Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಾಯಕನಾಗಲು ಸಜ್ಜಾದ ಗಾಯಕ ನವೀನ್ ಸಜ್ಜು
ಕೊರೊನಾ ಲಾಕ್ಡೌನ್ ನಂತರ ಕನ್ನಡ ಚಿತ್ರರಂಗ ನಿಧಾನಕ್ಕೆ ಮರಳಿ ಗರಿಗೆದರುತ್ತಿದೆ. ಹೊಸ ಚೈತನ್ಯದೊಂದಿಗೆ ಚಿತ್ರತಂಡಗಳು ಸಿನಿಮಾ ಕಾಯಕದಲ್ಲಿ ತೊಡಗಿಕೊಳ್ಳುತ್ತಿವೆ.
ಹೊಸಬರು ಹೊಸ ಹುರುಪಿನೊಂದಿಗೆ ಸಿನಿಮಾ ಕಟ್ಟಲು ಪ್ರಾರಂಭಿಸುತ್ತಿದ್ದಾರೆ. ಹೊಸ ಮುಖಗಳು ಸಿನಿಮಾ ನಾಯಕರಾಗಲು ಸಜ್ಜಾಗುತ್ತಿದ್ದಾರೆ. ಅದರಲ್ಲಿ ಗಾಯಕ, ಮಾಜಿ ಬಿಗ್ಬಾಸ್ ಸ್ಪರ್ಧಿ ನವೀನ್ ಸಜ್ಜು ಸಹ ಒಬ್ಬರು.
ನವೀನ್ ಸಜ್ಜು ಕೈಯಲ್ಲಿ ಮತ್ತೆ ಎಣ್ಣೆ ಬಾಟ್ಲು: ಸೌಂಡ್ ಮಾಡ್ತಿದೆ ಕುಡುಕರ ಸಾಂಗು.!
ಆರ್ಕೇಸ್ಟ್ರಾ ಗಾಯಕರಾಗಿದ್ದ ನವೀನ್ ಸಜ್ಜು ಸಿನಿಮಾ ಗಾಯಕ, ಸಂಗೀತ ನಿರ್ದೇಶಕ ಆಗಿದ್ದೇ ಒಂದೊಳ್ಳೆ ಕತೆ, ಈಗ ಮತ್ತೊಂದು ಹೆಜ್ಜೆ ಮುಂದಿಟ್ಟು ಸಿನಿಮಾ ನಾಯಕನಾಗಲು ಹೊರಟಿದ್ದಾರೆ.
ಲೂಸಿಯಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶ
ಹೌದು, ಪವನ್ ಕುಮಾರ್ ನಿರ್ದೇಶನದ ಲೂಸಿಯಾ ಸಿನಿಮಾ ಮೂಲಕ ಹಿನ್ನೆಲೆ ಗಾಯಕನಾಗಿ ಚಿತ್ರರಂಗಕ್ಕೆ ಪರಿಚಿತಗೊಂಡ ನವೀನ್ ಸಜ್ಜು, ಆ ನಂತರ ಭರವಸೆಯ ಗಾಯಕರಾಗಿ ಬೆಳೆದರು. ಈಗ ಸಿನಿಮಾ ಒಂದಕ್ಕೆ ನಾಯಕರಾಗಿದ್ದಾರೆ ನವೀನ್ ಸಜ್ಜು.
ಸ್ಕ್ರಿಪ್ಟ್ ಪೂಜೆ ಮುಗಿಸಿರುವ ಚಿತ್ರತಂಡ
ಹೌದು, ನವೀನ್ ಸಜ್ಜು ನಾಯಕರಾಗುತ್ತಿದ್ದಾರೆ. ಈಗಾಗಲೇ ಕತೆಗೆ ಓಕೆ ಎಂದಿದ್ದು, ಸ್ಕ್ರಿಪ್ಟ್ ಪೂಜೆ ಸಹ ಮುಗಿಸಿದ್ದಾರೆ. ಉಳಿದ ತಾರಾಗಣ ಅಂತಿಮವಾಗಬೇಕಿದ್ದು, ಅದರ ನಂತರ ಚಿತ್ರೀಕರಣ ಪ್ರಾರಂಭವಾಗಲಿದೆ.
ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ನಿರ್ದೇಶಕ ಕುಮಾರ್
ಕೆಮಿಸ್ಟ್ರಿ ಆಫ್ ಕರಿಯಪ್ಪ ಸಿನಿಮಾ ಮೂಲಕ ಭರವಸೆ ಮೂಡಿಸಿರುವ ನಿರ್ದೇಶಕ ಕುಮಾರ್ ನಿರ್ದೇಶನದ ಸಿನಿಮಾದಲ್ಲಿ ನವೀನ್ ಸಜ್ಜು ನಾಯಕರಾಗುತ್ತಿದ್ದಾರೆ. ಈ ಭಾರಿ ಭಿನ್ನ ಕತೆಯೊಂದಿಗೆ ಬರುತ್ತಿದ್ದಾರಂತೆ ನಿರ್ದೇಶಕ ಕುಮಾರ್.
Recommended Video
ಲಾಕ್ಡೌನ್ ಕಾರಣ ಚಿತ್ರೀಕರಣ ತಡವಾಗಿ ಆರಂಭವಾಗುತ್ತಿದೆ
ಬಿಗ್ಬಾಸ್ ರನರ್ಅಪ್ ಆಗಿದ್ದ ನವೀನ್ ಸಜ್ಜು, ಬಿಗ್ಬಾಸ್ ನಿಂದ ಹೊರಗೆ ಬಂದಾಗಲೆ ಕೆಲವು ಕತೆಗಳನ್ನು ಕೇಳಿದ್ದರು. ಆದರೆ ಕೊನೆಗೆ ಕುಮಾರ್ ಅವರ ಕತೆಗೆ ಓಕೆ ಹೇಳಿದ್ದಾರೆ. ಲಾಕ್ಡೌನ್ ಆದ್ದರಿಂದ ಚಿತ್ರೀಕರಣ ತಡವಾಗಿ ಆರಂಭವಾಗುತ್ತಿದೆ.