Don't Miss!
- News 2024ರ ಲೋಸಕಭೆ ಚುನಾವಣೆಗೆ ಮತ ಹಾಕುವುದು ಹೇಗೆ?
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರಂಗಿತರಂಗ'ನೋಡಿ ಭೇಷ್ ಎಂದ ಅಲ್ಲು ಅರ್ಜುನ್
ಗಾಂಧಿನಗರದಲ್ಲಿ 'ರಂಗಿತರಂಗ' ಹವಾ ಜೋರಾಗೆ ಇದೆ ಅನ್ನೋದಕ್ಕೆ ಉತ್ತಮ ನಿದರ್ಶನ ಅಂದ್ರೆ ಸ್ಯಾಂಡಲ್ ವುಡ್ ಸ್ಟಾರ್ ಗಳು ಚಿತ್ರ ವೀಕ್ಷಿಸಿ ಹೊಸಬರಿಗೆ ಶಬಾಶ್ ಹೇಳಿದ್ದು, ಈ ಮೊದಲು ಸ್ಯಾಂಡಲ್ ವುಡ್ ಸ್ಟಾರ್ ಗಳಾದ ಪುನೀತ್ ರಾಜ್ ಕುಮಾರ್, ಯಶ್, ಶ್ರೀಮುರಳಿ ಜೊತೆಗೆ ರಾಜಕೀಯ ನಾಯಕ ಜನಾರ್ಧನ ರೆಡ್ಡಿ ಚಿತ್ರ ವೀಕ್ಷಿಸಿ ಸುದ್ದಿ ಮಾಡಿದ್ದರು.
ಇದೀಗ ಗಾಂಧಿನಗರದ ಲೇಟೇಸ್ಟ್ ಸುದ್ದಿ ಅಂದ್ರೆ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಟಾಲಿವುಡ್ ಸ್ಟಾರ್ ಗಳು ಈ ವರ್ಷದ ಬ್ಲಾಕ್ ಬಸ್ಟರ್ ಚಿತ್ರ 'ರಂಗಿತರಂಗ' ನೋಡಿ ಭೇಷ್ ಅಂದಿದ್ದಾರೆ. ಇದ್ಯಾರಪ್ಪಾ ಚಿತ್ರ ನೋಡಿದವರು ಅನ್ಕೊಂಡ್ರ, ಅವರೇ ನಮ್ಮ ತೆಲುಗಿನ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್.
ಹೌದು ಟಾಲಿವುಡ್ ನ ಖ್ಯಾತ ನಟ, 'ಬನ್ನಿ' ಅಂತಾನೇ ಖ್ಯಾತಿ ಹೊಂದಿರುವ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ನಮ್ಮ ಬೆಂಗಳೂರಿನಲ್ಲಿ ಆಗಸ್ಟ್ 2 ರಂದು ಓರೆಯಾನ್ ಮಾಲ್ ನಲ್ಲಿ ಚಿತ್ರ ವೀಕ್ಷಿಸಿದ್ದಾರೆ.
ವೀಕೆಂಡ್ ಮಜಾ ಕಳೆಯಲು ರಾಜಧಾನಿ ಬೆಂಗಳೂರಿಗೆ ಆಗಮಿಸಿದ್ದ ತೆಲುಗು ಸ್ಟಾರ್ ಹೊಸಬರ ಚಿತ್ರ ಮಿಸ್ಟರಿ ಥ್ರಿಲ್ಲರ್ ಕಥೆ ಹೊಂದಿರುವ 'ರಂಗಿತರಂಗ' ನೊಡಿ ಫುಲ್ ಖುಷ್ ಆಗಿದ್ದಾರೆ. ನೋಡಿ ಹೊಸಬರ ಕಮಾಲ್ ಹೇಗಿದೆ ಅಂತ.
ಈಗಾಗಲೇ ಕರ್ನಾಟಕದಾದ್ಯಂತ ಮಾತ್ರವಲ್ಲದೇ ವಿದೇಶದಲ್ಲೂ ತನ್ನ ಕಂಪನ್ನು ಬೀರುತ್ತಿರುವ ಅನುಪ್ ಭಂಡಾರಿ ನಿರ್ದೇಶನದ, ನಿರುಪ್ ಭಂಡಾರಿ, ರಾಧಿಕಾ ಚೇತನ್, ಅವಂತಿಕಾ ಶೆಟ್ಟಿ, ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ, 'ರಂಗಿತರಂಗ' ಪರಭಾಷೆಗೂ ರಿಮೇಕ್ ಆಗುತ್ತಿದೆ.
ಒಟ್ಟಿನಲ್ಲಿ ಪರಬಾಷಾ ನಟರನ್ನು ತನ್ನತ್ತ ಸೆಳೆಯುತ್ತಿರುವ ಹೊಸಬರ ಚಿತ್ರಕ್ಕೆ ನಾವು ಹ್ಯಾಟ್ಸಾಫ್ ಹೇಳಲೇ ಬೇಕು ಅಲ್ವಾ. ಅಂತೂ ಗಾಂಧಿನಗರದಲ್ಲಿ ಒಳ್ಳೊಳ್ಳೆ ಸಿನೆಮಾಗಳು ಬಂದ್ರೆ ಪ್ರೇಕ್ಷಕರು ಖಂಡಿತವಾಗಲೂ ಪ್ರೋತ್ಸಾಹ ನೀಡುತ್ತಾರೆ ಅನ್ನೋದಕ್ಕೆ 'ರಂಗಿತರಂಗ' ಉತ್ತಮ ಉದಾಹರಣೆಯಾಗಿದೆ.