ಚುನಾವಣೆಯಲ್ಲಿ ಗೆದ್ದ ಅಪ್ಪನಿಗೆ ಶ್ರೀ ಮುರಳಿ ಶುಭಾಶಯ
Recommended Video

ನಿನ್ನೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ನಡೆದಿದೆ. ಅದರಲ್ಲಿ ನಿರ್ಮಾಪಕ ಚಿನ್ನೆಗೌಡ ವಿಜಯ ಸಾಧಿಸಿದ್ದು, ಫಿಲ್ಮ್ ಚೆಂಬರ್ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಚುನಾವಣೆಯಲ್ಲಿ ಗೆದ್ದಿರುವುದು ಚಿನ್ನೆಗೌಡ ಅವರ ಇಡೀ ಕುಟುಂಬಕ್ಕೆ ತುಂಬ ಸಂತೋಷ ತಂದಿದೆಯಂತೆ. ಈ ಸಂತಸವನ್ನು ನಟ ಹಾಗೂ ಚಿನ್ನೆಗೌಡ ಮಗ ಶ್ರೀ ಮುರಳಿ ತಮ್ಮ ಫೇಸ್ ಬುಕ್ ಹಾಗೂ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

''ನಮ್ಮ ಅಪ್ಪಾಜಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಹೊಸ ಅಧ್ಯಕ್ಷರಾಗಿದ್ದಾರೆ. ಅವರಿಗೆ ಶುಭಾಶಯ. ನಮ್ಮ ತಂದೆ ಗೆಲುವಿಗೆ ಕಾರಣರಾದ ಎಲ್ಲರಿಗೆ ಧನ್ಯವಾದ'' ಎಂದಿದ್ದಾರೆ.
ಅಂದಹಾಗೆ, ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ, ಉಪಾದ್ಯಕ್ಷ, ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳ ಸ್ಥಾನಕ್ಕೆ ಮಂಗಳವಾರ (ಜೂನ್ 26) ರಂದು ಚುನಾವಣೆ ನಡೆದಿದ್ದು, ಪಾರ್ವತಮ್ಮ ರಾಜ್ ಕುಮಾರ್ ಸಹೋದರ ಹಾಗೂ ನಿರ್ಮಾಪಕರಾದ ಚಿನ್ನೇಗೌಡ ಅವರು ಆಯ್ಕೆಯಾಗಿದ್ದಾರೆ. ಇವರ ಎದುರು ವಿತರಕ ಮಾರ್ಸ್ ಸುರೇಶ್ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದರು.


Click it and Unblock the Notifications











