Don't Miss!
- News ಈ ವರ್ಷ ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೇ ಕೇಳೋದು ಬಹಳ ಐತಿ; ಮಳೆ,ಬೆಳೆಯ ಕುರಿತು ಬಸವೇಶ್ವರ ಕಾರ್ಣಿಕ ಹೇಳಿದ್ದೇನು?
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿರ್ಮಾಪಕರು ಕೊಟ್ಟಿದ್ದ ಚೆಕ್ ಬೌನ್ಸ್: ಕೋರ್ಟ್ ಮೆಟ್ಟಿಲೇರಿದ ನಟಿ ಸಿಂಧು ಲೋಕನಾಥ್
ಮೂರು ವರ್ಷಗಳ ನಂತರ ನಟಿ ಸಿಂಧು ಲೋಕನಾಥ್ ಬಣ್ಣ ಹಚ್ಚಿದ್ದು 'ಹೀಗೊಂದು ದಿನ' ಚಿತ್ರಕ್ಕಾಗಿ. ಮದುವೆ ಆದ ಬಳಿಕ ಬಿಡುಗಡೆ ಆದ ಸಿಂಧು ಲೋಕನಾಥ್ ರವರ ಮೊದಲ ಸಿನಿಮಾ 'ಹೀಗೊಂದು ದಿನ'.
'ಹೀಗೊಂದು ದಿನ' ಮಹಿಳಾ ಪ್ರಧಾನ ಚಿತ್ರವಾಗಿದ್ದು, ಇದರಲ್ಲಿ ಸಿಂಧು ಲೋಕನಾಥ್ ಜಾನವಿ ಎಂಬ ಹುಡುಗಿಯ ಪಾತ್ರ ನಿರ್ವಹಿಸಿದ್ದರು. 'ಅನ್ ಕಟ್' ಸಿನಿಮಾ ಬೇರೆ ಆಗಿದ್ದರಿಂದ, ಇದಕ್ಕಾಗಿ ಪೂರ್ವ ತಯಾರಿ ಕೂಡ ಮಾಡಿಕೊಂಡಿದ್ದರು.
ಸಂದರ್ಶನ: 'ಹೀಗೊಂದು ದಿನ'ದಲ್ಲಿ 'ರೆಬೆಲ್' ಆದ ಸಿಂಧು ಲೋಕನಾಥ್
ವಿಕ್ರಂ ಯೋಗಾನಂದ್ ನಿರ್ದೇಶನ ಮಾಡಿದ ಪ್ರಯೋಗಾತ್ಮಕ ಚಿತ್ರವಾಗಿದ್ದ 'ಹೀಗೊಂದು ದಿನ' ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಲಿಲ್ಲ. ಹಾಗೇ, ನಾಯಕಿ ಸಿಂಧು ಲೋಕನಾಥ್ ಗೆ ಬರಬೇಕಿದ್ದ ಸಂಭಾವನೆ ಕೂಡ ಬಂದಿಲ್ಲ.
ಹೌದು, ನಟಿ ಸಿಂಧು ಲೋಕನಾಥ್ ಗೆ ಕೊಡಬೇಕಿದ್ದ ಸಂಭಾವನೆಯಲ್ಲಿ ನಿರ್ಮಾಪಕರು ಎರಡು ಲಕ್ಷ ರೂಪಾಯಿ ಬಾಕಿ ಉಳಿಸಿಕೊಂಡಿದ್ದರು. ಅದಕ್ಕಾಗಿ ಚೆಕ್ ಕೊಟ್ಟಿದ್ದರು. ಆದ್ರೆ, ನಿರ್ಮಾಪಕ ದಿವ್ಯದೃಷ್ಟಿ ಚಂದ್ರಶೇಖರ್ ಕೊಟ್ಟಿದ್ದ ಎರಡು ಲಕ್ಷ ರೂಪಾಯಿ ಚೆಕ್ ಬೌನ್ಸ್ ಆಗಿದೆ.
ಹೀಗಾಗಿ, 'ಹೀಗೊಂದು ದಿನ' ನಿರ್ಮಾಪಕರ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿ, ಕೋರ್ಟ್ ಮೆಟ್ಟಿಲೇರಿದ್ದಾರೆ ನಟಿ ಸಿಂಧು ಲೋಕನಾಥ್.