Don't Miss!
- News ವೃದ್ಧರ ಗೌಪ್ಯ ಮತದಾನ ವೇಳೆ ಅಕ್ರಮ: ಸಿಪಿಎಂ ಏಜೆಂಟ್ ಹಸ್ತಕ್ಷೇಪ: Video Viral
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸದ್ದಿಲ್ಲದೇ ವಿದೇಶಕ್ಕೆ ಹಾರುತ್ತಿದೆ ಕನ್ನಡದ 'ಶುದ್ಧಿ'
ಶೋಷಿತ ಸಮಾಜವನ್ನು ಶುದ್ಧೀಕರಿಸುವ ಹಿನ್ನೆಲೆಯಲ್ಲಿ 2016 ರಿಂದ ಹಲವು ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ತೆರೆಕಂಡಿವೆ. ಉತ್ತಮ ನಿರೂಪಣೆ, ಚಿತ್ರಕಥೆಯಲ್ಲಿ ಗಟ್ಟಿತನ ಇದ್ದರೇ ಯಾರು ಬೇಕಾದರೂ ಸಿನಿಮಾ ಮಾಡಿ ಗೆಲ್ಲಬಹುದು ಎಂಬುದನ್ನು ಹಲವು ಇತ್ತೀಚಿನ ಕನ್ನಡ ಸಿನಿಮಾಗಳು ಸಾಭೀತುಪಡಿಸಿವೆ. ಅಂತಹ ಸಿನಿಮಾಗಳ ಸಾಲಿನಲ್ಲಿ ಪ್ರೇಕ್ಷಕರ ಮನಗೆದ್ದ ಇತ್ತೀಚಿನ ಚಿತ್ರಗಳಲ್ಲಿ 'ಶುದ್ಧಿ' ಸಹ ಒಂದು.[ವಿಮರ್ಶೆ: ಶೋಷಿತ ಸಮಾಜವನ್ನು 'ಶುದ್ಧಿ'ಕರಿಸುವ ಮಹಿಳೆಯ ನಿಗೂಢ ಪಯಣ]
ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ಆದರ್ಶ್ ಎಚ್.ಈಶ್ವರಪ್ಪ ನಿರ್ದೇಶನದಲ್ಲಿ ಮೂಡಿಬಂದ 'ಶುದ್ಧಿ' ಚಿತ್ರವು ಅತ್ಯುತ್ತಮ ಮಹಿಳಾ ಪ್ರಧಾನ ಸಿನಿಮಾ. ಈ ಚಿತ್ರವು ಚೊಚ್ಚಲ ನಿರ್ದೇಶಕ ಆದರ್ಶ್ ಅವರಿಗೆ ಹೆಸರು ಗಳಿಕೆ ಜೊತೆಗೆ ಬಾಕ್ಸ್ ಆಫೀಸ್ ಗಳಿಕೆಯಲ್ಲೂ ಯಶಸ್ವಿ ನೀಡಿದೆ. ಇದೇ ಚಿತ್ರವೀಗ ಅಮೆರಿಕದಲ್ಲಿ ತೆರೆಕಾಣಲು ಸಜ್ಜಾಗಿದೆ.
ಅಮೆರಿಕ ಮೂಲದ ಲಾರೆನ್ ಸ್ಟಾರ್ಟನೊ ಮುಖ್ಯ ಭೂಮಿಕೆಯಲ್ಲಿನ ಅಭಿನಯ, ಹಾಲಿವುಡ್ ಮೂಲದ ಆಂಡ್ರೂ ಆಯಿಲೋ ಛಾಯಾಗ್ರಹಣ ಮತ್ತು ಜೆಸ್ಸಿ ಕ್ಲಿಂಟನ್ ಅವರ ಸಂಗೀತ ನಿರ್ದೇಶನ ಇರುವ 'ಶುದ್ಧಿ' ಬಹುತೇಕ ಹಾಲಿವುಡ್ ಶೈಲಿಯಲ್ಲಿಯೇ ಮೂಡಿಬಂದಿದ್ದು ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದೆ. ಹಾಗಾಗಿ ಈಗ ಅಮೆರಿಕದಲ್ಲಿ ಸಿನಿಮಾ ಪ್ರದರ್ಶನಕ್ಕೆ ಬೇಡಿಕೆ ಹೆಚ್ಚಿದ್ದು, ಅಲ್ಲಿನ ಖಾಸಗಿ ಸಂಸ್ಥೆಯೊಂದು ಚಿತ್ರ ಪ್ರದರ್ಶನ ಮಾಡಲು ಮುಂದಾಗಿದೆಯಂತೆ. ಆದ್ದರಿಂದ ನಿರ್ದೇಶಕ ಆದರ್ಶ್ ಎಚ್.ಈಶ್ವರಪ್ಪ ಏಪ್ರಿಲ್ 20 ರ ನಂತರ ಅಮೆರಿಕದ 40 ಪ್ರಮುಖ ಪ್ರದೇಶಗಳಲ್ಲಿ ಚಿತ್ರ ಪ್ರದರ್ಶನ ಮಾಡಲಿದ್ದು, ಯೂರೋಪ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಕೆಲವು ಕಡೆ ಸ್ಕ್ರೀನಿಂಗ್ ಮಾಡುವ ಯೋಜನೆ ಹೊಂದಿದ್ದಾರಂತೆ.[ಶುದ್ಧ ಸಮಾಜಕ್ಕಾಗಿ ಸಂದೇಶ ನೀಡಿದ 'ಶುದ್ಧಿ'ಗೆ ಬೆನ್ನುತಟ್ಟಿದ ವಿಮರ್ಶಕರು]
ನಿವೇದಿತಾ, ಲಾರೆನ್ ಸ್ಟಾರ್ಟನೊ, ಅಮೃತಾ ಕರಗದ ಅವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ಈ ಸಿನಿಮಾವನ್ನು ನಂದಿನಿ ಮಾದೇಶ್ ಮತ್ತು ಮಾದೇಶ್ ಟಿ ಭಾಸ್ಕರ್ ನಿರ್ಮಾಣ ಮಾಡಿದ್ದರು. ಮಾರ್ಚ್ 17 ರಂದು ತೆರೆಕಂಡಿರುವ ಈ ಚಿತ್ರನೋಡಿ ಸ್ಯಾಂಡಲ್ ವುಡ್ ನ ಹಲವು ನಟ-ನಟಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು.