Don't Miss!
- News ಹಾಸನ ಪೆನ್ಡ್ರೈವ್ ಪ್ರಕರಣ: ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಮಹಿಳಾ ಆಯೋಗ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿಡಿಯೋ ಕಾಲ್ನಲ್ಲಿ ವಿಜಿ ತಾಯಿಯ ನೆಚ್ಚಿನ ಹಾಡು ಹಾಡಿದ್ದ ನವೀನ್ ಸಜ್ಜು
ಕನ್ನಡದ ನಟ-ನಿರ್ದೇಶಕ ದುನಿಯಾ ವಿಜಯ್ ತಾಯಿ ನಾರಾಯಣಮ್ಮ ಕೊನೆಯುಸಿರೆಳೆದಿದ್ದಾರೆ. ಕಳೆದ 20ಕ್ಕೂ ಅಧಿಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವಿಜಿ ತಾಯಿ ಜೂನ್ 8 ರಂದು ನಿಧನರಾದರು.
Recommended Video
ವಿಜಯ್ ತಾಯಿ ನಾರಾಯಣಮ್ಮ ಅವರಿಗೆ 'ಒಳಿತು ಮಾಡು ಮನುಷಾ.....' ಹಾಡಂದ್ರೆ ಬಹಳ ಇಷ್ಟವಂತೆ. ಅದರಲ್ಲೂ ನವೀನ್ ಸಜ್ಜು ಕಂಠದಲ್ಲಿ ಕೇಳುವುದು ಹೆಚ್ಚು ಖುಷಿ ಕೊಡುತ್ತಂತೆ.
'ಸಾವಿರ ದೇವರಿಗೂ ಮಿಗಿಲಿವಳು ನಮ್ಮಮ್ಮ': ತಾಯಿಯಲ್ಲಿ ದೇವರ ಕಂಡಿದ್ದ ವಿಜಯ್
ವಿಜಯ್ ಅವರ ತಾಯಿ ಕೋಮಾ ಪರಿಸ್ಥಿತಿಯಲ್ಲಿರುವಾಗ ನವೀನ್ ಸಜ್ಜು ಅವರು ವಿಡಿಯೋ ಕಾಲ್ ಮೂಲಕ 'ಒಳಿತು ಮಾಡು ಮನುಷಾ.....' ಹಾಡು ಹಾಡುವ ಮೂಲಕ ನಾರಾಯಣಮ್ಮರಿಗೆ ಖುಷಿ ಪಡಿಸಿದ್ದರು.
ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾ ವೈರಲ್ ಆಗಿದೆ. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ವಿಜಯ್ ಅವರ ತಾಯಿ ಕೊನೆ ಕ್ಷಣದಲ್ಲಿ ಖುಷಿಯಾಗಿರಬೇಕು ಎಂಬ ಕಾರಣಕ್ಕೆ ಅವರ ಆಸೆಯೊಂದನ್ನು ಪೂರೈಸಿದ್ದರು.
ಆನೇಕಲ್ ಹುಟ್ಟೂರಿನಲ್ಲಿ ಅಂತ್ಯ ಸಂಸ್ಕಾರ
ದುನಿಯಾ ವಿಜಯ್ ತಾಯಿಯ ಅಂತ್ಯಕ್ರಿಯೆಯನ್ನು ಅನೇಕಲ್ ಬಳಿಯಿರುವ ಹುಟ್ಟೂರು ಕುಂಬಾರಹಳ್ಳಿಯಲ್ಲಿ ನೆರವೇರಿಸಲಾಗುವುದು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ದುನಿಯಾ ವಿಜಯ್ ''ತಮ್ಮ ತಾಯಿಯ ಆಸೆಯಂತೆ ಹುಟ್ಟೂರಿನಲ್ಲಿಯೇ ಅಂತ್ಯ ಸಂಸ್ಕಾರ ಮಾಡಲಾಗುತ್ತಿದೆ. ಕಾಶಿ ಅಂದ್ರೆ ಅವರಿಗೆ ಇಷ್ಟ. ಹಾಗಾಗಿ, ಕಾಶಿಯಿಂದ ಗಂಗಾಜಲ ತರಿಸಿದ್ವಿ. ಗಂಗಾಜಲ ಕುಡಿದ ನಂತರವೇ ಅಮ್ಮ ನಮ್ಮನ್ನು ಬಿಟ್ಟು ಹೋದರು'' ಎಂದು ತಿಳಿಸಿದರು.