'ಸರಿಗಪಮ' ಋತ್ಚಿಕ್ ಗೆ ಕಣ್ಣು ದಾನ ಮಾಡುತ್ತೇನೆಂದು ಬಳ್ಳಾರಿ ತಾತ ಹಠ
Recommended Video

ಕಿರುತೆರೆಯ ಸರಿಗಮಪ ಕಾರ್ಯಕ್ರಮದಲ್ಲಿ ಇರುವ ಸ್ಪರ್ಧಿಗಳ ಪೈಕಿ ಗಮನ ಸೆಳೆದಿರುವವರಲ್ಲಿ ಋತ್ವಿಕ್ ಸಹ ಒಬ್ಬರು. ಋತ್ವಿಕ್ ಒಬ್ಬ ಅಂಧ ಎನ್ನುವ ಕಾರಣಕ್ಕೆ ಎಲ್ಲರೂ ಅವರ ಬಗ್ಗೆ ಅನುಕಂಪ ತೋರುವುದಿಲ್ಲ. ಯಾಕಂದ್ರೆ, ಅವರ ಹಾಡು ಅವರಿಗೆ ಇರುವ ನ್ಯೂನತೆಯನ್ನು ಮರೆಸಿ ಬಿಡುತ್ತದೆ.
ಪ್ರತಿ ವಾರ ಋತ್ವಿಕ್ ಹಾಡುವ ಹಾಡು ಎಲ್ಲರಿಗೂ ಇಷ್ಟ ಆಗುತ್ತದೆ. ಕಾರ್ಯಕ್ರಮದ ತೀರ್ಪುಗಾರರು ಸಹ ಋತ್ವಿಕ್ ಗಾಯನವನ್ನು ಹೋಗಳುತ್ತಾರೆ. ಆದರೆ, ಇದೀಗ ಋತ್ವಿಕ್ ಹಾಡು ಕೇಳಿ ಇಷ್ಟ ಪಟ್ಟಿರುವ ಒಬ್ಬ ತಾತ ಅವರಿಗೆ ಕಣ್ಣು ದಾನ ಮಾಡಲು ಮುಂದೆ ಬಂದಿದ್ದಾರೆ.

ಬಳ್ಳಾರಿಯ ಕೊಟ್ಟುರು ಗ್ರಾಮದ ಸಿದ್ಧಲಿಂಗನಗೌಡ ಎಂಬ ತಾತ ಋತ್ವಿಕ್ ಹಾಡು ಕೇಳಿ ಮನಸೊತಿದ್ದಾರೆ. 74 ವರ್ಷದ ಅಜ್ಜ ಋತ್ವಿಕ್ ಗೆ ನೇತ್ರದಾನ ಮಾಡಲು ಹಠ ಮಾಡುತ್ತಿದ್ದಾರೆ.
ಋತ್ವಿಕ್ ಹಾಡನ್ನು ಬಹಳ ಇಷ್ಟ ಪಟ್ಟು ಕೇಳುವ ಸಿದ್ಧಲಿಂಗನಗೌಡ ತಾತ ನಾನು ಸತ್ತ ಮೇಲೆ ನನ್ನ ಕಣ್ಣು ಋತ್ವಿಕ್ ಗೆ ನೀಡುತ್ತೇನೆ ಎಂದಿದ್ದಾರೆ. ಈಗಾಗಲೇ ಈ ತಾತ ತಮ್ಮ ದೇಹ ಹಾಗೂ ಕಣ್ಣುಗಳನ್ನು ಬಳ್ಳಾರಿಯ ಆಸ್ಪತ್ರೆಗೆ ಬರೆದುಕೊಟ್ಟಿದ್ದಾರಂತೆ.


Click it and Unblock the Notifications











