Don't Miss!
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- News ಅಮಿತ್ ಶಾ ಓರ್ವ ಗೂಂಡಾ, ರೌಡಿ.! ಯತೀಂದ್ರ ಸಿದ್ದರಾಮಯ್ಯ ತೀವ್ರ ವಾಗ್ದಾಳಿ
- Automobiles Hyundai Creta: ಜನಪ್ರಿಯ ಹ್ಯುಂಡೈ ಕ್ರೆಟಾ ಕಾರನ್ನು ಮನೆಗೆ ತರಬೇಕೇ.. ಆನ್-ರೋಡ್ ಬೆಲೆ ಎಷ್ಟು? EMI ಏನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಶ್ರೀದೇವಿ ಸಾವಿಗೆ ಟ್ವಿಸ್ಟ್: ಪ್ಯ್ಲಾನ್ ಮಾಡಿ ಕೊಲ್ಲಲಾಗಿದೆಯಂತೆ.!
ಬಾಲಿವುಡ್ ಎವರ್ ಗ್ರೀನ್ ನಟಿ ಶ್ರೀದೇವಿ ಅವರ ಅಕಾಲಿಕ, ಅನಿರೀಕ್ಷಿತ ಸಾವನ್ನ ಯಾರೊಬ್ಬರು ಮರೆಯವುದಿಲ್ಲ. ಫೆಬ್ರವರಿ 24ರಂದು ಸಂಬಂಧಿಕರ ಮದುವೆಗೆಂದು ಹೋಗಿದ್ದ ಶ್ರೀದೇವಿ ದುಬೈನ ಹೋಟೆಲ್ ನ ಬಾತ್ ಟಾಬ್ ನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದರು.
ಆರಂಭದಲ್ಲಿ ಶ್ರೀದೇವಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು ಎಂದು ಹೇಳಲಾಯಿತು. ನಂತರ ಮರಣೋತ್ತರ ಪರೀಕ್ಷೆ ನಡೆಸಿದ ದುಬೈ ಪೊಲೀಸರು ಅಕಸ್ಮಾತ್ತಾಗಿ ಬಾತ್ ಟಾಬ್ ನಲ್ಲಿ ಮುಳಗಿ ನಿಧನ ಹೊಂದಿದ್ದಾರೆ ಎಂದು ವರದಿ ನೀಡಿದರು.
ಶ್ರೀದೇವಿ ಸಾವಿನ ಪ್ರಕರಣಕ್ಕೆ ಮರುಜೀವ: ಸುಪ್ರೀಂ ಅಂಗಳದಲ್ಲಿ ಡೆತ್ ಮಿಸ್ಟರಿ.!
ಆದ್ರೆ, ಶ್ರೀದೇವಿ ಸಾವಿನ ಬಗ್ಗೆ ತನಿಖೆ ಮಾಡಬೇಕು, ಇದು ಸಹಜ ಸಾವಲ್ಲ ಎಂದು ಈ ಹಿಂದೆ ಕೆಲವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಎಷ್ಟೇ ಅನುಮಾನಗಳನ್ನ ವ್ಯಕ್ತಪಡಿಸಿದರೂ, ಸರ್ವೋಚ್ಚ ನ್ಯಾಯಾಲಯ ಮಾತ್ರ ಈ ಅರ್ಜಿಗಳನ್ನ ಪರಿಷ್ಕರಿಸಲೇ ಇಲ್ಲ. ಇದೀಗ, ದೆಹಲಿಯ ಮಾಜಿ ಪೊಲೀಸ್ ಅಧಿಕಾರಿ ಶ್ರೀದೇವಿ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಇದು ಕೊಲೆ ಎಂದು ಆರೋಪಿಸಿದ್ದಾರೆ. ಮುಂದೆ ಓದಿ....
ಮಾಜಿ ಎಸಿಪಿಯಿಂದ ಆರೋಪ
ನಟಿ ಶ್ರೀದೇವಿ ಅವರದ್ದು ಸಹಜ ಸಾವಲ್ಲ. ಅವರನ್ನ ಪ್ಲ್ಯಾನ್ ಮಾಡಿ ಕೊಲೆ ಮಾಡಲಾಗಿದೆ ಎಂದು ದೆಹಲಿಯ ಮಾಜಿ ಎಸಿಪಿ ವೇದ್ ಭೂಷಣ್ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ಶ್ರೀದೇವಿ ಸಾವಿನ ಬಗ್ಗೆ ನನಗೆ ಅನುಮಾನ ಇದೆ ಎಂದು ಹೇಳಿದ್ದು, ಇದು ಬಾಲಿವುಡ್ ಮಂದಿಗೆ ಅಚ್ಚರಿಯಾಗಿದೆ.
ಶ್ರೀದೇವಿ ಸಾವಿನ ತನಿಖೆ ಅಗತ್ಯ
ದುಬೈ ಪೊಲೀಸರು ನೀಡಿರುವ ಮರಣೋತ್ತರ ಪರೀಕ್ಷೆಯ ವರದಿ ಬಗ್ಗೆ ನನಗೆ ಅನುಮಾನವಿದೆ. ಬಾತ್ ಟಾಬ್ ನಲ್ಲಿ ಬಲವಂತವಾಗಿ ಮುಳುಗಿಸಿ ಸಾಯಿಸಬಹುದು. ನಂತರ ಸಹಜವಾಗಿ ಬಿದ್ದರು ಎಂದು ತಪ್ಪಿಸಿಕೊಳ್ಳಬಹುದು. ಶ್ರೀದೇವಿ ಅವರ ವಿಚಾರದಲ್ಲೂ ಅಷ್ಟೇ. ಅವರು ದುರದೃಷ್ಟವಶಾತ್ ಸಾಯಲಿಲ್ಲ. ಯಾರೋ ಪ್ಲ್ಯಾನ್ ಮಾಡಿ ಕೊಂದಿದ್ದಾರೆ'' ಎಂದು ಶಂಕೆ ಹೊರಹಾಕಿದ್ದಾರೆ.
ಸ್ಫೋಟಕ ಸುದ್ದಿ: ಶ್ರೀದೇವಿ ತಲೆಯ ಭಾಗದಲ್ಲಿ ಗಾಯದ ಗುರುತು ಪತ್ತೆ.?!
ತನಿಖೆಗೆ ಮುಂದಾಗ್ತಾರ ವೇದ್ ಭೂಷಣ್.?
ಅಂದ್ಹಾಗೆ, ಮಾಜಿ ಎಸಿಪಿ ವೇದ್ ಭೂಷಣ್ ಅವರು ಈಗ ಖಾಸಗಿಯಾಗಿ ತನಿಖೆ ಸಂಸ್ಥೆಯನ್ನ ನಡೆಸುತ್ತಿದ್ದಾರೆ. ಬಹುಶಃ ಶ್ರೀದೇವಿ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಇವರು ವೈಯಕ್ತಿಕ ಆಸಕ್ತಿಯಿಂದ ತನಿಖೆ ನಡೆಸಲು ಮುಂದಾಗಬಹುದು ಎಂದು ಹೇಳಲಾಗ್ತಿದೆ.
ಕೋರ್ಟ್ ಯಾಕೆ ಅರ್ಜಿ ತಿರಸ್ಕರಿಸುತ್ತಿದೆ
ಈಗಾಗಲೇ ಶ್ರೀದೇವಿನ ಬಗ್ಗೆ ತನಿಖೆ ನಡೆಸಿ ಎಂದು ಮೂರ್ನಾಲ್ಕು ಅರ್ಜಿಗಳು ಸುಪ್ರೀಂ ಕೋರ್ಟ್ ಬಾಗಿಲು ಮುಟ್ಟಿದ್ದರು, ಆ ಅರ್ಜಿಗಳನ್ನ ನ್ಯಾಯಾಲಯ ತಿರಸ್ಕರಿಸುತ್ತಲೇ ಇದೆ. ಯಾಕೆ ತನಿಖೆಗೆ ಆದೇಶ ನೀಡುತ್ತಿಲ್ಲ ಎಂಬ ಪ್ರಶ್ನೆ ಹಲವರದ್ದು.?