twitter
    For Quick Alerts
    ALLOW NOTIFICATIONS  
    For Daily Alerts

    ಸುಂಟರಗಾಳಿ-ಬಿರುಗಾಳಿ ಎಲ್ಲಾ ಬರುತ್ತೆ: ಅವರ ನಿರ್ಧಾರಕ್ಕೆ ಬದ್ಧ ಎಂದ ಸುಚೇಂದ್ರ ಪ್ರಸಾದ್

    |

    ಪವಿತ್ರಾ ಲೋಕೇಶ್ ಹಾಗೂ ನರೇಶ್ ಪ್ರಕರಣ ದಿನದಿಂದ ದಿನಕ್ಕೆ ಹಲವು ತಿರುವುಗಳನ್ನು ಪಡೆಯುತ್ತಿದೆ. ಇತ್ತೀಚೆಗೆ ಇಬ್ಬರೂ ಲಿವ್ ಇನ್ ರಿಲೇಷನ್‌ಶಿಫ್‌ನಲ್ಲಿದ್ದಾರೆ ಎಂದು ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಆರೋಪ ಮಾಡಿದ್ದರು. ಈ ಆರೋಪಗಳಿಗೆ ನರೇಶ್ ಮುಂದೆ ಬಂದು ಪ್ರತಿಕ್ರಿಯೆ ನೀಡಿದ್ದರೂ, ಪವಿತ್ರಾ ಲೋಕೇಶ್ ಮಾತ್ರ ಸೀನ್‌ಗೆ ಎಂಟ್ರಿಯಾಗಿರಲಿಲ್ಲ.

    ಕಳೆದ ನಾಲ್ಕೈದು ದಿನಗಳಿಂದ ನಡೆದ ಬೆಳವಣಿಗಳ ಬಳಿಕ ಪವಿತ್ರಾ ಲೋಕೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸುಚೇಂದ್ರ ಪ್ರಸಾದ್ ಹಾಗೂ ತನ್ನ ನಡುವೆ ಮದುವೆಯಾಗಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಬೆನ್ನಲ್ಲೇ ಸುಚೇಂದ್ರ ಪ್ರಸಾದ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

    ಆಕೆಗೆ ಆಸೆ ಜಾಸ್ತಿ, ಆ ಮಹಾನುಭಾವನೊಂದಿಗೂ ಇನ್ನು 6 ತಿಂಗಳು ಅಷ್ಟೇ': ಸುಚೇಂದ್ರ ಪ್ರಸಾದ್!ಆಕೆಗೆ ಆಸೆ ಜಾಸ್ತಿ, ಆ ಮಹಾನುಭಾವನೊಂದಿಗೂ ಇನ್ನು 6 ತಿಂಗಳು ಅಷ್ಟೇ': ಸುಚೇಂದ್ರ ಪ್ರಸಾದ್!

    ಈ ಹಿಂದೆ ಸುಚೇಂದ್ರ ಪ್ರಸಾದ್ ನಟಿ ಪವಿತ್ರಾ ಲೋಕೇಶ್ ಅವರ ವಿರುದ್ಧ ಕನ್ನಡದ ನ್ಯೂಸ್ ಚಾನೆಲ್‌ ಒಂದರಲ್ಲಿ ಹೇಳಿಕೆ ನೀಡಿದ್ದರು. ಸುಚೇಂದ್ರ ಪ್ರಸಾದ್ ಹೇಳಿಕೆಗೆ ಪವಿತ್ರಾ ಲೋಕೇಶ್ ತಿರುಗೇಟು ನೀಡಿದ್ದಾರೆ. ಈಗ ಸುಚೇಂದ್ರ ಪ್ರಸಾದ್ ಕೂಡ ಮಾಧ್ಯಮವೊಂದಕ್ಕೆ ಪವಿತ್ರಾ ಲೋಕೇಶ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನದ ಡಿಟೈಲ್ಸ್ ಇಲ್ಲಿದೆ.

    ವಿವಾಹದ ಬಗ್ಗೆ ಸುಚೇಂದ್ರ ಪ್ರಸಾದ್ ಹೇಳಿದ್ದೇನು?

    ವಿವಾಹದ ಬಗ್ಗೆ ಸುಚೇಂದ್ರ ಪ್ರಸಾದ್ ಹೇಳಿದ್ದೇನು?

    ಪವಿತ್ರಾ ಲೋಕೇಶ್ ನಟ-ನಿರ್ದೇಶಕ ಸುಚೇಂದ್ರ ಪ್ರಸಾದ್ ಅವರೊಂದಿಗೆ ಮದುವೆ ಬಗ್ಗೆ ಮಾಹಿತಿ ನೀಡಿದ್ದರು. ನಾನು ಸುಚೇಂದ್ರ ಪ್ರಸಾದ್ ಅವರನ್ನು ಮದುವೆನೇ ಆಗಿಲ್ಲ ಎಂದು ಪವಿತ್ರಾ ಲೋಕೇಶ್ ಹೇಳಿದ್ದರು. ಈ ಮದುವೆ ವಿಷಯಕ್ಕೆ ಸುಚೇಂದ್ರ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ. "ಪವಿತ್ರ ಅವ್ರೊಂದಿಗೆ ನನ್ನದು ಪಾಣಿಗ್ರಹಣ. ಕೈ ಹಿಡಿದು ನಡೆಯುತ್ತೇನೆ. ನಡೆಸಿಕೊಳ್ಳುತ್ತೇನೆ ಎಂದು ಒಪ್ಪಿಕೊಂಡಿದ್ದು. ಹಾಗಾಗಿ ಕೈ ಹಿಡಿದಿದ್ದನ್ನು ಪಾಲಿಸುವುದು ನನ್ನ ಧರ್ಮ ಎಂದು ಪಾಲಿಸಿದ್ದೇನೆ." ಎಂದು ಹೇಳಿದ್ದಾರೆ.

    Exclusive:ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟನ ನರೇಶ್‌ ಮದುವೆ: ಅಸಲಿ ಮ್ಯಾಟರ್ ಏನು?Exclusive:ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗು ನಟನ ನರೇಶ್‌ ಮದುವೆ: ಅಸಲಿ ಮ್ಯಾಟರ್ ಏನು?

    ಪವಿತ್ರಾ ಯಾವುದೇ ನಿರ್ಧಾರಕ್ಕೆ ಬದ್ಧ

    ಪವಿತ್ರಾ ಯಾವುದೇ ನಿರ್ಧಾರಕ್ಕೆ ಬದ್ಧ

    " ಅವರು ಎಂತಹದ್ದೇ ತೀರ್ಮಾನ. ಯಾವುದೇ ಸಂದರ್ಭದಲ್ಲಿ ಸೌಕರ್ಯ ಎಂದು ಹೇಳುತ್ತಾರೋ ಅದಕ್ಕೆ ನಾನು ಬದ್ಧನಿದ್ದೇನೆ. ಅವರೊಟ್ಟಿಗೆ ಎಂತಹದ್ದೇ ಸ್ಥಿತಿಯಲ್ಲೂ ಪಾಲಿಸಬೇಕಾದ ಧರ್ಮವಿದೆ. ಆ ಧರ್ಮವನ್ನು ನಾನು ಪಾಲಿಸುತ್ತೇನೆ." ಎಂದಿದ್ದಾರೆ.

    ಸಂಸಾರದಲ್ಲಿ ಎಲ್ಲವೂ ಬರುತ್ತೆ

    ಸಂಸಾರದಲ್ಲಿ ಎಲ್ಲವೂ ಬರುತ್ತೆ

    "ಸುಂಟರಗಾಳಿ ಬಿರುಗಾಳಿ ಎಲ್ಲವೂ ಬರುತ್ತೆ. ನಮಗೆ ಉಸಿರಾಟದ ಗಾಳಿ ಬೇಕು. ಹಾಗಾಗಿ ಮಕ್ಕಳಿಗೆ ತಾಯಿ ಬೇಕು. ನಾವೆಲ್ಲರೂ ಜವಾಬ್ದಾರಿಯುಳ್ಳ ಮಾಧ್ಯಮದವರಾದ್ದರಿಂದ ಮಕ್ಕಳ ಮೇಲೆ ಎಂತಹ ದುಷ್ಪರಿಣಾಮ ಬೀರಬಹುದು ಎಂಬ ಎಚ್ಚರಿಕೆ ಇಟ್ಟುಕೊಂಡೇ ತುಂಬಾ ಜವಾಬ್ದಾರಿಯುತವಾಗಿ ನಿಭಾಯಿಸಬೇಕು ಎಂಬ ಬಗ್ಗೆ ಮಾತ್ರ ಸ್ಪಷ್ಟವಾದ ನಿಲುವು ಮತ್ತು ತೀರ್ಮಾನವಿದೆ. ನಾವೆಲ್ಲವೂ ಏನು ಯೋಚನೆ ಮಾಡುತ್ತಿದ್ದೇವೆ ಅದರಿಂದಾಗಿ ಮಕ್ಕಳು ಎಷ್ಟು ನಲುಗಬಹುದು ಎಂದು ಯೋಚನೆ ಮಾಡಿದಾಗಲೆಲ್ಲಾ ಮನಸ್ಸು ವಿಚಲಿತವಾಗುತ್ತೆ."

    ರಾಖಿ ಕಟ್ಟಿಯಾದರೂ ಪವಿತ್ರಾ ಅನ್ನು ಮನೆಯಲ್ಲೇ ಇರಿಸಿಕೊಳ್ಳುವೆ: ಸವಾಲು ಹಾಕಿದ ನರೇಶ್!?ರಾಖಿ ಕಟ್ಟಿಯಾದರೂ ಪವಿತ್ರಾ ಅನ್ನು ಮನೆಯಲ್ಲೇ ಇರಿಸಿಕೊಳ್ಳುವೆ: ಸವಾಲು ಹಾಕಿದ ನರೇಶ್!?

    ನನ್ನ ಧರ್ಮ ಪಾಲಿಸುತ್ತೇನೆ

    ನನ್ನ ಧರ್ಮ ಪಾಲಿಸುತ್ತೇನೆ

    "ಮಾಧ್ಯಮಗಳಲ್ಲಿ ವಿಷಯ ಬಂದಾಗ ನಾನು ಅವರನ್ನು ವಿಚಾರಿಸಿದಾಗ, ಇದರಲ್ಲಿ ಹುರುಳು-ತಿರುಳು ಎಂದು ಹೇಳಿದ್ದನ್ನು ನಾನು ಖಂಡಿತವಾಗಿಯೂ ಮಾನ್ಯ ಮಾಡಿದ್ದೇನೆ. ನಮ್ಮ ಹಿರಿಯರು ಹಾಕಿ ಕೊಟ್ಟ ಅಂದ ಶ್ರದ್ಧೆಯನ್ನು ನಾನು ಪಾಲಿಸಬೇಕಾದ ಅನಿವಾರ್ಯತೆ ನನಗಿದೆ. ಯಾರು ಯಾವುದನ್ನು ಅನುಸರಿಸಿ ಪಾಲಿಸುತ್ತಾರೋ ಅದೇ ಧರ್ಮ. ನಾನೇನು ಒಪ್ಪಿಕೊಂಡಿದ್ದೇನೋ ಆ ಮಾರ್ಗದಲ್ಲಿ ಅವರು ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ನಾನು ಬದ್ಧವಾಗಿದ್ದೇನೆ." ಎಂದು ಸುಚೇಂದ್ರ ಪ್ರಸಾದ್ ತಿಳಿಸಿದ್ದಾರೆ.

    English summary
    Suchendra Prasad Reaction about Pavithra Lokesh Marriage With Naresh, Know More.
    Friday, July 1, 2022, 19:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X