2019 ಸೈಮಾ: ದರ್ಶನ್-ಪುನೀತ್ ಚಿತ್ರಗಳ ನಡುವೆ ನೇರ ಪೈಪೋಟಿ
2019-20ನೇ ಸಾಲಿನ ಸೈಮಾ ಪ್ರಶಸ್ತಿ ಸಮಾರಂಭ ಸೆಪ್ಟೆಂಬರ್ 18 ಹಾಗೂ 19 ರಂದು ಹೈದರಾಬಾದ್ನಲ್ಲಿ ನಡೆಯಲಿದೆ. 2019ನೇ ಸಾಲಿನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಯಜಮಾನ ಸಿನಿಮಾ ಅತಿ ಹೆಚ್ಚು ವಿಭಾಗದಲ್ಲಿ ನಾಮಿನೇಟ್ ಆಗಿದೆ ಎನ್ನುವ ವಿಚಾರ ಬಹಿರಂಗವಾಗಿತ್ತು. ಇದೀಗ, ಯಜಮಾನ ಚಿತ್ರದ ಜೊತೆಗೆ ಯಾವ ಯಾವ ಸಿನಿಮಾಗಳು ಹಾಗೂ ಸೆಲೆಬ್ರಿಟಿಗಳು ಸ್ಪರ್ಧೆಯಲ್ಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
2019ನೇ ಸಾಲಿನ ಕನ್ನಡ ವಿಭಾಗದಲ್ಲಿ ಯಾವೆಲ್ಲ ಚಿತ್ರಗಳು ರೇಸ್ನಲ್ಲಿ, ಯಾವ ವಿಭಾಗಗಳಲ್ಲಿ ನಾಮಿನೇಷನ್ ಆಗಿವೆ ಎಂದು ಸ್ವತಃ ಸೈಮಾ ಅಧಿಕೃತ ವೆಬ್ಸೈಟ್ ಪ್ರಕಟಿಸಿದೆ.
ಸೈಮಾ ಅತ್ಯುತ್ತಮ ಸಿನಿಮಾ, ನಟ-ನಟಿ, ನಿರ್ದೇಶಕ, ಗೀತೆರಚನೆಕಾರ, ಸಂಗೀತ ನಿರ್ದೇಶಕ, ಗಾಯಕ, ಗಾಯಕಿ, ಖಳನಾಯಕ, ಪೋಷಕ ನಟ-ನಟಿ ಸೇರಿದಂತೆ ಹಲವು ವಿಭಾಗಗಳಲ್ಲಿ ನಾಮಿನೇಟ್ ಆಗಿರುವ ಕಲಾವಿದರ ಪಟ್ಟಿ ಇಲ್ಲಿದೆ. ಇವರಲ್ಲಿ ಯಾರು ಗೆಲ್ಲಬೇಕು ಎಂದು ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮೂಲಕ ತಿಳಿಸಬಹುದು. ಮುಂದೆ ಓದಿ...

ಅತ್ಯುತ್ತಮ ಸಿನಿಮಾ ವಿಭಾಗ
- ಯಜಮಾನ
- ಬೆಲ್ ಬಾಟಮ್
- ನಟಸಾರ್ವಭೌಮ
- ಭರಾಟೆ
- ಅವನೇ ಶ್ರೀಮನ್ನಾರಾಯಣ

ಅತ್ಯುತ್ತಮ ನಿರ್ದೇಶಕ
- ಚೇತನ್ ಕುಮಾರ್ (ಭರಾಟೆ)
- ಜಯತೀರ್ಥ (ಬೆಲ್ ಬಾಟಮ್)
- ಹೇಮಂತ್ ರಾವ್ (ಕವಲುದಾರಿ)
- ಪವನ್ ಒಡೆಯರ್ (ನಟಸಾರ್ವಭೌಮ)
- ಹರಿಕೃಷ್ಣ- ಪೊನ್ ಕುಮಾರ್ (ಯಜಮಾನ)

ಅತ್ಯುತ್ತಮ ನಟ
- ದರ್ಶನ್ (ಯಜಮಾನ)
- ಪುನೀತ್ ರಾಜ್ ಕುಮಾರ್ (ನಟಸಾರ್ವಭೌಮ)
- ರಿಷಿ (ಕವಲುದಾರಿ)
- ಶ್ರೀಮುರಳಿ (ಭರಾಟೆ)
- ರಕ್ಷಿತ್ ಶೆಟ್ಟಿ (ಅವನೇ ಶ್ರೀಮನ್ನಾರಾಯಣ)

ಅತ್ಯುತ್ತಮ ನಟಿ
- ರಶ್ಮಿಕಾ ಮಂದಣ್ಣ (ಯಜಮಾನ)
- ಶಾನ್ವಿ ಶ್ರೀವಸ್ತವ್ (ಅವನೇ ಶ್ರೀಮನ್ನಾರಾಯಣ)
- ರಾಧಿಕಾ ಚೇತನ್ (ಮುಂದಿನ ನಿಲ್ದಾಣ)
- ಅನುಪಮಾ ಪರಮೇಶ್ವರನ್ (ನಟಸಾರ್ವಭೌಮ)
- ರಚಿತಾ ರಾಮ್ (ಆಯುಷ್ಮಾನ್ಭವ)

ಅತ್ಯುತ್ತಮ ಪೋಷಕ ನಟ
- ಪಿಡಿ ಸತೀಶ್ ಚಂದ್ರ (ಬೆಲ್ ಬಾಟಮ್)
- ದೇವರಾಜ್ (ಯಜಮಾನ)
- ಅಜಯ್ ರಾಜ್ (ಮುಂದಿನ ನಿಲ್ದಾಣ)
- ಪ್ರಮೋದ್ ಶೆಟ್ಟಿ (ಅವನೇ ಶ್ರೀಮನ್ನಾರಾಯಣ)
- ರವಿಶಂಕರ್ ಗೌಡ (99)

ಅತ್ಯುತ್ತಮ ಪೋಷಕ ನಟಿ
- ನಿಧಿ ಸುಬ್ಬಯ್ಯ (ಆಯುಷ್ಮಾನ್ ಭವ)
- ಕಾವ್ಯ ಶಾ (ಮೂಕಜ್ಜಿಯ ಕನಸುಗಳು)
- ಸೋನು ಗೌಡ (ಐ ಲವ್ ಯೂ)
- ಕಾರುಣ್ಯ ರಾಮ್ (ಮನೆ ಮಾರಾಟಕ್ಕಿದೆ)
- ತಾನ್ಯ ಹೋಪ್ (ಯಜಮಾನ)

ಅತ್ಯುತ್ತಮ ಸಂಗೀತ ನಿರ್ದೇಶಕ
- ಅರ್ಜುನ್ ಜನ್ಯ (ಭರಾಟೆ)
- ಹರಿಕೃಷ್ಣ (ಯಜಮಾನ)
- ಅಜನೀಶ್ ಲೋಕನಾಥ್-ಚರಣ್ ರಾಜ್ (ಅವನೇ ಶ್ರೀಮನ್ನಾರಾಯಣ)
- ಡಿ ಇಮ್ಮನ್ (ನಟಸಾರ್ವಭೌಮ)
- ಚರಣ್ ರಾಜ್ (ಕವಲುದಾರಿ)

ಅತ್ಯುತ್ತಮ ಹಿನ್ನೆಲೆ ಗಾಯಕ
- ಅರ್ಮಾನ್ ಮಲ್ಲಿಕ್ (ನಿನ್ನ ರಾಜ ನಾನು-ಸೀತಾರಾಮ ಕಲ್ಯಾಣ)
- ವಿಜಯ್ ಪ್ರಕಾಶ್ (ಏತಕೇ ಬೊಗಸೆ ತುಂಬಾ- ಬೆಲ್ ಬಾಟಮ್)
- ಸಂತೋಷ್ ವೆಂಕಿ, ಕಾಲಭೈರವ (ಶಿವನಂದಿ-ಯಜಮಾನ)
- ಸಂಚಿತ್ ಹೆಗ್ಡೆ (ಮರೆತು ಹೋಯಿತೆ-ಅಮರ್)
- ವಾಸುಕಿ ವೈಭವ್ (ಇನ್ನುನು ಬೇಕಾಗಿದೆ-ಮುಂದಿನ ನಿಲ್ದಾಣ)

ಅತ್ಯುತ್ತಮ ಹಿನ್ನಲೆ ಗಾಯಕಿ
- ಶ್ರೇಯಾ ಘೋಷಲ್ (ನೀನೆ ಮೊದಲು-ಕಿಸ್)
- ವರ್ಷ ಬಿ ಸುರೇಶ್ (ಬಸಣ್ಣಿ ಬಾ-ಯಜಮಾನ)
- ಅನುರಾಧ ಭಟ್ (ಹೃದಯ-ಐ ಲವ್ ಯೂ)
- ಮಾನಸ ಹೊಳ್ಳಾ (ಬಂದಂತೆ ರಾಜಕುಮಾರ-ಭರಾಟೆ)
- ಅನನ್ಯ ಭಟ್ (ಹೇಳದೆ ಕೇಳದೆ-ಗೀತಾ)

ಅತ್ಯುತ್ತಮ ಗೀತೆ ರಚನೆಕಾರ
- ಕೆ ಕಲ್ಯಾಣ್ (ಮರೆತು ಹೋಯಿತೆ- ಅಮರ್)
- ಯೋಗರಾಜ್ ಭಟ್ (ಏತಕೇ ಬೊಗಸೆ ತುಂಬಾ- ಬೆಲ್ ಬಾಟಮ್)
- ವಿ ಸಾಯಿ ಸುಕನ್ಯ (ನಿನ್ನ ರಾಜ ನಾನು-ಸೀತಾರಾಮ ಕಲ್ಯಾಣ)
- ಎಪಿ ಅರ್ಜುನ್ (ನೀನೆ ಮೊದಲು-ಕಿಸ್)
- ಪವನ್ ಒಡೆಯರ್ (ನಟಸಾರ್ವಭೌಮ ಟೈಟಲ್ ಸಾಂಗ್)


Click it and Unblock the Notifications











