Don't Miss!
- News ಮಂಗಳೂರಿನಲ್ಲಿ ಅಗ್ನಿ ಅವಘಡ: ಹೊತ್ತಿ ಉರಿದ ಫಿಶ್ ಆಯಿಲ್ ಫ್ಯಾಕ್ಟರಿ
- Automobiles ಬುಕ್ ಮಾಡಿದ ರೈಲಿನ ಸೀಟಿನಲ್ಲಿ ಬೇರೆಯವರು ಕೂತಿದ್ರೆ ಏನ್ ಮಾಡಬೇಕು ಗೊತ್ತಾ? ಸಿಂಪಲ್ ಪರಿಹಾರ
- Sports IPL 2024 RR vs DC: ರಾಯಲ್ಸ್ ವಿರುದ್ಧ ಗೆಲುವಿನೊಂದಿಗೆ ಪುಟಿದೇಳುವುದೇ ಕ್ಯಾಪಿಟಲ್ಸ್?; ಸಂಭಾವ್ಯ ಆಡುವ 11ರ ಬಳಗ
- Lifestyle ವಿಶ್ವದ ದುಬಾರಿ ಹಣ್ಣುಗಳಿವು..! ನೀವು ಊಹಿಸದ ಬೆಲೆ ಈ ಹಣ್ಣುಗಳಿಗಿದೆ..!
- Technology OnePlus: ಒನ್ಪ್ಲಸ್ ನಾರ್ಡ್ CE 4 ಫೋನ್ನ ಭಾರತದ ಬೆಲೆ ಮಾಹಿತಿ ಲೀಕ್! ಲಾಂಚ್ಗೆ ನಾಲ್ಕೇ ದಿನ ಬಾಕಿ
- Finance ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು: ಐಟಿ ಕಂಪೆನಿಗಳನ್ನು ಕೇರಳಕ್ಕೆ ಆಹ್ವಾನಿಸಿದ ಸಚಿವ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವಿದ್ಯಾರ್ಥಿಗಳ ಪರ ಶ್ರೀಮುರಳಿ, ಧ್ರುವ ಸರ್ಜಾ ದನಿ
ಶಾಲೆ ಆರಂಭ, ಆನ್ಲೈನ್ ಶಿಕ್ಷಣ, ಹಳ್ಳಿಗಾಡಿನಲ್ಲಿ ಇಂಟರ್ನೆಟ್ ಲಭ್ಯತೆ, ಆನ್ಲೈನ್ ಶಿಕ್ಷಣದಿಂದಾಗಿ ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಆಗಬಹದಾದ ಸಮಸ್ಯೆ ಹೀಗೆ ವಿದ್ಯಾರ್ಥಿ ಮತ್ತು ಶಾಲಾ-ಕಾಲೇಜುಗಳ ಸುತ್ತಾ ದೊಡ್ಡ ಚರ್ಚೆಯೇ ನಡೆಯುತ್ತಿದೆ.
Recommended Video
ಆನ್ಲೈನ್ ಪಾಠ ಮಾಡುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅದರ ಲಾಭ ಸಿಗುವುದಿಲ್ಲ ಎಂಬ ವಾದ ಎಲ್ಲೆಡೆ ಕೇಳಿಬರುತ್ತಿದ್ದು, ಆನ್ಲೈನ್ ಪಾಠಕ್ಕೆ ಭಾರಿ ವಿರೋಧ ಸಹ ವ್ಯಕ್ತವಾಗುತ್ತಿದೆ.
'ನಾನು ಬದುಕಬೇಕು, 300-400 ರೂ. ಆದರೂ ಕೊಡಿ': 'ಮಂಗಲ್ ಪಾಂಡೆ' ಕಲಾವಿದನ ಕಣ್ಣೀರು
ವಿದ್ಯಾರ್ಥಿಗಳಿಗೆ ಆನ್ಲೈನ್ ಪಾಠ ಹಾಗೂ ಕೊರೊನಾ ಮುಗಿಯುವ ಮುನ್ನವೇ ಶಾಲೆ-ಕಾಲೇಜುಗಳನ್ನು ತೆರೆಯುವು ನಿರ್ಧಾರಕ್ಕೆ ಸಿನಿ ಸ್ಟಾರ್ಗಳು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಅಷ್ಟೆ ಅಲ್ಲದೆ ತಾವು ವಿದ್ಯಾರ್ಥಿಗಳೊಂದಿಗೆ ಇರುವುದಾಗಿ ಭರವಸೆಯನ್ನೂ ನೀಡಿದ್ದಾರೆ.
ಆನ್ಲೈನ್ ತರಗತಿಯ ಸಮಸ್ಯೆ ಪಟ್ಟಿ ಮಾಡಿದ ಮುರಳಿ
ನಟ ಶ್ರೀಮುರಳಿ ಈ ಬಗ್ಗೆ ಪೋಸ್ಟ್ ಹಾಕಿದ್ದು, 'ಹಳ್ಳಿಗಳಲ್ಲೇ ಸಾಕಷ್ಟು ವಿಧ್ಯಾರ್ಥಿಗಳು ಪದವಿ ಪಡೆಯುವ ಕನಸಿನೊಂದಿಗೆ ವಿಧ್ಯಾಭ್ಯಾಸ ಮಾಡುತ್ತಿರುತ್ತಾರೆ.ಆನ್ ಲೈನ್ ಪಾಠ, ನೆಟ್ವರ್ಕ್ ಸಮಸ್ಯೆ, ಸತತ 5-6 ಗಂಟೆ ಮೊಬೈಲ್ ನೋಡಿ ಪಾಠ ಕಲಿಯುವುದು ನಿಜಕ್ಕೂ ಕಷ್ಟಕರ' ಎಂದು ಆನ್ಲೈನ್ ಪಾಠದ ಸಮಸ್ಯೆಗ ಪಟ್ಟಿ ಮಾಡಿದ್ದಾರೆ.
ನಾವು ವಿದ್ಯಾರ್ಥಿಗಳೊಂದಿಗೆ ಇದ್ದೇವೆ: ಮುರಳಿ
'ಸರ್ಕಾರ ವಿಧ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿ ಕೈಹಿಡಿಯಲಿ ಎಂಬ ಮನವಿಯ ಜೊತೆಗೆ ಎಲ್ಲಾ ವಿಧ್ಯಾರ್ಥಿಗಳ ಜೊತೆಗೆ ನಾವಿದ್ದೇವೆ.ಗೊಂದಲ ಬೇಡ' ಎಂದು ವಿದ್ಯಾರ್ಥಿಗಳಿಗೆ ಭರವಸೆಯನ್ನೂ ನೀಡಿದ್ದಾರೆ ನಟ ಶ್ರೀ ಮುರಳಿ.
ವಿದ್ಯಾರ್ಥಿಗಳ ಸಮಸ್ಯೆ ಬಹಳ ಆತಂಕ್ಕೆ ಈಡುಮಾಡಿದೆ: ಪ್ರಥಮ್
'ಕೊರೊನಾ ದಿಂದಾಗಿ ವಿಧ್ಯಾರ್ಥಿಗಳಿಗೆ ಆಗಿರೋ ಸಮಸ್ಯೆ ನನಗೆ ಬಹಳ ಆತಂಕಕ್ಕೀಡುಮಾಡಿದೆ.ಈಗಿನ ವಿಧ್ಯಾರ್ಥಿಗಳೇ ದೇಶದ ಆಧಾರಸ್ಥಂಭ.ಪರೀಕ್ಷೆಯ ಆತಂಕ ಬೇಡ.ಜ್ಞಾನ ಎಲ್ಲಕ್ಕಿಂತ ದೊಡ್ಡದು.ಯಾರೂಬ್ಬರೂ ಧೃತಿಗೆಡದೆ ಓದನ್ನು ಮುಂದುವರೆಸಿ.ನಿಮ್ಮೊಡನೆ ನಾವಿದ್ದೇವೆ.ಸರ್ಕಾರವಿದೆ' ಎಂದು ಧ್ರುವ ಸರ್ಜಾ ಸಹ ಭರವಸೆ ನೀಡಿದ್ದಾರೆ.
ಒಳ್ಳೆ ಹುಡುಗ ಪ್ರಥಮ್ ಸಹಾಯ
ಒಳ್ಳೆ ಹುಡುಗ ಪ್ರಥಮ್ ಸಹ ಆನ್ಲೈನ್ ತರಗತಿಗಳು ಮತ್ತು ಕೊರೊನಾ ಮುಗಿಯುವ ಮೊದಲು ಶಾಲೆಗಳು ತೆರೆಯುವ ನಿರ್ಧಾರದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹಲವು ಪೋಸ್ಟ್ಗಳನ್ನು ಹಾಕಿರುವ ಅವರು, ಮಾಧ್ಯಮ ಚರ್ಚೆಗಳನ್ನು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.