Don't Miss!
- News ನೇಹಾ ಹಿರೇಮಠ್ ಹತ್ಯೆ ಪ್ರಕರಣ; ನಟ ಧ್ರುವ ಸರ್ಜಾ ಏನಂದ್ರು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಸ್ತೆ ಬದಿ ಅನಾಥವಾದ ಕಲಾವಿದೆ ಜಯಮ್ಮನ ಮೃತದೇಹ!
ನಿನ್ನೆಯಷ್ಟೆ ಅಸುನೀಗಿದ ಕನ್ನಡದ ಹಿರಿಯ ನಟಿ ಕಲಾವಿದೆ ಬಿ ಜಯ ಅವರ ಮೃತದೇಹವನ್ನು ರಸ್ತೆ ಬದಿ ಕೊಳಕು ಪ್ರದೇಶದಲ್ಲಿ ಅನಾಥವಾಗಿ ಬಿಟ್ಟುಹೋಗಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Recommended Video
ಕನ್ನಡ ಸಿನಿಮಾರಂಗದಲ್ಲಿ ಹಲವು ದಶಕಗಳಿಂದಲೂ ನಟಿಸಿರುವ ಬಿ.ಜಯ ಅವರು ನಿನ್ನೆ ವಯೋ ಸಹಜ ಸಮಸ್ಯೆಯಿಂದ ಮೃತರಾದರು. ಅವರ ಅಂತ್ಯಕ್ರಿಯೆಯನ್ನು ಇಂದು ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು. ಆದರೆ ಜಯಮ್ಮರವರ ಮೃತದೇಹವನ್ನು ರಸ್ತೆ ಬದಿ ಕೊಳಕು ಪ್ರದೇಶದಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ.
ರಸ್ತೆ ಬದಿಯಲ್ಲಿ ಕಸದ ರಾಶಿಯ ಬದಿಯಲ್ಲಿ ಜಯಮ್ಮನವರ ಶವ ಇರಿಸಲಾಗಿರುವ ವಿಡಿಯೋ ಚಿತ್ರೀಕರಣವನ್ನು ಕೆಲವರು ಮಾಡಿದ್ದು, ವಿಡಿಯೋದಲ್ಲಿ ವ್ಯಕ್ತಿಯೊಬ್ಬ, 'ನೋಡಿ ಕಲಾವಿದೆಗೆ ಬಂದಿರುವ ಸ್ಥಿತಿ ನೋಡಿ. ಸ್ಯಾಂಡಲ್ವುಡ್ ನಟರೆಲ್ಲಾ ಎಲ್ಲಿದ್ದೀರಿ. ಜೋಡೆತ್ತುಗಳು ಎಲ್ಲಿದ್ದಾವೇ? ಹಿರಿಯ ಕಲಾವಿದೆಗೆ ಎಂಥಾ ಸ್ಥಿತಿ ಬಂದಿದೆ ನೋಡಿ. ಸ್ಯಾಂಡಲ್ವುಡ್ ಮಂದಿ ಎಲ್ಲಿದ್ದೀರಿ ಬನ್ನಿ ಹಿರಿಯ ಕಲಾವಿದೆಯ ಅಂತಿಮ ಸಂಸ್ಕಾರ ಮಾಡಿ ಬನ್ನಿ' ಎಂದು ಕರೆಯುತ್ತಿದ್ದಾರೆ.
'ಕುಟುಂಬದವರಿಗೆ ಆರ್ಥಿಕ ಸಂಕಷ್ಟವಿದೆ'
ಜಯಮ್ಮನವರ ಮೃತದೇಹವನ್ನು ಅನಾಥವಾಗಿ ರಸ್ತೆ ಬದಿ ಇಡಲಾಗಿದೆ. ಅವರ ಕುಟುಂಬದವರು ಆರ್ಥಿಕ ಸಮಸ್ಯೆಯಲ್ಲಿದ್ದಾರೆ ಹಾಗಾಗಿ ಜಯಮ್ಮನವರ ಮೃತದೇಹವನ್ನು ಹೀಗೆ ರಸ್ತೆ ಬದಿಯಲ್ಲಿ ಅನಾಥವಾಗಿ ಇಟ್ಟು ಹೋಗಿದ್ದಾರೆ ಎಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹೇಳುತ್ತಿರುವುದು ದಾಖಲಾಗಿದೆ.
'ಸಣ್ಣ ಕಲಾವಿದರೆಂದರೆ ನಿರ್ಲಕ್ಷ್ಯ'
'ಯಾರೋ ದೊಡ್ಡವರು ಸತ್ತಾಗ ಕೆಂಪು ಹಾಸು ಹಾಕಿ ಅದ್ಧೂರಿಯಾಗಿ ಅಂತ್ಯ ಸಂಸ್ಕಾರ ಮಾಡುತ್ತಾರೆ. ಆದರೆ ಚಿತ್ರರಂಗದ ಹಿರಿಯ ನಟಿಯೊಬ್ಬರು ಕಾಲವಾಗಿದ್ದಾರೆ ಆದರೆ ಯಾರೂ ಇತ್ತ ನೋಡುವವರು ಸಹ ಇಲ್ಲ. ರುದ್ರಭೂಮಿಯಲ್ಲಿ ಶಾಸಕ ಜಮೀರ್ ಅಹ್ಮದ್ ಅಕ್ಕಿ ವಿತರಿಸುತ್ತಿದ್ದಾರೆ ಎಂದು ಅಲ್ಲ ಮೀಡೀಯಾದವರು ಅಲ್ಲಿಯೇ ಇದ್ದಾರೆ ಕರೆದರೂ ಇಲ್ಲಿಗೆ ಯಾರೂ ಬಂದಿಲ್ಲ' ಎಂದು ವಿಡಿಯೋದಲ್ಲಿ ಆರೋಪಿಸಿದ್ದಾರೆ.
ಅತ್ಯ ಸಂಸ್ಕಾರದ ಚಿತ್ರಗಳು ಸಹ ವೈರಲ್ ಆಗಿವೆ
ಇನ್ನೂ ಕೆಲವು ಚಿತ್ರಗಳು ಸಹ ವೈರಲ್ ಆಗಿದ್ದು, ಅವು ಚಿತ್ರದಲ್ಲಿ ಜಯಮ್ಮನವರ ಅಂತ್ಯಸಂಸ್ಕಾರ ಮಾಡುತ್ತಿರುವ ಚಿತ್ರಗಳಾಗಿವೆ. ವಿಡಿಯೋದಲ್ಲಿ 'ಜಯಮ್ಮನವರನ್ನು ಅನಾಥರನ್ನಾಗಿ ಮಾಡಿದ್ದಾರೆ' ಎಂದು ಅಂಗಲಾಚಿದ್ದ ವ್ಯಕ್ತಿ ಆ ಚಿತ್ರದಲ್ಲಿಯೂ ಇದ್ದಾನೆ. ಮಹಿಳೆಯೊಬ್ಬರು ಜಯಮ್ಮನವರ ಮೃತದೇಹಕ್ಕೆ ಕೈ ಮುಗಿಯುತ್ತಿರುವ ದೃಶ್ಯವೂ ಚಿತ್ರದಲ್ಲಿದೆ. ಸಾರ್ವಜನಿಕರೇ ಸೇರಿ ಜಯಮ್ಮನ ಅಂತ್ಯಸಂಸ್ಕಾರ ಮಾಡಿದ್ದಾರೆಯೇ ಎಂಬ ಅನುಮಾನವೂ ಚಿತ್ರದಿಂದ ಮೂಡುತ್ತಿದೆ.
ಸ್ಪಷ್ಟನೆ ಕೊಟ್ಟಿರುವ ಕುಟುಂಬದವರು
ಆದರೆ ಘಟನೆ ಬಗ್ಗೆ ಸ್ಪಷ್ಟನೆ ನೀಡಿರುವ ಜಯಮ್ಮನವರ ತಮ್ಮನ ಮಗಳು, 'ಜಯಮ್ಮನವರ ಮೃತದೇಹವನ್ನು ಅನಾಥವಾಗಿ ಬಿಟ್ಟಿರಲಿಲ್ಲ. ನಾವು ಪೂಜೆ ಮಾಡಿಕೊಳ್ಳುತ್ತಿದ್ದೆವು ಆಗ ಯಾರೋ ಕೆಲವರು ಹೀಗೆ ವಿಡಿಯೋ ಮಾಡಿಕೊಂಡಿದ್ದಾರೆ. ಅದನ್ನು ಟಿವಿಗಳನ್ನು ಪ್ರಸಾರ ಮಾಡುತ್ತಿದ್ದಾರೆ. ಕುಟುಂಬದವರೇ ಶಾಸ್ತ್ರೋಪ್ತವಾಗಿ ಜಯಮ್ಮನವರ ಅಂತಿಮ ಸಂಸ್ಕಾರ ನೆರವೇರಿಸಿದ್ದೇವೆ ಎಂದಿದ್ದಾರೆ.