Don't Miss!
- News Chardham Yatra Guidelines 2024: ಚಾರ್ಧಾಮ್ ಯಾತ್ರೆಗೆ ಹೋಗುವಾಗ ಈ ವಸ್ತುಗಳನ್ನು ಬ್ಯಾಗ್ ಅಲ್ಲಿ ಇಟ್ಟುಕೊಳ್ಳಿ....
- Lifestyle ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಪ್ರೇಮ ಬರಹ'ಕ್ಕೆ ಮನಸೋತ ಸುದೀಪ್ ಗೆ ಇಷ್ಟವಾಗಿದ್ದೇನು?
ಅರ್ಜುನ್ ಸರ್ಜಾ ಮಗಳು ಐಶ್ವರ್ಯ ಸರ್ಜಾ ಅಭಿನಯದ ಮೊಟ್ಟ ಮೊದಲ ಕನ್ನಡ ಸಿನಿಮಾ 'ಪ್ರೇಮ ಬರಹ' ರಾಜ್ಯದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿ ಅಭಿಮಾನಿಗಳು ಸಿನಿ ತಾರೆಯರು ಹೀಗೆ ಎಲ್ಲರು ಮೆಚ್ಚಿಕೊಂಡ 'ಪ್ರೇಮ ಬರಹ' ಮೂರನೇ ವಾರಕ್ಕೆ ಸನಿಹದಲ್ಲಿದೆ.
ನಿನ್ನೆಯಷ್ಟೇ ಕಿಚ್ಚ ಸುದೀಪ್ 'ಪ್ರೇಮ ಬರಹ' ಚಿತ್ರವನ್ನ ನೋಡುತ್ತಿದ್ದಾರೆ ಎಂದು ಫಿಲ್ಮಿಬೀಟ್ ಕನ್ನಡದಲ್ಲಿ ಸುದ್ದಿ ಪ್ರಕಟವಾಗಿತ್ತು. ಬರಿ ಸಿನಿಮಾ ನೋಡುವ ಸುದ್ದಿ ಕೊಟ್ರೆ ಸಾಕಾ.? ಸಿನಿಮಾ ನೋಡಿದ್ಮೇಲೆ ಸುದೀಪ್ ಏನಂದ್ರು ಎನ್ನುವುದು ಕೂಡ ಬೇಕು ಅಲ್ವಾ.!
ಪ್ರೇಮ ಬರಹ' ನೋಡುತ್ತಿರುವ ಕಿಚ್ಚ ಸುದೀಪ್
ಎಸ್, ಪ್ರೇಮ ಬರಹ ಚಿತ್ರವನ್ನ ನೋಡಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರದ ಬಗ್ಗೆ ಟ್ವಿಟ್ಟರ್ ನಲ್ಲಿ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ, ಪ್ರೇಮ ಬರಹ ಚಿತ್ರಕ್ಕೆ ಸುದೀಪ್ ಮನಸೋತ್ರಾ.? ಚಿತ್ರದಲ್ಲಿ ಏನಿಷ್ಟ ಆಯ್ತು? ಮುಂದೆ ಓದಿ.....
ಪ್ರೀತಿ ಮತ್ತು ಜೀವನದ ಪ್ರೇಮ ಬರಹ
''ಜೀವನ ಮತ್ತು ಪ್ರೀತಿಯ ಉತ್ತಮ ಮಿಶ್ರಣ 'ಪ್ರೇಮ ಬರಹ' ಸಿನಿಮಾ. ಇಬ್ಬರ ಯುವ ಪ್ರೇಮಿಗಳ ಪ್ರೀತಿ ಮತ್ತು ನಮ್ಮ ಯೋಧರ ಜೀವನದ ಬಗ್ಗೆ ಬಹಳ ಚೆನ್ನಾಗಿ ಚಿತ್ರೀಸಿದ್ದಾರೆ''
ವಿಮರ್ಶೆ : ಕಾರ್ಗಿಲ್ ಕದನದಲ್ಲಿ ಕಣ್ಬಿಟ್ಟ ಶುಭ್ರ 'ಪ್ರೇಮ' ಬರಹ
ಐಶ್ವರ್ಯ ದಿ ಬೆಸ್ಟ್
''ಐಶ್ವರ್ಯ ಸರ್ಜಾ ಅವರ ಪಾತ್ರ ನಿಜಕ್ಕೂ ಅದ್ಭುತ. ಅದಕ್ಕೆ ತಕ್ಕ ಅಭಿನಯ ಅವರದ್ದು. ಈ ಪಾತ್ರದಲ್ಲಿ ಎಲ್ಲರ ಗಮನವನ್ನ ಸೆಳೆಯುತ್ತಾರೆ.''
ಅರ್ಜುನ್ ಸರ್ಜಾ ಬೇಸರಕ್ಕೆ ಕಾರಣವಾಯ್ತು 'ಪ್ರೇಮಬರಹ' ರಿವ್ಯೂ
ಚಂದನ್ ಅಭಿನಯದ ಸೂಪರ್
''ಚಂದನ್ ನೋಡಲು ಬಹಳ ಚೆನ್ನಾಗಿ ಕಾಣ್ತಾರೆ. ತೆರೆಮೇಲೆ ಅವರ ನಟನೆ ಅಮೋಘವಾಗಿದೆ. ನನಗೆ ಚಂದನ್ ಪಾತ್ರ ತುಂಬ ಇಷ್ಟ ಆಯ್ತು. ನಿಜಕ್ಕೂ ವಾಹ್ಹ್ ಎನ್ನುವ ಕೆಲವು ಅಂಶಗಳು ಚಿತ್ರದಲ್ಲಿದೆ.''
ಪ್ರೇಮ ಬರಹ ಚಿತ್ರದ ಬಗ್ಗೆ....
ಅರ್ಜುನ್ ಸರ್ಜಾ ನಿರ್ದೇಶನ ಮತ್ತು ನಿರ್ಮಾಣದ ಸಿನಿಮಾ. ಐಶ್ವರ್ಯ ಅವರ ಮೊದಲ ಕನ್ನಡ ಸಿನಿಮಾ. ಸುಹಾಸಿನಿ, ಕೆ.ವಿಶ್ವನಾಥ್, ಸಾಧುಕೋಕಿಲ, ರಂಗಾಯಣ ರಘು, ಪ್ರಕಾಶ್ ರೈ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಒಂದು ಹಾಡಿನಲ್ಲಿ ನಟ ದರ್ಶನ್, ಅರ್ಜುನ್ ಸರ್ಜಾ, ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಕೂಡ ಬಂದು ಹೋಗುತ್ತಾರೆ.