Don't Miss!
- News ರಾತ್ರೋ ರಾತ್ರಿ ಪತ್ರಿಕಾಗೋಷ್ಠಿ ನಡೆಸಿ ವಿ.ಶ್ರೀನಿವಾಸ ಪ್ರಸಾದ್ ಅಳಿಯ ಏನು ಹೇಳಿದ್ರು ಗೊತ್ತಾ?
- Sports IPL 2024: ಮುಂಬೈ ಇಂಡಿಯನ್ಸ್ ತಂಡ ಸೇರಿದ ಮಾಜಿ ನಾಯಕ: ಹಾಲಿ ನಾಯಕನ ಆತಂಕ ದೂರ
- Lifestyle ಫ್ಲ್ಯಾಟ್ನಲ್ಲಿ ವಾಸಿಸಲು ಹೋಗುವಾಗ ಸಮೃದ್ಧಿ, ಆರೋಗ್ಯಕ್ಕಾಗಿ ವಾಸ್ತು ಹೀಗಿದೆಯೇ ಎಂದು ನೋಡಬೇಕು
- Technology ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಇನ್ಫಿನಿಕ್ಸ್ ನೋಟ್ 40 ಪ್ರೊ ಪ್ಲಸ್ 5G ಫೋನ್: ಫೀಚರ್ಸ್ ಹೇಗಿದೆ?
- Automobiles ಡಿ ಬಾಸ್ ಪತ್ನಿ ಖರೀದಿಸಿದ್ದು ಸಾಮಾನ್ಯ ಕಾರಲ್ಲ: ಬಂಗಲೆಯಂತಹ ಇಂಟೀರಿಯರ್!
- Finance ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ, ನಿಮ್ಮ ನಗರದಲ್ಲಿ 24 ಕ್ಯಾರೆಟ್ ಚಿನ್ನದ ದರ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಭರಾಟೆ'ಯಿಂದ ಬಂತು ಭರ್ಜರಿ ಸುದ್ದಿ: 9 ಕೇಡಿಗಳ ವಿರುದ್ಧ ಸಿಡಿದು ನಿಲ್ತಾರೆ ಶ್ರೀಮುರಳಿ.!
Recommended Video
'ಮಫ್ತಿ' ಬಳಿಕ ರೋರಿಂಗ್ ಸ್ಟಾರ್ ಶ್ರೀಮುರಳಿ 'ಭರಾಟೆ' ಸಿನಿಮಾಗೆ ಚಾಲನೆ ನೀಡಿರುವುದು ನಿಮಗೆಲ್ಲಾ ಗೊತ್ತೇ ಇದೆ. 'ಬಹದ್ದೂರ್' ಹಾಗೂ 'ಭರ್ಜರಿ' ಸಿನಿಮಾಗಳ ನಂತರ ನಿರ್ದೇಶಕ ಚೇತನ್ 'ಭರಾಟೆ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.
ಈಗಾಗಲೇ 'ಭರಾಟೆ' ಸಿನಿಮಾದ ಫೋಟೋಶೂಟ್ ರಾಜಸ್ಥಾನದಲ್ಲಿ ಅದ್ಧೂರಿಯಾಗಿ ನಡೆದಿದೆ. ಫೋಟೋಶೂಟ್ ಗಾಗಿಯೇ ಲೊಕೇಶನ್ ಹುಡುಕಿ ರಾಜಸ್ಥಾನದವರೆಗೂ ಪ್ರಯಾಣ ಮಾಡಿರುವ ಈ ತಂಡ, ಇಡೀ ಚಿತ್ರವನ್ನೂ ಗ್ರ್ಯಾಂಡ್ ಆಗಿ ತೆರೆಮೇಲೆ ಮೇಲೆ ತರಲು ಸಜ್ಜಾಗುತ್ತಿದೆ.
ಈ ನಡುವೆ 'ಭರಾಟೆ' ಅಡ್ಡದಿಂದ ಒಂದು ಭರ್ಜರಿ ಸುದ್ದಿ ಬ್ರೇಕ್ ಆಗಿದೆ. ಅದೇನು ಅಂತ ತಿಳಿಯುವ ಕುತೂಹಲ ಇದ್ದರೆ, ಫೋಟೋ ಸ್ಲೈಡ್ ಗಳತ್ತ ಕಣ್ಣಾಡಿಸಿ...
ಇದೇ ನೋಡಿ ಭರ್ಜರಿ ಸುದ್ದಿ.!
'ಭರಾಟೆ' ಸಿನಿಮಾದಲ್ಲಿ ಒಂದಲ್ಲ, ಎರಡಲ್ಲ... ಬರೋಬ್ಬರಿ 9 ನೆಗೆಟಿವ್ ಕ್ಯಾರೆಕ್ಟರ್ ಗಳು ಇರಲಿವೆ. 9 ಜನ ನಡೆಸುವ ಮಸಲತ್ತಿನ ವಿರುದ್ಧ ಸಿಡಿದು ನಿಲ್ಲಲ್ಲಿದ್ದಾರೆ ರೋರಿಂಗ್ ಸ್ಟಾರ್ ಶ್ರೀಮುರಳಿ.
'ಬ'ಹದ್ದೂರ್ ಚೇತನ್ಗೆ 'ಬ'೦ದ ಅದೃಷ್ಟ: ಹ್ಯಾಟ್ರಿಕ್ 'ಬಾ'ರಿಸುತ್ತಾರಾ ಯುವ ನಿರ್ದೇಶಕ?!
ಜನಪ್ರಿಯ ಕೇಡಿಗಳೇ ಅಖಾಡಕ್ಕೆ ಇಳಿಯಲಿದ್ದಾರೆ.
ಬಾಲಿವುಡ್ ನಲ್ಲಿ ಹೆಸರು ಮಾಡಿರುವ ಸೋನು ಸೂದ್, ಟಾಲಿವುಡ್ ನ ಖ್ಯಾತ ನಟರಾದ ಜಗಪತಿ ಬಾಬು, ಸುಮನ್ ಸೇರಿದಂತೆ ಪ್ರಖ್ಯಾತ ವಿಲನ್ ಪಾತ್ರಧಾರಿಗಳೇ 'ಭರಾಟೆ' ಚಿತ್ರದ 9 ನೆಗೆಟಿವ್ ಕ್ಯಾರೆಕ್ಟರ್ ಗಳಿಗೆ ಬಣ್ಣ ಹಚ್ಚಲಿದ್ದಾರಂತೆ.
ಮಾತುಕತೆ ಹಂತದಲ್ಲಿದೆ
''ಚಿತ್ರದಲ್ಲಿ 9 ನೆಗೆಟಿವ್ ಪಾತ್ರಗಳಿವೆ. ಆ ಪಾತ್ರಗಳಲ್ಲಿ ಸುಮನ್, ಸಂಪತ್ ಕುಮಾರ್, ಸೋನು ಸೂದ್ ಸೇರಿದಂತೆ ಹಲವು ನಟ ಕಾಲ್ ಶೀಟ್ ಗಾಗಿ ಮಾತುಕತೆ ನಡೆಸಿದ್ದೇವೆ'' ಎಂದು ನಿರ್ದೇಶಕ ಚೇತನ್ 'ಫಿಲ್ಮಿಬೀಟ್ ಕನ್ನಡ'ಕ್ಕೆ ಖಚಿತ ಪಡಿಸಿದ್ದಾರೆ.
ಮಾಸ್ ಕಮ್ ಕ್ಲಾಸ್
''ಶ್ರೀಮುರಳಿ ರವರಿಗೆ ಯಾವ ಇಮೇಜ್ ಇದ್ಯೋ, ಆ ಇಮೇಜ್ ಗೆ ತಕ್ಕ ಹಾಗೆ ಕಥೆ ರೆಡಿ ಮಾಡಲಾಗಿದೆ. 'ಭರಾಟೆ' ಫ್ಯಾಮಿಲಿ ಎಂಟರ್ ಟೇನರ್. ಜೊತೆಗೆ ಮಾಸ್ ಎಲಿಮೆಂಟ್ಸ್ ಕೂಡ ಇದೆ'' ಎನ್ನುತ್ತಾರೆ ಡೈರೆಕ್ಟರ್ ಚೇತನ್.
'ಭರಾಟೆ' ಕುರಿತು
ಶ್ರೀಮುರಳಿ ಹಾಗೂ ಶ್ರೀಲೀಲಾ ಅಭಿನಯದ 'ಭರಾಟೆ' ಚಿತ್ರಕ್ಕೆ ಬಂಡವಾಳ ಹಾಕುತ್ತಿರುವವರು ಸುಪ್ರೀತ್. ಸಿನಿಮಾಗೆ ಭುವನ್ ಗೌಡ ಛಾಯಾಗ್ರಹಣ, ಮೋಹನ್.ಬಿ.ಕೆರೆ ಕಲಾ ನಿರ್ದೇಶನ ಇರಲಿದೆ.