twitter
    For Quick Alerts
    ALLOW NOTIFICATIONS  
    For Daily Alerts

    ಅರ್ಜುನ್ ಸರ್ಜಾ-ಶ್ರುತಿ ಹರಿಹರನ್ ಸಂಧಾನ ವಿಫಲ: ಅಂಬಿ ಪ್ರಯತ್ನ ಫೇಲ್.!

    |

    ರೆಬೆಲ್ ಸ್ಟಾರ್ ಅಂಬರೀಶ್ ಸಂಧಾನ ವಿಫಲಗೊಂಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಇವತ್ತು ನಡೆದ ಸಭೆಯಲ್ಲಿ ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್ ನಡುವೆ ಒಮ್ಮತ ಮೂಡಲಿಲ್ಲ. ಹೀಗಾಗಿ, ಕಲಾವಿದರ ಸಂಘದ ಅಧ್ಯಕ್ಷ ಅಂಬರೀಶ್ ಪ್ರಯತ್ನ ಫೇಲ್ ಆಯ್ತು.

    ಇಂದು ಸಂಜೆ 4.30 ರ ವೇಳೆಗೆ ಫಿಲ್ಮ್ ಚೇಂಬರ್ ನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ನೇತೃತ್ವದಲ್ಲಿ ವಿಚಾರಣೆ ಸಭೆ ನಡೆಯಿತು. ಸಭೆಯಲ್ಲಿ ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಸಭೆಯಲ್ಲಿ ಹಾಜರ್ ಇದ್ದರು.

    ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಜೊತೆಗೆ ಪ್ರತ್ಯೇಕವಾಗಿ ಅಂಬರೀಶ್ ಮಾತುಕತೆ ನಡೆಸಿದರು. ಪ್ರಕರಣಕ್ಕೆ ಸುಖಾಂತ್ಯ ಕಾಣಿಸಲು ಅಂಬರೀಶ್ ಪ್ರಯತ್ನ ಪಟ್ಟರು. ಆದರೆ ಅದು ಸಾಕಾರ ಆಗಲಿಲ್ಲ. ಮುಂದೆ ಓದಿರಿ...

    ಬಿಗಿ ಪಟ್ಟು ಹಿಡಿದ ಶ್ರುತಿ ಹರಿಹರನ್

    ಬಿಗಿ ಪಟ್ಟು ಹಿಡಿದ ಶ್ರುತಿ ಹರಿಹರನ್

    ''ಶ್ರುತಿ ಹರಿಹರನ್ ಬಹಿರಂಗವಾಗಿ ಕ್ಷಮೆ ಕೇಳಬೇಕು'' ಎಂದು ಅರ್ಜುನ್ ಸರ್ಜಾ ಬಿಗಿ ಪಟ್ಟು ಹಿಡಿದರು. ಅದ್ರೆ, ''ಕ್ಷಮೆ ಕೇಳಲ್ಲ'' ಅಂತ ಶ್ರುತಿ ಹರಿಹರನ್ ಕಡ್ಡಿ ತುಂಡು ಮಾಡಿದ ಹಾಗೆ ಹೇಳಿದರು. ಹೀಗಾಗಿ ಸಂಧಾನ ವಿಫಲವಾಯಿತು.

    ಶ್ರುತಿ ಹರಿಹರನ್ ವಿರುದ್ಧ ಎಫ್.ಐ.ಆರ್ ದಾಖಲುಶ್ರುತಿ ಹರಿಹರನ್ ವಿರುದ್ಧ ಎಫ್.ಐ.ಆರ್ ದಾಖಲು

    ಸಾಕ್ಷಿ ಕೊಡದ ಶ್ರುತಿ ಹರಿಹರನ್

    ಸಾಕ್ಷಿ ಕೊಡದ ಶ್ರುತಿ ಹರಿಹರನ್

    ''#ಮೀಟೂ ಅಭಿಯಾನ ಚಿತ್ರರಂಗದಲ್ಲಿ ಶುರುವಾಗಿದೆ. ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಹೆಸರು #ಮೀಟೂದಲ್ಲಿ ಬಂದಿದೆ. ಇಬ್ಬರ ನಡುವೆ ಸಂಧಾನ ಮಾಡಲು ಮುಂದಾದ್ವಿ. ಇಬ್ಬರ ಮಧ್ಯೆ ಏನಾಯ್ತು ಅಂತ ನಾವು ಕೂಲಂಕುಶವಾಗಿ ಕೇಳಿದ್ವಿ. ಶ್ರುತಿ ಹರಿಹರನ್ ಯಾವುದೇ ಸಾಕ್ಷಿ, ದಾಖಲೆ ನಮಗೆ ಕೊಟ್ಟಿಲ್ಲ'' ಅಂತ ಪತ್ರಿಕಾಗೋಷ್ಠಿಯಲ್ಲಿ ಅಂಬರೀಶ್ ಹೇಳಿದರು.

    ಸರ್ಜಾ ವಿರುದ್ಧ ಷಡ್ಯಂತ್ರ ರೂಪಿಸಲು ಶ್ರುತಿಗೆ ಇಬ್ಬರು ಕನ್ನಡ ನಟರು ಸಾಥ್.?ಸರ್ಜಾ ವಿರುದ್ಧ ಷಡ್ಯಂತ್ರ ರೂಪಿಸಲು ಶ್ರುತಿಗೆ ಇಬ್ಬರು ಕನ್ನಡ ನಟರು ಸಾಥ್.?

    ಕೋರ್ಟ್ ನಲ್ಲಿ ಕೇಸ್ ಇದೆ

    ಕೋರ್ಟ್ ನಲ್ಲಿ ಕೇಸ್ ಇದೆ

    ''ಕೆಲ ಆಪ್ಷನ್ ಗಳನ್ನು ಕೊಟ್ವಿ. ಅದು ಎಲ್ಲಿ ತನಕ ಬರುತ್ತೆ ಅನ್ನೋದು ಅವರಿಗೆ ಬಿಟ್ಟಿದ್ದೀವಿ. ಕೋರ್ಟಿಗೆ ಕೇಸ್ ಹೋದಾಗ, ಮಾತನಾಡುವ ಅರ್ಹತೆ ನಮಗೆ ಇಲ್ಲ. ಹೀಗಾಗಿ, ಅವರ ನಿರ್ಧಾರ ಅವರಿಗೆ ಬಿಟ್ಟಿದ್ದೇವೆ. ಇಬ್ಬರಿಗೂ ಬೇಸರ ಆಗಿದೆ. ತಕ್ಷಣಕ್ಕೆ ಪರಿಹಾರ ಸೂಚಿಸುವ ವಿಷಯ ಅಲ್ಲ ಇದು'' ಅಂತಾರೆ ಅಂಬರೀಶ್.

    ಅರ್ಜುನ್ ಸರ್ಜಾ ರಾಜಿ ಆಗಲ್ಲ: ಶ್ರುತಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು.!ಅರ್ಜುನ್ ಸರ್ಜಾ ರಾಜಿ ಆಗಲ್ಲ: ಶ್ರುತಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು.!

    ಚಿತ್ರರಂಗದವರಿಗೆ ಜಾತಿ ಇಲ್ಲ

    ಚಿತ್ರರಂಗದವರಿಗೆ ಜಾತಿ ಇಲ್ಲ

    ''ಲೆಫ್ಟ್-ರೈಟ್ ಅಂತ ಏನೂ ಇಲ್ಲ. ಚಿತ್ರರಂಗದವರಿಗೆ ಜಾತಿ ಇಲ್ಲ. ಎಲ್ಲ ಜಾತಿಯವರೂ ಸಿನಿಮಾ ನೋಡ್ತಾರೆ. ಹಾಗಂತ ಯಾರಾದರೂ ಅಂದುಕೊಂಡಿದ್ದರೆ, ಅದು ಅವರ ಭ್ರಮೆ'' - ಅಂಬರೀಶ್, ನಟ, ಕಲಾವಿದರ ಸಂಘದ ಅಧ್ಯಕ್ಷ.

    ಸರ್ಜಾ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಳಸಂಚು: ಸ್ಫೋಟಕ ಸುದ್ದಿ ನೀಡಿದ ಪ್ರಶಾಂತ್ ಸಂಬರ್ಗಿಸರ್ಜಾ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಳಸಂಚು: ಸ್ಫೋಟಕ ಸುದ್ದಿ ನೀಡಿದ ಪ್ರಶಾಂತ್ ಸಂಬರ್ಗಿ

    'ಫೈರ್' ಸಂಸ್ಥೆ ಬಗ್ಗೆ ಅಂಬರೀಶ್ ಕಾಮೆಂಟ್

    'ಫೈರ್' ಸಂಸ್ಥೆ ಬಗ್ಗೆ ಅಂಬರೀಶ್ ಕಾಮೆಂಟ್

    ''ಫೈರ್' ಸಂಸ್ಥೆಯಿಂದ ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಹಲವರು ಹೊರಗೆ ಬಂದಿದ್ದಾರೆ. ಅಲ್ಲಿಗೆ, ಆ ಸಂಸ್ಥೆ ಸರಿ ಇಲ್ಲ ಅಂತರ್ಥ'' ಎನ್ನುತ್ತಾರೆ ಅಂಬರೀಶ್.

    ಶ್ರುತಿ ಹರಿಹರನ್ ವಿರುದ್ಧ ಅರ್ಜುನ್ ಸರ್ಜಾ ಸದ್ಯ ಕೋರ್ಟ್ ಮೆಟ್ಟಿಲೇರಿದ್ದಾರೆ. ಶ್ರುತಿ ಹರಿಹರನ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. #ಮೀಟೂ ವಿವಾದ ಕೋರ್ಟ್ ನಲ್ಲಿ ಏನು ನಿರ್ಧಾರ ಆಗುತ್ತೋ, ನೋಡಬೇಕು.

    English summary
    Sruthi Hariharan allegations against Arjun Sarja: Ambareesh addresses Press meet in KFCC.
    Thursday, October 25, 2018, 20:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X