ಗಾಯಕಿ ಅನನ್ಯ ಭಟ್ ನೆಚ್ಚಿನ ವ್ಯಕ್ತಿಗೆ ಕೊಟ್ಟಿದ್ದೇನು.?
ಸ್ಯಾಂಡಲ್ ವುಡ್ ಗಾಯಕಿ ಅನನ್ಯ ಭಟ್ ಅಂದ್ರೆನೇ ಅದೇಷ್ಟೋ ಜನಕ್ಕೆ ಫೇವರೆಟ್. ಆದ್ರೆ, ಅನನ್ಯ ಭಟ್ ಗೆ ನೆಚ್ಚಿನ ವ್ಯಕ್ತಿ ಯಾರು ಎಂಬ ಕುತೂಹಲ ಕಾಡುವುದು ಸಹಜ.
ಈ ಇಂಟ್ರೆಸ್ಟಿಂಗ್ ವಿಷ್ಯವನ್ನ ಅನನ್ಯ ಭಟ್ ಫಿಲ್ಮಿಬೀಟ್ ಕನ್ನಡದಲ್ಲಿ ಪ್ರಸಾರವಾಗುವ 'ಸಖತ್ ಶುಕ್ರವಾರ' ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.
ಅದಕ್ಕೂ ಮೊದಲೂ ಕೆಲವು ವ್ಯಕ್ತಿಗಳು ಈಗಿರುವ ವೃತ್ತಿಯಲ್ಲಿ ಇಲ್ಲವಾಗಿದ್ದರೇ ಬೇರೆ ಕೆಲಸ ಮಾಡ್ತಿದ್ದರು ಎಂದು ಕೇಳಿದ ಪ್ರಶ್ನೆಗೆ ಅನನ್ಯ ಭಟ್ ಉತ್ತರಿಸಿದರು. ಅರ್ಜುನ್ ಜನ್ಯ, ರಕ್ಷಿತ್ ಶೆಟ್ಟಿ, ಸುದೀಪ್, ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್ ಅವರ ಹೆಸರು ಮುಂದಿಟ್ಟಾಗ ಅವರ ಏನಾಗಿರುತ್ತಿದ್ದರು ಎಂದು ಹೇಳಿದರು.

ಇದಾದ ನಂತರ ಯಾರಿಗೆ ಸ್ಮೈಲಿ ಕೊಡ್ತೀರಾ.? ಯಾರಿಗೆ ಮಿಸ್ಟರ್ ಕೂಲ್ ಅಂತೀರಾ.? ಯಾರಿಗೆ ಲವ್ ಹೇಳ್ತೀರಾ ಎಂದು ಕೇಳಿದಕ್ಕೆ ಪುನೀತ್ ರಾಜ್ ಕುಮಾರ್, ವಾಸುಕಿ ವೈಭವ್, ಅರವಿಂದ್ ಅಯ್ಯರ್ ಹೆಸರು ಸೂಚಿಸಿದರು. ಈ ವೇಳೆ ಪುನೀತ್ ನನ್ನ ನೆಚ್ಚಿನ ವ್ಯಕ್ತಿ ಅಂದ್ರು, ಆದ್ರೆ ಅವರಿಗೆ ಕೊಟ್ಟಿದ್ದೇನು ಎಂಬುದನ್ನ ವಿಡಿಯೋದಲ್ಲಿ ನೋಡಿ.
ಗಾಯನದ ಜೊತೆಗೆ ಅನನ್ಯ ಭಟ್ ಫ್ಯಾಶನ್ ಡಿಸೈನರ್ ಹಾಗೂ ಆಯುರ್ವೇದಿಕ್ ಡಾಕ್ಟರ್ ಕೂಡ ಹೌದು. 'ಸಖತ್ ಶುಕ್ರವಾರ' ಕಾರ್ಯಕ್ರಮಕ್ಕಾಗಿ ಅನನ್ಯ ಭಟ್ ನೀಡಿರುವ ಸಂದರ್ಶನದ ಮೂರನೇ ಭಾಗ ಇಲ್ಲಿದೆ, ನೋಡಿರಿ...


Click it and Unblock the Notifications











