ದ್ವಾರ್ಕಿ ಕನಸಿಗೆ ಕೊಡಲಿ ಏಟು ಕೊಟ್ಟ ಸೌಂದರ್ಯಾ!
ನಮ್ಮ ನಿರ್ಮಾಪಕರು ತಾಳ್ಮೆ ಕಳೆದುಕೊಂಡರು ಇರುವ ನೆಗೆಟೀವ್ ನನ್ನೇ ಕಟ್ ಮಾಡಿ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿ ಬಿಟ್ರು. ನನ್ನ ಕನಸಿಗೆ ಮೊದಲ ಕೊಡಲಿ ಏಟದು! ಥ್ಯಾಂಕ್ಸ್. ಒಂದು ದಿನ ನಿಮ್ಮನ್ನು ಬಾಗಿಲಲ್ಲೇ ನಿಲ್ಲಿಸಿ ಅಂಗಲಾಚಿದೆ. ನನ್ನ ಕೆಲಸ ಮುಗಿಸಿಕೊಡಿ. ನಿಮ್ಮನ್ನು ನಂಬಿ ಬಂದದ್ದಕ್ಕೆ ನನಗಿಂಥ ಶಿಕ್ಷೆಯೇ ಎಂದು ಎಷ್ಟೆಲ್ಲಾ ಕೇಳಿಕೊಂಡರು.. ನೀವು ನನಗೆ ಸಹಕರಿಸಲೇ ಇಲ್ಲ!
ನಾನಿಲ್ಲದೆಯೇ ನನ್ನ ಚಿತ್ರ ಬಿಡುಗಡೆಗೆ ಸಿದ್ಧವಾಗಿ ಹೋಯ್ತು. ಮೊದಲ ಪ್ರತಿಯನ್ನು ನೋಡಿ ಕರೆಕ್ಷನ್ ಮಾಡಲೂ ಆಗದಂತಾಯ್ತು! ಪ್ರಚಾರದ ಕೆಲಸವೂ ಮಾಡಿಸಲಾಗಲಿಲ್ಲ. ನಿಮ್ಮ ಬಿಸಿಲೂರಿನಲ್ಲಿ ತಬ್ಬಲಿಯಾಗಿ ಹೋದೆ. ನನ್ನ ಕಂದಮ್ಮನಿಗೇ ಇನ್ನಾರೋ ಸ್ವೆಟರ್ ಹೊಲಿದುಬಿಟ್ಟರು...

ಸಾವಿರಾರು ಜನ ಸೇರಿ ಮಾಡಿದ ಸಿನಿಮಾ ನಿಮ್ಮೊಬ್ಬರಿಂದ ನೀರಿನಲ್ಲಿ ಹೋಮ ಮಾಡಿದಂತಾಯ್ತು. ಸಿನಿಮಾ ಬಗ್ಗೆ ಆಸಕ್ತಿಯೇ ಕಳೆದು ಹೋಯ್ತು..! ಥ್ಯಾಂಕ್ಸ್! ಇಂದು ನಿಮ್ಮ ನಿರ್ದೇಶನದ 'ಕೊಚಡಿಯಾನ್' ಚಿತ್ರದ ಗಜಪ್ರಸವವಾಗಿದೆ. ಬಿಡುಗಡೆಯ ವಿಳಂಬ, ಸಾಲ, ಹಣ ಕಾಸಿನ ಮುಗ್ಗಟ್ಟು, ಕೆಲಸ ಮಾಡಿದವರಿಗೆ ಹಣ ಕೊಟ್ಟಿಲ್ಲವೆಂದು...ಬ್ಯುಸಿನೆಸ್ ಆಗುತ್ತಿಲ್ಲವೆಂದು ನೂರಾ ಎಂಟು ಕಾರಣಗಳಿಗೆ ಸಿಕ್ಕಿ ಉಸಿರುಗಟ್ಟಿ ಬಿಡುಗಡೆಯಾಗಿದೆ. ನಿಮಗೆ ಒಳ್ಳೆಯದಾಗಲಿ... ಸಿನಿಮಾ ದೊಡ್ಡ ಯಶಸ್ಸು ಕಾಣಲೆಂದು ಹಾರೈಸುತ್ತೇನೆ...!
ನನಗೆ ನಿಮ್ಮ ತಂದೆಯ ಮೇಲೆ ಒಂದಿಷ್ಟು ಕೋಪವಿಲ್ಲ. ಮಹಾನುಭಾವರು ಚೆನ್ನಾಗಿರಲಿ... ಎಲ್ಲಿದ್ದರೂ ನಮ್ಮವರು. ಬಟ್ ಅಂದು ನನ್ನ ನೋವು, ಹತಾಶೆ, ಶಾಪದ ಆಳ ಎಷ್ಟಿತ್ತೆಂಬುದರ ಅರಿವು ನಿಮಗಾದರೆ ಸಾಕು. ನೀವು ಗೋಲ್ಡ್ ಸ್ಪೂನ್ ಸೌಂದರ್ಯ ನಾವು ಓಲ್ಡ್ ಹ್ಯಾಂಡ್... ಶೇಕ್ ಹ್ಯಾಂಡ್ ಮಾಡಲು ಮಾತ್ರ ಗೊತ್ತು! ಒಳ್ಳೆಯದಾಗಲಿ... ಕಾಲಾಯ ತಸ್ಮ್ಯೆ ನಮಃ.
ಈ ಬರಹದಲ್ಲಿ ನಾನೂ ಸಂಪಾದಿಸಬೇಕಾದ್ದೇನು ಇಲ್ಲ..ನನ್ನ ಅಂದಿನ ನೋವನ್ನು ಹೇಳಿಕೊಳ್ಳಲು ಸಿಕ್ಕ ಕಾಲ. ನನ್ನ ಪ್ರಿತಿಯ ಗೆಳೆಯರಿಗೆ ಹೇಳಬೇಕೆನಿಸಿತು ಹೇಳಿದ್ದೇನೆ... ಒಳಗಿದ್ದ ವಿಷ ಹೊರಗೆ ಹಾಕಿದ್ದೇನೆ. ದೇವರು ನಿಮ್ಮನ್ನು ಚೆನ್ನಾಗಿಡಲಿ! ನನಗೆ ನಡೆದಂಥ ತೊಂದರೆ ನನ್ನ ಶತ್ರುವಿಗೂ ಆಗದಿರಲಿ..! ನನ್ನ ಮತ್ತೆ ಮುಂಗಾರು ಚಿತ್ರದ ಶೀರ್ಷಿಕೆಯ ಮೊದಲಿನಲ್ಲೇ ನಿಮಗೆ ಕೃತಜ್ಞತೆಯಿದೆ... ಒಪ್ಪಿಸಿಕೊಳ್ಳಿ..! [ರಾಘವ ದ್ವಾರ್ಕಿ ಫೇಸ್ ಬುಕ್]


Click it and Unblock the Notifications











