುಗ ಬೇಕು..? ಆತನಲ್ಲಿ ಏನೆಲ್ಲಾ ಕ್ವಾಲಿಟಿ ಇರಬೇಕು? ಎನ್ನುವುದರ ಬಗ್ಗೆ ವಿವರ ಮುಂದಿದೆ ಓದಿ..
ಹಸಮಣೆ ಏರಲಿದ್ದಾರೆ ಶುಭಾಪೂಂಜಾ
'ಮೊಗ್ಗಿನ ಮನಸ್ಸು' ಸಿನಿಮಾ ಮೂಲಕ ಮುದ್ದಾದ ನಾಯಕಿ ಅಂತಾನೇ ಗುರುತಿಸಿಕೊಂಡಿರುವ ನಟಿ ಶುಭಾ ಪೂಂಜಾ ಮದುವೆ ಆಗಲು ಮನಸ್ಸು ಮಾಡಿದ್ದಾರೆ. ಮುದ್ದಾದ ನಾಯಕಿಗೆ ಮನಸ್ಸಿನಲ್ಲಿರುವ ಆ ರಾಜಕುಮಾರನ ಬಗ್ಗೆ ಹೇಳಿಕೊಂಡಿದ್ದಾರೆ.
ಒಳ್ಳೆ ಮನಸ್ಸಿನ ಹುಡುಗ ಬೇಕು
ಶುಭಾ ತನ್ನ ಕನಸಿನ ಹುಡುಗನ ಬಗ್ಗೆ ಹೇಳಿಕೊಂಡಿದ್ದು ಹುಡುಗ ಕಪ್ಪಗಿದ್ದರು ಓಕೆ, ಆದರೆ ಒಳ್ಳೆ ಮನಸ್ಸಿರ ಬೇಕು ಎಂದು ತಿಳಿಸಿದ್ದಾರೆ.
ಹಳ್ಳಿ ಹೈದನನ್ನು ಮದುವೆ ಆಗಲು ರೆಡಿ
ಬೆಳ್ಳಿ ತೆರೆಯಲ್ಲಿ ನಾಯಕಿಯಾಗಿ ಮಿಂಚುತ್ತಿರುವ ಶುಭಾ ಪೂಂಜಾ ಹಳ್ಳಿ ಹುಡುಗನ್ನ ಮದುವೆ ಆಗಲು ಸಿದ್ಧವಾಗಿದ್ದಾರಂತೆ. ಮುಂದಿನ ದಿನಗಳಲ್ಲಿ ಹಳ್ಳಿಯಲ್ಲಿ ಜೀವನ ಮಾಡಲು ಸಿದ್ಧ ಇರಬೇಕು ಎಂದಿದ್ದಾರೆ. ಅಷ್ಟೇ ಅಲ್ಲದೆ ಹುಡುಗನಿಗೆ ಮಹಾತ್ವಾಕಾಂಕ್ಷೆಗಳು ಇರಬಾರದಂತೆ.
ಪ್ರಾಣಿಗಳನ್ನ ಪ್ರೀತಿ ಮಾಡಬೇಕು
ಈಗಾಗಲೇ ಸಾಕಷ್ಟು ಶ್ವಾನಗಳನ್ನು ಸಾಕಿರುವ ಅವರು ತಾವು ಕೈ ಹಿಡಿಯುವ ಹುಡುಗ ಕೂಡ ಪ್ರಾಣಿಗಳನ್ನು ಪ್ರೀತಿ ಮಾಡಬೇಕು ಎಂದು ಬಯಸಿದ್ದಾರೆ.
ಸಾಮಾನ್ಯ ಹುಡುಗ ಬೇಕು
ಸಿನಿಮಾಗಳಲ್ಲಿ ಮಾತ್ರವಲ್ಲದೆ ಶುಭಾ ನಿಜ ಜೀವನದಲ್ಲೂ ಎಲ್ಲರಿಗಿಂತಲೂ ವಿಭಿನ್ನ ಎನ್ನುವುದನ್ನು ತಿಳಿಸಿಕೊಟ್ಟಿದ್ದಾರೆ. ಚಿತ್ರರಂಗದಲ್ಲಿರುವ ಹುಡುಗ ಬೇಡ, ಸಿಂಪಲ್ ಆಗಿ ಜೀವನ ಸಾಗಿಸುವ ಹುಡುಗ ಸಿಕ್ಕರೆ ಅದೇ ಖುಷಿ ಅನ್ನುವುದನ್ನ ಈ ಮೂಲಕ ತಿಳಿಸಿದ್ದಾರೆ.