Don't Miss!
- News ‘ಹೇಳಿ ಸಿದ್ದರಾಮಯ್ಯನವರೇ , ಹಿಂದುಳಿದ ವರ್ಗದ ಮೇಲೆ ನಿಮಗ್ಯಾಕೆ ಈ ಆಕ್ರೋಶ?’
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕಲಾವಿದರಿಗೆ 3 ಸಾವಿರ ಘೋಷಿಸಿರುವುದು ನಾಚಿಕೆಗೇಡಿನ ಸಂಗತಿ'
''ಕೊರೊನಾ ವೈರಸ್ ಲಾಕ್ಡೌನ್ ಕಾರಣದಿಂದ ಕಲಾವಿದರು ಸಂಕಷ್ಟದಲ್ಲಿದ್ದಾರೆ. ಎರಡು ವರ್ಷದಿಂದ ಕಲಾವಿದರಿಗೆ ಸರ್ಕಾರದಿಂದ ಯಾವುದೇ ಪ್ರೋತ್ಸಾಹ ಸಿಕ್ಕಿಲ್ಲ. ಈಗ ಕಲಾವಿದರಿಗೆ 3 ಸಾವಿರ ಘೋಷಿಸಿರುವುದು ನಾಚಿಕೆಗೇಡಿನ ಸಂಗತಿ'' ಎಂದು ಬಳ್ಳಾರಿ ಮೂಲದ ರಂಗಕಲಾವಿದ ಪುರುಷೋತ್ತಮ್ ರಂಗ ಆಕ್ರೋಶ ಹೊರಹಾಕಿದ್ದಾರೆ.
''ನಿಮ್ಮ ಲೆಕ್ಕದಲ್ಲಿ ಕೋಟ್ಯಾಂತರ ರೂಪಾಯಿ ತೋರಿಸುತ್ತೀರಾ. ಮೂರು ಸಾವಿರ ಯಾರಿಗೂ ಸಾಕಾಗಲ್ಲ. ದಯವಿಟ್ಟು ಅದನ್ನು ಕೊಡಬೇಡಿ. ಒಂದೊತ್ತಿನ ಊಟಕ್ಕೆ ಆಗಲ್ಲ ಆ ಹಣ' ಎಂದು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಲಾವಿದ ಮತ್ತು ಕಲಾತಂಡಗಳಿಗೆ 3 ಸಾವಿರ ರೂ ನೆರವು ಘೋಷಿಸಿದ ಸಿಎಂ
ಲಾಕ್ಡೌನ್ ಪರಿಣಾಮ ಸಂಕಷ್ಟದಲ್ಲಿ ಶ್ರಮಿಕ ವರ್ಗಕ್ಕೆ ಇಂದು ರಾಜ್ಯ ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದರು. ಇದರಲ್ಲಿ ಕಲಾವಿದರಿಗೆ ಹಾಗೂ ಕಲಾತಂಡಗಳಿಗೆ ತಲಾ ಮೂರು ಸಾವಿರ ಘೋಷಣೆ ಮಾಡಲಾಯಿತು. ಈ ಹಣ ಕಲಾವಿದರ ಕುಟುಂಬಕ್ಕೆ ಯಾವುದೇ ರೀತಿಯಲ್ಲಿ ಸಹಕಾರಿಯಾಗಲ್ಲ ಎಂಬ ಅಭಿಪ್ರಾಯ ಕೇಳಿಬಂದಿದೆ. ಮುಂದೆ ಓದಿ...
ಆಟೋ ಡ್ರೈವರ್ಗೆ ಕೊಟ್ಟಂತೆ ಕೊಡಬೇಡಿ
''ಆಟೋ ಡ್ರೈವರ್ಗೆ ಕೊಟ್ಟಂತೆ ಒಂದು ಕಲಾತಂಡಕ್ಕೆ 3 ಸಾವಿರ ಹಣ ಕೊಟ್ಟರೆ ಯಾರಿಗೆ ಸಾಲುತ್ತೆ. ಒಂದು ಕಲಾತಂಡದಲ್ಲಿ ಇಪತ್ತು ಜನರು ಇರ್ತಾರೆ, ಕೆಲವೊಂದು ತಂಡದಲ್ಲಿ ಮೂವತ್ತು ಜನ ಇರ್ತಾರೆ. ಯಾರಿಗೆ ಹಂಚುವುದು, ಯಾರಿಗೆ ಸಹಾಯವಾಗುತ್ತೆ. ಮೂರು ಸಾವಿರ ಯಾರಿಗೆ ಸಾಕಾಗುತ್ತೆ'' ಎಂದು ಪ್ರಶ್ನಿಸಿದ್ದಾರೆ.
ಕಲಾವಿದರು ಕಣ್ಣೀರು ಹಾಕಿದ್ರೆ ಸರ್ಕಾರಕ್ಕೆ ಒಳ್ಳೆಯದಲ್ಲ
ಟಿವಿ ಮಾಧ್ಯಮವೊಂದರ ಜೊತೆ ಮಾತನಾಡಿದ ಪುರುಷೋತ್ತಮ್ ರಂಗ ''ಕಲಾವಿದರಿಗೆ ಕಣ್ಣೀರು ಹಾಕಿಸಿದರೆ ಸರ್ಕಾರಕ್ಕೆ ಒಳ್ಳೆಯದಾಗಲ್ಲ. ಕಲಾವಿದನಿಗೆ ಕನಿಷ್ಠ ಅಂದ್ರೆ 5 ಸಾವಿರ ಕೊಡಬೇಕು. ಒಂದು ಕಲಾತಂಡಕ್ಕೆ ಕನಿಷ್ಠ ಅಂದ್ರೆ 10 ಸಾವಿರ ರೂಪಾಯಿ ಕೊಡಬೇಕು. ಕಳೆದ ಎರಡು ವರ್ಷದಿಂದ ಹೇಗೆ ಬದುಕುತ್ತಿದ್ದಾರೆ ಎಂದು ಅವರಿಗೆ ಗೊತ್ತಿದೆ. ಅದನ್ನು ಹೇಳುವುದಕ್ಕೂ ಸಾಧ್ಯವಿಲ್ಲ'' ಎಂದು ಭಾವುಕರಾದರು.
ಈ ಸಲ ಯಾರೂ ಕಣ್ಣೆತ್ತಿ ನೋಡುತ್ತಿಲ್ಲ
'ಕಳೆದ ವರ್ಷ ಕೊರೊನಾ ಇದ್ದ ಸಂದರ್ಭದಲ್ಲಿ ಕೆಲವು ದಿನಸಿ ಕಿಟ್ ಕೊಟ್ಟರು, ಕೆಲವರು ದುಡ್ಡು ಕೊಟ್ಟರು, ಮಠ, ಸ್ವಾಮೀಜಿಗಳು ಸಹಾಯ ಮಾಡಿದ್ದರು. ಈ ಸಲ ರಾಜಕಾರಣಿಗಳಂತೂ ಕಾಣಿಸೇ ಇಲ್ಲ. ಏಕಂದ್ರೆ ಯಾವುದು ಚುನಾವಣೆ ಇಲ್ಲ ಅಲ್ವಾ' ಎಂದು ಟೀಕಿಸಿದ್ದಾರೆ.
Recommended Video
ಸರ್ಕಾರದ ಯೋಜನೆ ತಲುಪಿಸಲು ಕಲಾವಿದರು ಬೇಕು
''ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಕಲಾವಿದರು ಬೇಕು. ಸರ್ಕಾರದ ಘನತೆಗಳನ್ನು ಎತ್ತಿ ತೋರಿಸಬೇಕು. ಕಲಾವಿದರು ಇಲ್ಲ ಅಂದ್ರೆ ದೇಶದ ಸಂಸ್ಕೃತಿಯನ್ನು ಎತ್ತಿ ತೋರಿಸಲು ಸಾಧ್ಯವಿಲ್ಲ. ಅದನ್ನು ತಿಳಿದು ಕಲಾತಂಡಕ್ಕೆ ಹತ್ತು ಸಾವಿರ ಹಾಗೂ ಕಲಾವಿದರಿಗೆ ಐದು ಸಾವಿರ ತಲುಪಿಸುವ ಕೆಲಸ ಮಾಡಿ'' ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.