Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಖಿಲ್ ಕುಮಾರ್ ಮದುವೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮುಗಿದಿಲ್ಲ ಚರ್ಚೆ!
ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರ ವಿವಾಹ ರೇವತಿ ಅವರೊಟ್ಟಿಗೆ ಕೆಲವು ದಿನಗಳ ಹಿಂದಷ್ಟೆ ಮುಗಿದಿದೆ. ಭಾರಿ ಅದ್ಧೂರಿಯಾಗಿ ಆಚರಿಸಲು ಮಾಡಿದ್ದ ಯೋಜನೆಗೆ ಕೊರೊನಾ ತಣ್ಣೀರು ಸುರಿದು ಸರಳ ವಿವಾಹವಾಗುವಂತೆ ಪ್ರೇರೇಪಿಸಿದೆ.
Recommended Video
ನಿಖಿಲ್ ಕುಮಾರಸ್ವಾಮಿ ವಿವಾಹವನ್ನು ಭಾರಿ ಅದ್ಧೂರಿಯಾಗಿ ನೆರವೇರಿಸಲು ಮಾಜಿ ಸಿಎಂ ಕುಮಾರಸ್ವಾಮಿ ಸಜ್ಜಾಗಿದ್ದರು. ಕೇತಿಗಾನಹಳ್ಳಿ ಬಳಿಯ ಫಾರಂ ನಲ್ಲಿ ದೊಡ್ಡ ಸೆಟ್ ಹಾಕಿ, ಭಾರಿ ಸಂಖ್ಯೆಯ ಜನರ ಉಪಸ್ಥಿತಿಯಲ್ಲಿ ಮಗನ ಮದುವೆ ಮಾಡುವ ಇಚ್ಛೆ ಅವರದ್ದಾಗಿತ್ತು.
ವಿವಾದದ ಕಿಡಿ ಹೊತ್ತಿಸಿದ ನಿಖಿಲ್-ರೇವತಿ ಮದುವೆಯ ಫೋಟೊ
ಯೋಜನೆ ಇನ್ನೇನು ಕಾರ್ಯಗತವಾಗಬೇಕು, ಮದುವೆ ತಯಾರಿಗಳು ಆರಂಭವಾಗುವ ಹೊತ್ತಿಗೆ ಸರಿಯಾಗಿ ಕೊರೊನಾ ಬಂದು ವಕ್ಕರಿಸಿಕೊಂಡು ಸರಳವಾಗಿ ಮದುವೆ ಸಮಾರಂಭ ನಡೆಯುವಂತಾಯಿತು. ಮದುವೆ ಮುಗಿದ ಬೆನ್ನಲ್ಲೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಒದಗಿ ಬಂದ ಸಾಲು-ಸಾಲು ದುರಾದೃಷ್ಟಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ಚರ್ಚೆ ಪ್ರಾರಂಭವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ತಮಾಷೆ
ನಿಖಿಲ್ ಕುಮಾರಸ್ವಾಮಿ ಮೊದಲಿಗೆ ಸಿನಿಮಾ ಮಾಡಿದರು, ಅದು ಸೂಕ್ತ ಗೆಲುವು ಕಾಣಲಿಲ್ಲ, ಆ ನಂತರ ರಾಜಕೀಯಕ್ಕೆ ಹೋದರು, ಭಾರಿ ಗೆಲುವಿನ ನಿರೀಕ್ಷೆ ಇಟ್ಟುಕೊಂಡಿದ್ದ ಅವರು ಸೋಲಬೇಕಾಯಿತು, ನಂತರ ಮದುವೆ ಆದರು, ಮದುವೆಗೆ ಜನರೇ ಬರದಂತಾಯಿತು ಎಂಬುದು ಸಾಮಾಜಿಕ ಜಾಲತಾಣದಲ್ಲಿ ತಮಾಷೆಯಾಗಿ ಚರ್ಚೆಯಾಗುತ್ತಿದೆ.
ಟ್ರೋಲ್ ಮಾಡುತ್ತಿರುವ ನೆಟ್ಟಿಗರು
ಕೆಲವು ಟ್ರೋಲಿಗರು, ನಿಖಿಲ್ ಕುಮಾರಸ್ವಾಮಿ ಅವರ ಚಿತ್ರವನ್ನು ಹಾಕಿ, 'ಸಿನಿಮಾ ಮಾಡಿದರೆ ಜನ ಬರಲಿಲ್ಲ, ಚುನಾವಣೆಗೆ ನಿಂತರೆ ಮತ ಬರಲಿಲ್ಲ, ಮದುವೆಗೂ ಜನ ಬರಲಿಲ್ಲ, ಎಂಥಹಾ ದುರಾದೃಷ್ಟ' ಎಂದು ವ್ಯಂಗ್ಯವಾಗಿ ಕಾಲೆಳೆದಿದ್ದಾರೆ.
ನಿಖಿಲ್ ಮದುವೆಯಲ್ಲಿ ಸಾಮಾಜಿಕ ಅಂತರ, ಲಾಕ್ಡೌನ್ ನಿಯಮ ಉಲ್ಲಂಘನೆ?
ಟ್ರೋಲಿಗರಿಗೆ ಮೊದಲಿನಿಂದ ಆಪ್ತರು ನಿಖಿಲ್
ನಿಖಿಲ್ ಕುಮಾರಸ್ವಾಮಿ ಅವರು ಟ್ರೋಲಿಗರಿಗೆ ಮೊದಲಿನಿಂದಲೂ ಆಪ್ತರು. ಹಿಂದೊಮ್ಮೆ 'ನಿಖಿಲ್ ಎಲ್ಲಿದ್ದೀಯಪ್ಪಾ?' ಎಂಬುದು ಬಹಳವಾಗಿ ಖ್ಯಾತವಾಗಿತ್ತು. ಆದರೆ ಇದಾವುದರ ಬಗ್ಗೆ ತಲೆಕೆಡಿಸಿಕೊಳ್ಳದ ನಿಖಿಲ್ ಕುಮಾರಸ್ವಾಮಿ, ಟ್ರೋಲ್ಗಳನ್ನು ಕ್ರೀಡಾಸ್ಪೂರ್ತಿಯಿಂದಲೇ ಪರಿಗಣಿಸಿದ್ದರು. ಎಲ್ಲಿಯೂ ಟ್ರೋಲ್ಗಳ ವಿರುದ್ಧ ನಕಾರಾತ್ಮಕವಾಗಿ ಮಾತನಾಡಲಿಲ್ಲ.
ಏಪ್ರಿಲ್ 17 ಕ್ಕೆ ನಿಖಿಲ್ ವಿವಾಹ ನೆರವೇರಿತು
ನಿಖಿಲ್ ಕುಮಾರಸ್ವಾಮಿ ವಿವಾಹವು ಏಪ್ರಿಲ್ 17 ರಂದು ಸರಳವಾಗಿ ನೆರವೇರಿತು. ಕುಟುಂಬ ಸದಸ್ಯರು ಮಾತ್ರವೇ ಹಾಜರಿದ್ದ ಸಮಾರಂಭದಲ್ಲಿ ಶಾಸ್ತ್ರೋಕ್ತವಾಗಿ ನಿಖಿಲ್ ಅವರು ರೇವತಿ ಅವರ ಕೈ ಹಿಡಿದರು. ಮದುವೆಯ ಕುರಿತು ಕೆಲವರು ಅಸಮಾಧಾನ ವ್ಯಕ್ತಪಡಿಸಿದರಾದರೂ, ಕುಮಾರಸ್ವಾಮಿ ಸರಣಿ ಟ್ವೀಟ್ ಮೂಲಕ ಮದುವೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದೇವೆ ಎಂದು ಸಮಜಾಯಿಷಿ ನೀಡಿದರು.