Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಾಣಾ ದಗ್ಗುಬಾಟಿ ಸಹೋದರನ ಖಾಸಗಿ ಫೋಟೋ ಲೀಕ್ ಮಾಡಿದ ಶ್ರೀರೆಡ್ಡಿ.!
Recommended Video
ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ನಂಬಿಸಿ ನನಗೆ ಮೋಸ ಮಾಡಿದ್ದಾರೆ ಮತ್ತು ತೆಲುಗು ಇಂಡಸ್ಟ್ರಿಯಲ್ಲಿ ನಟಿಯರನ್ನ ಮಂಚಕ್ಕೆ ಕರೆಯುವ ವ್ಯಕ್ತಿಗಳು ಹೆಚ್ಚಿದ್ದಾರೆ ಎಂದು ಬೀದಿಗಿಳಿದು ಪ್ರತಿಭಟನೆ ಮಾಡುತ್ತಿರುವ ನಟಿ ಶ್ರೀರೆಡ್ಡಿ ಕೊನೆಗೂ ಖ್ಯಾತ ನಿರ್ಮಾಪಕರ ಮಗನ ಮುಖವಾಡ ಕಳಚಿದ್ದಾರೆ.
ಹೈದ್ರಾಬಾದ್ ನ ಸರ್ಕಾರಿ ಸ್ಟುಡಿಯೋಗೆ ಕರೆಸಿ ನನ್ನನ್ನು, ಖ್ಯಾತ ನಿರ್ಮಾಪಕನ ಮಗ ದೈಹಿಕವಾಗಿ ಬಳಸಿಕೊಂಡು, ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದ ಶ್ರೀರೆಡ್ಡಿ ಈಗ ಫೋಟೋಗಳನ್ನ ಲೀಕ್ ಮಾಡಿದ್ದಾರೆ.
ಸ್ಟುಡಿಯೋಗೆ ಕರೆಸಿ ನನ್ನನ್ನ ಬಳಸಿಕೊಂಡ ದೊಡ್ಡ ನಿರ್ಮಾಪಕನ ಮಗ: ಶ್ರೀರೆಡ್ಡಿ
ಇಷ್ಟು ದಿನ ಆಧಾರವಿಲ್ಲದೇ ಮಾತನಾಡುತ್ತಿದ್ದ ನಟಿ ಈಗ ಫೋಟೋಗಳನ್ನ ಬಹಿರಂಗಪಡಿಸಿ ಟಾಲಿವುಡ್ ಇಂಡಸ್ಟ್ರಿಯನ್ನ ಬೆಚ್ಚಿಬೀಳಿಸಿದ್ದಾರೆ. ಇದರಿಂದ ತೀವ್ರ ಆತಂಕಕ್ಕೆ ಒಳಗಾಗಿರುವ ತೆಲುಗು ಮಂದಿ, ಮುಂದೆ ಮತ್ಯಾರು ಹೆಸರು ಮತ್ತು ಫೋಟೋಗಳು ಸೋರಿಕೆಯಾಗುತ್ತೆ ಎಂಬ ಕುತೂಹಲದಿಂದ ಕಾಯುವಂತಾಗಿದೆ. ಅಷ್ಟಕ್ಕೂ, ಶ್ರೀರೆಡ್ಡಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿರುವ ಆ ನಿರ್ಮಾಪಕನ ಮಗ ಯಾರು.? ಎಂದು ತಿಳಿಯಲು ಮುಂದೆ ಓದಿ.....
ರಾಣಾ ದಗ್ಗುಬಾಟಿ ಸಹೋದರನ ಫೋಟೋ ಲೀಕ್
'ಬಾಹುಬಲಿ' ಖ್ಯಾತಿಯ ರಾಣಾ ದಗ್ಗುಬಾಟಿ ಅವರ ತಂದೆ ಸುರೇಶ್ ಬಾಬು ತೆಲುಗು ಇಂಡಸ್ಟ್ರಿಯ ದೊಡ್ಡ ನಿರ್ಮಾಪಕ. ಇವರಿಗೆ ಇಬ್ಬರು ಮಕ್ಕಳು. ರಾಣಾ ಮತ್ತು ಅಭಿರಾಮ್. ಶ್ರೀರೆಡ್ಡಿ ಆರೋಪ ಮಾಡಿರುವುದು ರಾಣಾ ಸಹೋದರ ಅಭಿರಾಮ್ ವಿರುದ್ಧ. ಅಭಿರಾಮ್ ಮತ್ತು ಶ್ರೀರೆಡ್ಡಿ ಆತ್ಮೀಯವಾಗಿರುವ ಕೆಲ ಫೋಟೋಗಳನ್ನ ನಟಿ ಬಹಿರಂಗಪಡಿಸಿದ್ದಾರೆ.
ಸ್ಟುಡಿಯೋಗೆ ಕರೆಸಿ ವಂಚನೆ ಮಾಡಿದ್ದಾನೆ
ಹೈದ್ರಾಬಾದ್ ನ ಸ್ಟುಡಿಯೋಗೆ ಕರೆಸಿ ನನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ. ಇದಕ್ಕೆ ಸಾಕ್ಷಿ ನೀಡಿದ್ದೇನೆ. ನನಗೆ ಅನ್ಯಾಯ ಮಾಡಿದ್ದು, ಸುರೇಶ್ ಬಾಬು ಅವರ ಮಗ. ನನ್ನನ್ನು ಇಷ್ಟು ದಿನ ನಿಂದಿಸುತ್ತಿದ್ದವರು ಧೈರ್ಯವಿದ್ರೆ, ಸುರೇಶ್ ಬಾಬು ಕುಟುಂಬವನ್ನ ಪ್ರಶ್ನಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಟ ಶ್ರೀಕಾಂತ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ನಟಿ ಶ್ರೀರೆಡ್ಡಿ
ಹಲವು ಹೆಣ್ಣು ಮಕ್ಕಳಿಗೆ ಅನ್ಯಾವಾಗಿದೆ
ಕೇವಲ ನನಗೆ ಮಾತ್ರವಲ್ಲ, ಈ ರೀತಿ ಹಲವು ಹೆಣ್ಣು ಮಕ್ಕಳಿಗೆ ಅಭಿರಾಮ್ ಮೋಸ ಮಾಡಿದ್ದಾನೆ. ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ನಂಬಿಸಿ, ಸ್ಟುಡಿಯೋದಲ್ಲಿ ಅತ್ಯಾಚಾರ ಮಾಡಿದ್ದಾನೆ ಎಂದು ಶ್ರೀರೆಡ್ಡಿ ಗಂಭೀರ ಆರೋಪ ಮಾಡ್ತಿದ್ದಾರೆ.
ಇನ್ನು ಹಲವು ಸಿನಿ ಕುಟುಂಬದವರಿದ್ದಾರೆ
''ಈಗ ನಿರ್ಮಾಪಕ ಸುರೇಶ್ ಬಾಬು ಅವರ ಮಗ ಅಭಿರಾಮ್ ಬಗ್ಗೆ ಮಾತ್ರ ಲೀಕ್ ಮಾಡಿದ್ದೀನಿ. ಇಂಡಸ್ಟ್ರಿಯಲ್ಲಿ ಇನ್ನು ಅನೇಕರು ಈ ರೀತಿ ನಟಿಯರಿಗೆ, ಯುವತಿಯರಿಗೆ ಮೋಸ ಮಾಡಿದ್ದಾರೆ. ಅವರ ಫೋಟೋಗಳು ಕೂಡ ನನ್ನ ಬಳಿ ಇದೆ. ಅದನ್ನ ಕೂಡ ಬಹಿರಂಗಪಡಿಸುತ್ತೇನೆ. ಅವರ ಮನೆಯ ಎದುರು ಅಥವಾ ಸ್ಟುಡಿಯೋ ಎದುರು ಪ್ರತಿಭಟನೆ ಮಾಡಲಿ'' ಎಂದು ಕಿಡಿಕಾರಿದ್ದಾರೆ.
ರಸ್ತೆಯಲ್ಲಿ ಬಟ್ಟೆ ಬಿಚ್ಚಿ ಅರೆನಗ್ನ ಪ್ರತಿಭಟನೆ ಮಾಡಿದ ನಟಿ ಶ್ರೀರೆಡ್ಡಿ
ಕಲಾವಿದರ ಸಂಘದಿಂದ ನಿಷೇದ
ತೆಲುಗು ವಾಣಿಜ್ಯ ಮಂಡಳಿ ಎದುರೆ ಅರೆನಗ್ನ ಪ್ರತಿಭಟನೆ ಮಾಡಿದ್ದ ನಟಿಯನ್ನ ಈಗಾಗಲೇ ತೆಲುಗು ಸಿನಿಮಾ ಕಲಾವಿದರ ಸಂಘ ನಿಷೇದ ಮಾಡಿದೆ. ಇದರ ಬೆನ್ನಲ್ಲೆ ಈಗ ಶ್ರೀರೆಡ್ಡಿ ಅಭಿರಾಮ್ ಫೋಟೋ ಲೀಕ್ ಮಾಡಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.