ಮತ್ತೊಂದು ವಿವಾದದಲ್ಲಿ ಸಿಲುಕಿದ ಚಿರಂಜೀವಿ ಅಭಿನಯದ 'ಸೈರಾ' ಸಿನಿಮಾ
Recommended Video
ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷೆಯ ಸೈರಾ ಸಿನಿಮಾ ಮತ್ತೊಂದು ವಿವಾದಕ್ಕೆ ಗುರಿಯಾಗಿದೆ. ರಿಲೀಸ್ ಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗ ಸೈರಾ ತಂಡ ಸಂಕಷ್ಟಕ್ಕೆ ಸಿಲುಕಿದೆ. ನಿರ್ಮಾಪಕ ರಾಮ್ ಚರಣ್, ನಿರ್ದೇಶಕ ಸುರೇಂದ್ರ ರೆಡ್ಡಿ ಮತ್ತು ನಟ ಚಿರಂಜೀವಿಗೆ ಅವರಿಗೆ 100 ಕೋಟಿ ಪರಿಹಾರ ಕೇಳಿ ಖ್ಯಾತ ವಕೀಲ ಶಂಕರಪ್ಪ ಸಮನ್ಸ್ ನೀಡಿದ್ದಾರೆ.
ಸೈರಾ ಸಿನಿಮಾ ಮುಂದಿನ ತಿಂಗಳು ಆಕ್ಟೋಬರ್ 2ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೆ ಗೊತ್ತಿರುವ ಹಾಗೆ ಸೈರಾ, ಸ್ವತಂತ್ರ ಹೋರಾಟಗಾರ ಉಯ್ಯಲವಾಡ ನರಸಿಂಹರೆಡ್ಡಿ ಜೀವನ ಆಧಾರಿತ ಚಿತ್ರ. ನರಸಿಂಹರೆಡ್ಡಿ ಬಲಗೈ ಬಂಟನಾಗಿದ್ದ ವಡ್ಡ ಓಬನ್ನ ಪಾತ್ರವನ್ನು ತಿರುಚಲಾಗಿದೆ ಎನ್ನುವ ಆರೋಪ ಚಿತ್ರತಂಡದ ಮೇಲೆ ಬಂದಿದೆ. ಚಿತ್ರದಲ್ಲಿ ವಡ್ಡ ಓಬನ್ನ ಪಾತ್ರವನ್ನು ತಮಿಳು ನಟ ವಿಜಯ್ ಸೇತುಪತಿ ನಿರ್ವಹಿಸಿದ್ದಾರೆ.

ಇತಿಹಾಸ ತಿರುಚಿದ ಆರೋಪ
ಸಿನಿಮಾ ದಲ್ಲಿ ಓಬನ್ನ ಹೆಸರು ರಾಜಾಪಾಂಡೆ ಎಂದು ಉಲ್ಲೇಖಮಾಡಲಾಗಿದೆ, ಇತಿಹಾಸ ತಿರುಚಿ ಸಿನಿಮಾ ಮಾಡಿ ಕೆಟ್ಟ ಸಂದೇಶ ರವಾನೆ ಮಾಡುತ್ತಿದ್ದಾರೆ ಎಂದು ಚಿತ್ರತಂಡದ ಮೇಲೆ ತಂಬಿಚೆಟ್ಟಿ ಚಕ್ರವರ್ತಿ ಆರೋಪ ಮಾಡಿದ್ದಾರೆ. ಸಿನಿಮಾ ನಿರ್ದೇಶನಕ್ಕು ಮುನ್ನ ಚಿತ್ರತಂಡ ನೀಡಿದ್ದ ಮಾತಿನಂತೆ ಓಬನ್ನ ಪಾತ್ರ ಇರಬೇಕಿತ್ತು. ಆದ್ರೀಗ ಬದಲಾಗಿದೆ ಎನ್ನುವುದು ಅವರ ಆರೋಪ.

ಓಬನ್ನ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ
ವಡ್ಡ ಓಬನ್ನ ಕೂಡ ನರಸಿಂಹರೆಡ್ಡಿ ಅವರ ಬಲಗೈ ಬಂಟರಾಗಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿ ಮಡಿದಿದ್ದ. ಓಬನ್ನ ದೇಶದ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ. ಆದ್ರೆ ಅವರ ಪಾತ್ರವನ್ನು ತಿರುಚಲಾಗಿದೆ ಎಂದು ತಂಬಿಚೆಟ್ಟಿ ಚಕ್ರವರ್ತಿ ಆರೋಪ ಮಾಡಿದ್ದಾರೆ. ಅಲ್ಲದೆ ಅಮರಾವತಿಯ ಹೈಕೋರ್ಟ್ ಗೆ ರಿಟ್ ಸಲ್ಲಿಕೆಗೆ ತಯಾರಿ ಮಾಡಿಕೊಂಡಿದ್ದಾರೆ.

ನರಸಿಂಹ ರೆಡ್ಡಿ ಕುಟುಂಬದವರ ಆರೋಪ
ಸೈರಾ ಚಿತ್ರಕ್ಕೆ ಸಾಕಷ್ಟು ವಿಘ್ನಗಳು ಎದುರಾಗುತ್ತಿವೆ. ಈ ಮೊದಲು ನಿರ್ಮಾಪಕ ರಾಮ್ ಚರಣ್ ಮೇಲೆ ಉಯ್ಯಾಲವಾಡ ಕುಟುಂಬದ ಸದಸ್ಯರು 50 ಕೋಟಿ ವಂಚನೆ ಆರೋಪ ಮಾಡಿದ್ದರು. ಸೈರಾ ಸಿನಿಮಾ ಹಿನ್ನೆಲೆ ಉಯ್ಯಾಲವಾಡ ಕುಟುಂಬದ 5ನೇ ಜನರೇಷನ್ ಅವರ 23 ಕುಟುಂಬಗಳಿಗೆ ತಲಾ 2 ಕೋಟಿ ನೀಡುವುದಾಗಿ ನಿರ್ಮಾಪಕರು ತಿಳಿಸಿದ್ದರಂತೆ.

ದೂರು ದಾಖಲಿಸಿರುವ ಕುಟುಂಬ
ಸಿನಿಮಾ ಮುಗಿದುರಿಲೀಸ್ ಗೆ ರೆಡಿಯಾದರು, ಇದುವರೆಗೂ ಯಾರಿಗೂ ಹಣ ಕೊಟ್ಟಿಲ್ಲ ಎಂದು ಆರೋಪಿಸಿ ಉಯ್ಯಾಲವಾಡ ಕುಟುಂಬದ ಸದಸ್ಯ ದಸ್ತಗಿರಿ ರೆಡ್ಡಿ ದಂಪತಿ ಜ್ಯೂನ್ಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರಂತೆ. ಈಗ ಮತ್ತೊಂದು ಆರೋಪ ಕೇಳಿ ಬರುತ್ತಿದೆ. ರಿಲೀಸ್ ಗೆ ಸಮೀಪವಿರುವ ಕಾರಣ ಚಿತ್ರತಂಡ ಯಾವ ನಿರ್ಧಾರ ಕೈಗೊಳ್ಳತ್ತೆ ಎನ್ನುವುದು ಕಾದುನೋಡಬೇಕು.


Click it and Unblock the Notifications











