Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟಿಗೆ ಬೆಂಬಲ ನೀಡಲು ಹೋಗಿ ವಿವಾದಾತ್ಮಕ ಟ್ವೀಟ್ ಮಾಡಿದ ವರ್ಮಾ.!
ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕ ಸಂಚಲನ ಸೃಷ್ಟಿಸುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ಈಗ ಕಾಸ್ಟಿಂಗ್ ಕೌಚ್ ವಿಚಾರದಲ್ಲಿ ಟ್ವೀಟ್ ಮಾಡಿ ಮತ್ತೊಂದು ವಿವಾದಕ್ಕೆ ಕಾರಣವಾಗಿದ್ದಾರೆ.
ಟಾಲಿವುಡ್ ಇಂಡಸ್ಟ್ರಿಯಲ್ಲಿರುವ 'ಕಾಸ್ಟಿಂಗ್ ಕೌಚ್' ವಿರುದ್ಧ ನಟಿ ಶ್ರೀರೆಡ್ಡಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಟಿಗೆ ಸಂಪೂರ್ಣ ಬೆಂಬಲ ಸೂಚಿಸಿರುವ ರಾಮ್ ಗೋಪಾಲ್ ವರ್ಮಾ, ಈ ನಟಿ ಬಗ್ಗೆ ಮತ್ತು ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೀಗ, ಇಂತಹದ್ದೇ ಮೆಚ್ಚುಗೆ ವ್ಯಕ್ತಪಡಿಸುವ ಭರಾಟೆಯಲ್ಲಿ ವಿವಾದಾತ್ಮಕ ಟ್ವೀಟ್ ಮಾಡಿ ಕೆಲವರು ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಅಷ್ಟಕ್ಕೂ, ರಾಮ್ ಗೋಪಾಲ್ ವರ್ಮಾ ಮಾಡಿರುವ ಟ್ವೀಟ್ ನಲ್ಲಿ ಏನಿದೆ.? ಮುಂದೆ ಓದಿ.....
ಶ್ರೀರೆಡ್ಡಿಯನ್ನ ಅಶೋಕನಿಗೆ ಹೋಲಿಸಿದ ವರ್ಮಾ
ಚಕ್ರವರ್ತಿ ಅಶೋಕನಿಗೆ ತೆಲುಗು ನಟಿ ಶ್ರೀರೆಡ್ಡಿಯನ್ನ ಹೋಲಿಸಿದ್ದಾರೆ ರಾಮ್ ಗೋಪಾಲ್ ವರ್ಮಾ. 'ಅಶೋಕನಂತೆ ಶ್ರೀರೆಡ್ಡಿ ಕೂಡ ಗ್ರೇಟ್' ಎಂದಿರುವ ವರ್ಮಾ ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
|
ಆರ್.ಜಿ.ವಿಯ ಟ್ವೀಟ್ ನಲ್ಲಿ ಏನಿದೆ.?
''ನಟಿ ಶ್ರೀರೆಡ್ಡಿಯ ಪ್ರತಿಭಟನೆಯನ್ನ ಕೆಲವರು ಖಂಡಿಸುತ್ತಿದ್ದಾರೆ. ಈ ಹಿಂದೆ ಶ್ರೀರೆಡ್ಡಿ ಮಾತನಾಡಿರುವ ಕೆಟ್ಟ ಭಾಷೆ ಇರಬಹುದು ಅಥವಾ ಆಕೆ ಬಳಸಿರುವ ಅವಾಚ್ಯ ಶಬ್ದಗಳಿಂದ ಬೇಸರಗೊಂಡು ವಿರೋಧ ಮಾಡ್ತಿದ್ದಾರೆ. ಆದ್ರೆ, ನೆನಪಿರಲಿ, ಕ್ರೂರಿಯಾಗಿದ್ದ ಸಾಮ್ರಾಟ್ ಅಶೋಕ ಕೂಡ ಬದಲಾದ ನಂತರವೇ ಗ್ರೇಟ್ ಆಗಿದ್ದು'' ಎಂದಿದ್ದಾರೆ.
ಮತ್ತಿಬ್ಬರ ಹೆಸರು ಲೀಕ್ ಮಾಡಿದ ಶ್ರೀರೆಡ್ಡಿ.! ಅವರದ್ದು ಅದೇ ಬುದ್ಧಿಯಂತೆ.!
|
ಶ್ರೀರೆಡ್ಡಿ ಗ್ರೇಟ್
''ಸಾಮ್ರಾಟ್ ಅಶೋಕ ಯುದ್ಧದಲ್ಲಿ ಮೊದಲು ಅನೇಕ ಜನರನ್ನ ಕೊಂದರು. ಅವರ ಹೃದಯದಲ್ಲಿ ಬದಲಾವಣೆ ಮೂಡಿದ ಬಳಿಕವೇ ಲಕ್ಷಾಂತರ ಜನರಿಗೆ ಸಂರಕ್ಷನಾಗಿದ್ದು. ಹೀಗೆ, ಯೋಚಿಸಿದರೇ, ನಟಿ ಶ್ರೀರೆಡ್ಡಿ ಕೂಡ ಸಾಮ್ರಾಟ್ ಅಶೋಕ ಅವರಂತೆ ಗ್ರೇಟ್'' ಎಂದು ಬಣ್ಣಿಸಿದ್ದಾರೆ.
|
ಶ್ರೀರೆಡ್ಡಿಯನ್ನ ಎದುರಿಸಲು ಭಯ ಪಡ್ತಿದ್ದಾರೆ
''ಇಂಡಸ್ಟ್ರಿಯಲ್ಲಿರುವ ಪುರುಷರು ಶ್ರೀರೆಡ್ಡಿಯ ಪ್ರಮಾಣಿಕತೆಯನ್ನ ಎದುರಿಸಲು ಎದುರುತ್ತಿದ್ದಾರೆ. ಹೀಗಿರುವಾಗ, ಶ್ರೀರೆಡ್ಡಿಗೆ ಸಿಗುತ್ತಿರುವ ಖ್ಯಾತಿಯಿಂದ ಅಸೂಯೆಗೊಂಡ ಕೆಲ ಮಹಿಳೆಯರು ನಟಿಯನ್ನ ಖಂಡಿಸುತ್ತಿದ್ದಾರೆ. ಧೈರ್ಯ ಮತ್ತು ಪ್ರಮಾಣಿಕತೆ ಹೊಂದಿರುವ ಮಹಿಳೆಯರು ಮಾತ್ರವೇ ಸ್ತ್ರೀ ಶಕ್ತಿಯನ್ನ ಅನುಸರಿಸುತ್ತಾರೆ'' ಎಂದು ಟ್ವೀಟ್ ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.