Don't Miss!
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- News Mandya: ಏಪ್ರಿಲ್ 24 ರಿಂದ 26ರ ವರೆಗೆ ಮಂಡ್ಯದಲ್ಲಿ ಪ್ರತಿಬಂಧಕಾಜ್ಞೆ ಜಾರಿ
- Automobiles ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿರು-ಸುದೀಪ್ ಜೋಡಿಯ ಸೈರಾ ನೋಡಿ ರಾಜಮೌಳಿ ಹೇಳಿದ್ದೇನು?
ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೈರಾ ನರಸಿಂಹ ರೆಡ್ಡಿ ಗಾಂಧಿ ಜಯಂತಿ ಪ್ರಯುಕ್ತ ಅಕ್ಟೋಬರ್ 2 ರಂದು ಐದು ಭಾಷೆಯಲ್ಲಿ ವರ್ಲ್ಡ್ ವೈಡ್ ತೆರೆಕಂಡಿದೆ. ಮೊದಲ ದಿನ ಸಿನಿಮಾ ನೋಡಿದ ಪ್ರೇಕ್ಷಕರು ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.
ಚಿರಂಜೀವಿ ಸಿನಿ ಜೀವನದಲ್ಲಿ ಇಂತಹ ಸಿನಿಮಾ ಮಾಡಿಲ್ಲ, ಮುಂದೆ ಮಾಡಲ್ಲ ಎಂಬ ಮಾತುಗಳು ಚಿತ್ರಜಗತ್ತಿನಲ್ಲಿ ಕೇಳಿಬರುತ್ತಿದೆ. ಈ ಚಿತ್ರದಲ್ಲಿ ಅವುಕ ರಾಜು ಪಾತ್ರದಲ್ಲಿ ನಟಿಸಿರುವ ಕನ್ನಡ ನಟ ಸುದೀಪ್ ಅವರ ಅಭಿನಯ ಕಂಡು ಸ್ಯಾಂಡಲ್ ವುಡ್ ಪ್ರೇಕ್ಷಕರು ಖುಷಿಯಾಗಿದ್ದಾರೆ.
'ಸೈರಾ' ಟ್ವಿಟ್ಟರ್ ವಿಮರ್ಶೆ: ಮೊದಲ ಶೋ ನೋಡಿದ ಪ್ರೇಕ್ಷಕರು ಹೇಳಿದ್ದನು?
ಇದೀಗ, ಸೈರಾ ಚಿತ್ರ ನೋಡಿರುವ ಖ್ಯಾತ ನಿರ್ದೇಶಕ ಎಸ್ ಎಸ್ ರಾಜಮೌಳಿ ಚಿತ್ರದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಚಿರಂಜೀವಿ ನಟನೆ ಕಂಡ ಮೂಕವಿಸ್ಮಿತವಾಗಿರುವೆ ಎಂದು ಹೇಳಿರುವ ರಾಜಮೌಳಿ, ಸುದೀಪ್ ನಟನೆಗೂ ಸಂತಸ ವ್ಯಕ್ತಪಡಿಸಿದ್ದಾರೆ.
''ಸೈರಾ ನರಸಿಂಹ ರೆಡ್ಡಿ ಪಾತ್ರದಲ್ಲಿ ಚಿರಂಜೀವಿ ಜೀವಿಸಿದ್ದಾರೆ. ಕಳೆದುಹೋಗಿದ್ದ ಇತಿಹಾಸವನ್ನ ಬೆಂಕಿಯಂತೆ ಮತ್ತೆ ಮರುಕಳಿಸಿದ್ದಾರೆ. ಜಗಪತಿಬಾಬು ಅವರು, ನಮ್ಮ ಕಿಚ್ಚ ಸುದೀಪ್ ಅವರು, ವಿಜಯ್ ಸೇತುಪತಿ, ನಯನತಾರ, ತಮನ್ನಾ ಪಾತ್ರಗಳು ಆ ಕಥೆಯ ಒಳಗೆ ಹೆಣೆದುಕೊಂಡಿದ್ದು, ಬಹಳ ಆಸಕ್ತಿಕರವಾಗಿದೆ'' ಎಂದು ಟ್ವೀಟ್ ಮಾಡಿದ್ದಾರೆ.
ನಿಯಮ ಮೀರಿ ರಿಲೀಸ್ ಆಗುತ್ತಿದೆ 'ಸೈರಾ': ತೆಲುಗಿನಲ್ಲಿರೊ ರೂಲ್ಸ್ ಇಲ್ಲಿ ಯಾಕೆ ಇಲ್ಲ
ಹಾಗೆ, ನಿರ್ದೇಶಕ ಸುರೇಂದರ್ ರೆಡ್ಡಿ ಮತ್ತು ನಿರ್ಮಾಪಕ ರಾಮ್ ಚರಣ್ ತೇಜ ಅವರಿಗೂ ಶುಭಾಶಯ ತಿಳಿಸಿದ್ದಾರೆ.
ಪ್ರಥಮ ಸ್ವಾತಂತ್ರ್ಯ ಹೋರಾಟಗಾರ ಎಂದು ಗುರುತಿಸಿಕೊಂಡಿರುವ ಉಯ್ಯಾಲವಾಡ ನರಸಿಂಹ ರೆಡ್ಡಿ ಅವರ ಜೀವನ ಕಥೆಯ ಚಿತ್ರ ಇದಾಗಿದ್ದು, ಮೆಗಾಸ್ಟಾರ್ ಆ ಪಾತ್ರದಲ್ಲಿ ಅಬ್ಬರಿಸಿದ್ದಾರೆ. 'ಖೈದಿ ನಂ 150' ಚಿತ್ರದ ಬಳಿಕ ಈ ಸಿನಿಮಾ ಮಾಡಿದ್ದು, ಬಹುದೊಡ್ಡ ಯಶಸ್ಸು ಕಾಣುವ ಸೂಚನೆ ನೀಡಿದೆ.