Don't Miss!
- Automobiles ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
- News SSLC Result 2024: ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ ಯಾವಾಗ? ಪರಿಶೀಲಿಸುವುದೇಗೆ?-ಮಾಹಿತಿ, ವಿವರ
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಯಾರು ಎಷ್ಟೇ ಅನುಮಾನ ಪಟ್ಟರೂ, ಶ್ರೀದೇವಿ ಸಾವಿನ ಕೇಸ್ ದುಬೈನಲ್ಲಿ ಕ್ಲೋಸ್ ಆಗಿದೆ!
ಬಾತ್
ಟಬ್
ನಲ್ಲಿ
ಶ್ರೀದೇವಿ
ಮುಳುಗಲು
ಹೇಗೆ
ಸಾಧ್ಯ?
ಶ್ರೀದೇವಿ
ಮುಳುಗುವಷ್ಟು
ಬಾತ್
ಟಬ್
ಆಳವಾಗಿತ್ತೇ?
ಮೋಹಿತ್
ಮಾರ್ವಾ
ಮದುವೆ
ಮುಗಿದ್ಮೇಲೂ,
ಶ್ರೀದೇವಿ
ದುಬೈನಲ್ಲೇ
ಉಳಿದುಕೊಂಡಿದ್ದೇಕೆ?
ಬೋನಿ
ಕಪೂರ್
ಶನಿವಾರ
ದುಬೈಗೆ
ತೆರಳಿದ್ದು
ಯಾಕೆ.?
ಸರ್
ಪ್ರೈಸ್
ಡಿನ್ನರ್
ಹಿಂದಿನ
ಗುಟ್ಟೇನು.?
- ಇಂತಹ ಹತ್ತು ಹಲವು ಪ್ರಶ್ನೆಗಳು, ಅನುಮಾನಗಳು ಅನೇಕರಲ್ಲಿ ಕಾಡುತ್ತಿದೆ. ಅದು, ಶ್ರೀದೇವಿಯ ಪೋಸ್ಟ್ ಮಾರ್ಟಂ ರಿಪೋರ್ಟ್ ಬಂದ್ಮೇಲೆ. ಫೋರೆನ್ಸಿಕ್ ರಿಪೋರ್ಟ್ ನಲ್ಲಿ ಶ್ರೀದೇವಿ ''ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ'' ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ, ಶ್ರೀದೇವಿ ಸಾವಿನ ಬಗ್ಗೆ ಸಹಜವಾಗಿ ಪ್ರಶ್ನೆಗಳು ಎದ್ದಿವೆ.
ಎಷ್ಟೇ ಪ್ರಶ್ನೆಗಳು ಎದ್ದರೂ, ಯಾರು ಎಷ್ಟೇ ಅನುಮಾನ ಪಟ್ಟರೂ, ಸದ್ಯಕ್ಕೆ ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಮಾತ್ರ ಶ್ರೀದೇವಿ ಸಾವಿನ ಕೇಸ್ ನ ಕ್ಲೋಸ್ ಮಾಡಿದೆ.
ಸ್ಫೋಟಕ ಸುದ್ದಿ: ಶ್ರೀದೇವಿ ತಲೆಯ ಭಾಗದಲ್ಲಿ ಗಾಯದ ಗುರುತು ಪತ್ತೆ.?!
Dubai Public Prosecution stressed that all regular procedures followed in such cases have been completed. As per the forensic report, the death of the Indian actress occurred due to accidental drowning following loss of consciousness. The case has now been closed.
— Dubai Media Office (@DXBMediaOffice) February 27, 2018
ದುಬೈನಲ್ಲಿ ವಿದೇಶಿ ಪ್ರಜೆ ಮೃತಪಟ್ಟಾಗ, ಅನುಸರಿಸಬೇಕಾದ ಎಲ್ಲ ಕಾನೂನು ಪ್ರಕ್ರಿಯೆಗಳು ಶ್ರೀದೇವಿ ಸಾವಿನ ಪ್ರಕರಣದಲ್ಲೂ ಅನುಸರಿಸಲಾಯಿತು. ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ಮೇಲೆ, ದುಬೈ ಪೊಲೀಸರ ತನಿಖೆ ಮುಗಿದ್ಮೇಲೆ, ಶ್ರೀದೇವಿ ಸಾವಿನ ಪ್ರಕರಣವನ್ನ ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಕ್ಲೋಸ್ ಮಾಡಿದೆ.
#Sridevi's Homecoming: Body to reach #Mumbai by late evening https://t.co/l99VoG7Kop pic.twitter.com/wOzONQcCcX
— Khaleej Times (@khaleejtimes) February 27, 2018
ಆಕಸ್ಮಿಕವಾಗಿ ಶ್ರೀದೇವಿ ನೀರಿನಲ್ಲಿ ಮುಳುಗಿ, ಪ್ರಜ್ಞೆ ತಪ್ಪಿ, ಪ್ರಾಣ ಬಿಟ್ಟಿದ್ದಾರೆ ಎಂದು ಫೋರೆನ್ಸಿಕ್ ವರದಿಯಲ್ಲಿ ಉಲ್ಲೇಖ ಆಗಿರುವುದರಿಂದ ದುಬೈ ಪಬ್ಲಿಕ್ ಪ್ರಾಸಿಕ್ಯೂಷನ್ ಪ್ರಕರಣಕ್ಕೆ ಅಂತ್ಯ ಹಾಡಿ, ಕುಟುಂಬಕ್ಕೆ ಶ್ರೀದೇವಿ ಪಾರ್ಥೀವ ಶರೀರವನ್ನ ಹಸ್ತಾಂತರಿಸಿದೆ.
ಶ್ರೀದೇವಿ ಬದುಕಿನ ಕಹಿ ಸತ್ಯ ಅನಾವರಣ ಮಾಡಿದ ರಾಮ್ ಗೋಪಾಲ್ ವರ್ಮಾ
Sridevi Live Updates: Body on way to the airport #Sridevihttps://t.co/3ThGYAfbTf pic.twitter.com/y0RqC1OxwN
— Khaleej Times (@khaleejtimes) February 27, 2018
ಎಂಬ್ಲೇಮಿಂಗ್ (ಪಾರ್ಥೀವ ಶರೀರವನ್ನ ಸಂರಕ್ಷಿಸುವ ಪ್ರಕ್ರಿಯೆ) ಮುಗಿದಿದ್ದು, ಶ್ರೀದೇವಿ ಪಾರ್ಥೀವ ಶರೀರ ಸದ್ಯ ದುಬೈ ಏರ್ ಪೋರ್ಟ್ ತಲುಪಿದೆ.
#Sridevi's Homecoming: Body to reach #Mumbai by late evening https://t.co/l99VoG7Kop pic.twitter.com/wOzONQcCcX
— Khaleej Times (@khaleejtimes) February 27, 2018
ಇಂದು ರಾತ್ರಿ ಭಾರತಕ್ಕೆ ಶ್ರೀದೇವಿ ಪಾರ್ಥೀವ ಶರೀರ ತರಲಾಗುವುದು.