ಗಜನ ಜೊತೆ ಸೃಜನಿಗೂ ಸಿಕ್ತು ಹೊಸ ಬಿರುದು
ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲಿಯೂ ಗುರುತಿಸಿಕೊಂಡಿರುವ ನಟ ಸೃಜನ್ ಲೋಕೇಶ್ ತಮ್ಮ ಮಾತಿನ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಅದೇ ಕಾರಣಕ್ಕೆ ಅವರನ್ನು ಟಾಕಿಂಗ್ ಸ್ಟಾರ್ ಎಂದು ಕರೆಯುತ್ತಾರೆ.
ಈಗ ಸೃಜನ್ ಗೆ ಬರೀ ಟಾಕಿಂಗ್ ಸ್ಟಾರ್ ಅಲ್ಲ.. ಇನ್ನೊಂದು ಬಿರುದಿನಿಂದ ಅವರ ಅಭಿಮಾನಿಗಳು ಜೈಕಾರ ಹಾಕಬಹುದಾಗಿದೆ. 'ಅಭಿನಯ ರತ್ನ' ಎಂಬ ಬಿರುದು ಈಗ ಸೃಜನ್ ಲೋಕೇಶ್ ಅವರಿಗೆ ಸಿಕ್ಕಿದೆ.

ನಟ ದರ್ಶನ್ ಹಾಗೂ ಸೃಜನ್ ಲೋಕೇಶ್ ಇತ್ತೀಚಿಗಷ್ಟೆ ಕತಾರ್ ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದರು. ಈ ವೇಳೆ ದರ್ಶನ್ ಅವರಿಗೆ 'ಕರುನಾಡ ಕಲಾ ಕುಲತಿಲಕ' ಎಂಬ ಬಿರುದನ್ನು ನೀಡಿದ್ದು, ಸೃಜನ್ ಗೆ 'ಅಭಿನಯ ರತ್ನ' ಎಂಬ ಬಿರುದು ನೀಡಿ ಗೌರವಿಸಲಾಗಿದೆ.
ಈ ಹಿಂದೆ ಕೆಲ ಸಿನಿಮಾಗಳನ್ನು ಮಾಡಿದ್ದ ಸೃಜನ್ ಸದ್ಯ ಕಿರುತೆರೆಯಲ್ಲಿ ಬ್ಯುಸಿ ಇದ್ದಾರೆ. 'ಮಜಾ ಟಾಕೀಸ್' ಮೂಲಕ ಮನೆ ಮನೆ ಮಾತಾಗಿದ್ದಾರೆ.
More from Filmibeat
English summary
Kannada actor Srujan Lokesh honored with Abinaya Rathna title in qatar kannada rajyotsava program.


Click it and Unblock the Notifications











