'ಯುವರತ್ನ' ಚಿತ್ರತಂಡದಲ್ಲಿ ಹರಿಕೃಷ್ಣ ಇಲ್ಲ : ಪುನೀತ್ ಚಿತ್ರಕ್ಕೆ ಬೇರೆ ಮ್ಯೂಸಿಕ್ ಡೈರೆಕ್ಟರ್
'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಹಾಗೂ 'ರಾಜಕುಮಾರ' ಈ ಎರಡು ಸಿನಿಮಾಗಳಿಗೆ ಸಂತೋಷ್ ಆನಂದ್ ರಾಮ್ ನಿರ್ದೇಶನ ಇದೆ. ಸಂತೋಷ್ ಅವರ ಈ ಎರಡು ಚಿತ್ರಗಳಿಗೆ ಮ್ಯೂಸಿಕ್ ನೀಡಿದ್ದು, ವಿ ಹರಿಕೃಷ್ಣ.
ಹೀಗಾಗಿ, ಸಂತೋಷ್ ಆನಂದ್ ರಾಮ್ ಅವರ ಮೂರನೇ ಸಿನಿಮಾ 'ಯುವರತ್ನ' ಚಿತ್ರಕ್ಕೂ ಹರಿಕೃಷ್ಣ ಸಂಗೀತ ನೀಡಬಹುದು ಎನ್ನುವ ಕುತೂಹಲ ಇತ್ತು. ಆದರೆ, ಈ ಸಿನಿಮಾಗೆ ಮತ್ತೊಬ್ಬ ಸಂಗೀತ ನಿರ್ದೇಶಕರ ಆಗಮನ ಆಗಿದೆ.
'ಯುವರತ್ನ' ಸಿನಿಮಾದ ಸಂಗೀತ ನಿರ್ದೇಶಕರ ಹೆಸರನ್ನು ಬಹಿರಂಗ ಪಡಿಸಲಾಗಿದೆ. ಟಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ ತಮನ್ ಈ ಚಿತ್ರಕ್ಕೆ ಮ್ಯೂಸಿಕ್ ನೀಡುತ್ತಿದ್ದಾರೆ. ಈ ಹಿಂದೆ ಕನ್ನಡದ ಕೆಲವು ಸಿನಿಮಾಗಳಿಗೆ ತಮನ್ ಕೆಲಸ ಮಾಡಿದ್ದರು.

ಪುನೀತ್ ರಾಜ್ ಕುಮಾರ್ ನಟನೆಯ 'ಪವರ್ ಸ್ಟಾರ್' ಹಾಗೂ 'ಚಕ್ರವ್ಯೂಹ' ಸಿನಿಮಾಗೆ ತಮನ್ ಸಂಗೀತ ನೀಡಿದ್ದರು. 'ಚಕ್ರವ್ಯೂಹ' ಚಿತ್ರದ ಮೂಲಕ ಗಾಯಕರನ್ನಾಗಿ ಕನ್ನಡ ಚಿತ್ರರಂಗಕ್ಕೆ ನಟ ಜೂನಿಯರ್ ಎನ್ ಟಿ ಆರ್ ಹಾಗೂ ನಟಿ ಕಾಜಲ್ ಅಗರ್ವಾಲ್ ರನ್ನು ಪರಿಚಯ ಮಾಡಿದ್ದರು.

'ಚಕ್ರವ್ಯೂಹ' ಸಿನಿಮಾದ ಹಾಡುಗಳು ಹಿಟ್ ಆಗಿದ್ದು, ತಮನ್ ಅವರ 'ಯುವರತ್ನ' ಹಾಡುಗಳ ಮೇಲೆ ನಿರೀಕ್ಷೆ ಇದೆ.


Click it and Unblock the Notifications











