ದುನಿಯಾ ವಿಜಿ 'ಮಾಸ್ತಿ ಗುಡಿ'ಯಲ್ಲಿ ಸಿ ಅಶ್ವಥ್ ಗಾಯನದ ಕಂಪು
ನಟ ಕಮ್ ನಿರ್ದೇಶಕ ನಾಗಶೇಖರ್ ಅವರು ಸಿ.ಅಶ್ವಥ್ ಅವರ ಕಟ್ಟಾ ಅಭಿಮಾನಿ ಎಂಬ ವಿಚಾರ ನಿಮಗೆ ಗೊತ್ತೇ ಇದೆ. ನಾಗಶೇಖರ್ ಅವರು ಸಿ.ಅಶ್ವಥ್ ಅವರ ಹಾಡುಗಳನ್ನು ಹಾಡುವುದು ಮಾತ್ರವಲ್ಲದೇ, ತಮ್ಮ ಚಿತ್ರಕ್ಕೆ ಕೂಡ ಬಳಸಿಕೊಳ್ಳುತ್ತಾರೆ.
ಈ ಮೊದಲು 'ಮೈನಾ' ಸಿನಿಮಾದಲ್ಲಿ ಅಶ್ವಥ್ ಅವರು ಹಾಡಿರುವ 'ಕಾಣದ ಕಡಲಿಗೆ ಹಂಬಲಿಸಿದೆ ಮನ' ಎಂಬ ಹಾಡನ್ನು ಬಳಸಿಕೊಂಡಿದ್ದರು. ಗಾಂಧಿನಗರದಲ್ಲಿ ಆ ಹಾಡು ಮಾತ್ರವಲ್ಲದೇ, ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು.[ಚಿತ್ರಗಳು: ವಿಜಿ 'ಮಾಸ್ತಿ ಗುಡಿ'ಗೆ ಅಮ್ಮಂದಿರಿಂದ ಮುಹೂರ್ತ]

ಇದೀಗ ಹೊಸ ಸುದ್ದಿ ಏನಪ್ಪಾ ಅಂದ್ರೆ ನಾಗಶೇಖರ್ ಅವರು ದುನಿಯಾ ವಿಜಯ್ ಅವರೊಂದಿಗೆ ಮಾಡುತ್ತಿರುವ 'ಮಾಸ್ತಿ ಗುಡಿ' ಚಿತ್ರಕ್ಕೂ ಅಶ್ವಥ್ ಅವರ ಜನಪ್ರಿಯ ಗೀತೆಯೊಂದನ್ನು ಬಳಸಿಕೊಳ್ಳಲು ತಯಾರಾಗಿದ್ದಾರೆ.[75ರ ಮುದುಕನ ಪಾತ್ರದಲ್ಲಿ ದುನಿಯಾ ವಿಜಿ ಮಿಂಚಿಂಗು]
ಸಿ ಅಶ್ವಥ್ ಅವರು ಹಾಡಿರುವ 'ಒಳಿತು ಮಾಡು ಮನುಸ' ಹಾಡನ್ನು ದುನಿಯಾ ವಿಜಯ್ ಅವರ 'ಮಾಸ್ತಿ ಗುಡಿ' ಚಿತ್ರಕ್ಕೆ ನಿರ್ದೇಶಕ ನಾಗಶೇಖರ್ ಅವರು ಈ ಬಾರಿ ಬಳಸಿಕೊಂಡಿದ್ದಾರೆ. ಇನ್ನು ಈ ಹಾಡನ್ನು ಚಿತ್ರಕ್ಕೆ ಬಳಸಿಕೊಂಡಿರುವ ಬಗ್ಗೆ ನಾಗಶೇಖರ್ ಅವರೇ ಇತ್ತೀಚೆಗೆ ಹೇಳಿಕೊಂಡಿದ್ದಾರೆ.

'ಒಳಿತು ಮಾಡು ಮನುಸ' ಹಾಡು ಬರೀ ಅರ್ಥಪೂರ್ಣವಾಗಿರುವುದಷ್ಟೇ ಅಲ್ಲ, ನಮ್ಮ ಚಿತ್ರದ ಸನ್ನಿವೇಶಗಳಿಗೆ ಹೇಳಿ ಮಾಡಿಸಿದಂತಿದೆ. ಅದೇ ಕಾರಣಕ್ಕಾಗಿ ಈ ಹಾಡನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ನಾಗಶೇಖರ್ ನುಡಿದಿದ್ದಾರೆ.
ಈ ಹಿಂದೆ 'ಮೈನಾ' ಚಿತ್ರಕ್ಕೆ ಅಶ್ವಥ್ ಅವರ ಹಾಡನ್ನು ಬಳಸಿಕೊಂಡಾಗ, ತಮ್ಮ ಅನುಮತಿ ಇಲ್ಲದೆ ಹಾಡನ್ನು ಬಳಸಿಕೊಳ್ಳಲಾಗಿದೆ ಎಂದು ಲಹರಿ ವೇಲು ಅವರು ಕಿರಿಕ್ ಮಾಡಿದ್ದರು.
ಈ ಬಾರಿ ಪೂರ್ವ ಅನುಮತಿ ಪಡೆದುಕೊಂಡು ಈ ಹಾಡನ್ನು ಬಳಸಿಕೊಳ್ಳುತ್ತಿರುವುದರಿಂದ ಅಂತಹ ಸಮಸ್ಯೆ ಏನೂ ಆಗುವುದಿಲ್ಲ ಎಂದು ನಿರ್ದೇಶಕ ನಾಗಶೇಖರ್ ಅವರೇ ಹೇಳಿದ್ದಾರೆ.


Click it and Unblock the Notifications











