Breaking: ಎಸ್ಪಿಬಿ ಆರೋಗ್ಯ ಸ್ಥಿತಿ ಗಂಭೀರ, ಆಸ್ಪತ್ರೆ ಬಳಿ ಹೆಚ್ಚಿದ ಪೊಲೀಸ್ ಭದ್ರತೆ
ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಆತಂಕ ಹೆಚ್ಚಿಸಿದೆ. ಎಸ್ಪಿಬಿ ಆರೋಗ್ಯ ಕ್ಷೀಣಿಸಿದೆ ಎಂದು ವೈದ್ಯರು ಈಗಾಗಲೇ ಮಾಹಿತಿ ನೀಡಿದ್ದರು.
ಎಸ್ಬಿ ಆರೋಗ್ಯ ಚಿಂತಾಜನಕವಾಗಿದೆ ಎಂದು ತಿಳಿಯುತ್ತಿದ್ದಂತೆ ಆಸ್ಪತ್ರೆ ಬಳಿ ನೂರಾರು ಅಭಿಮಾನಿಗಳು ದೌಡಾಯಿಸಿದ್ದು, ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.

ಇನ್ನು ಎಸ್ಪಿಬಿ ಕುಟುಂಬದವರು ಸಹ ಚೆನ್ನೈನ ಎಂಜಿಎಂ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಎಸ್ಪಿ ಬಾಲಸುಬ್ರಹ್ಮಣ್ಯಂ ಅವರ ಪತ್ನಿ ಸಾವಿತ್ರಿ, ಸಹೋದರಿ ಶೈಲಜಾ, ಮಗ ಚರಣ್, ಪುತ್ರಿ ಪಲ್ಲವಿ ಆಗಮಿಸಿದ್ದಾರೆ. ನಿರ್ದೇಶಕ ಭಾರತಿರಾಜ್ ಸಹ ಭೇಟಿ ನೀಡಿದ್ದಾರೆ.
ಆಸ್ಪತ್ರೆಯಿಂದ ಹೊರಬಂದು ಮಾಧ್ಯಮಗಳ ಜೊತೆ ಮಾತನಾಡಿದ ನಿರ್ದೇಶಕ ಭಾರತಿರಾಜ ''ನನ್ನ ದುಃಖವನ್ನು ಹೇಗೆ ವ್ಯಕ್ತಪಡಿಸಲಿ ಅಂತ ಗೊತ್ತಾಗ್ತಿಲ್ಲ. ಈಗಲೂ ಎಸ್ಪಿಬಿ ಕುರಿತು ನನಗೆ ಸಣ್ಣ ನಂಬಿಕೆ ಇದೆ. 50 ವರ್ಷ ಹೋಗೋ-ಬಾರೋ ಎಂದು ಇದ್ದವರು ನಾವು. ಪ್ರಕೃತಿ ಮುಂದೆ ನಾವು ಏನು ಅಲ್ಲ, ಈಗ ಎಲ್ಲವೂ ಆ ದೇವರ ಕೈಯಲ್ಲಿದೆ'' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications











