Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಣ್ಣೀರು ಹಾಕಿದ್ದ ಮಕ್ಕಳ ಮುಖದಲ್ಲಿ ನಗು ಮೂಡಿಸಿದ ಸುದೀಪ್ ಸಹಾಯ
ನಟ ಸುದೀಪ್ ಅವರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವುದು ಗುಟ್ಟೇನು ಅಲ್ಲ. ಹಲವು ವರ್ಷಗಳಿಂದಲೂ ಸುದೀಪ್ ಅವರು ತಮ್ಮ ಅನುಕೂಲಾನುಸಾರ ಅವಶ್ಯಕತೆ ಇರುವವರಿಗೆ ನೆರವು ನೀಡುತ್ತಲೇ ಬರುತ್ತಿದ್ದಾರೆ.
Recommended Video
ಇದೀಗ ಸುದೀಪ್ ಅವರು ಮತ್ತೆ ತಮ್ಮ ಮಾನವೀಯ ಮುಖವನ್ನು ಮೆರೆದಿದ್ದಾರೆ. ಹರಿಜನ ಹೆಣ್ಣುಮಕ್ಕಳ ಶಾಲೆಗೆ ಅತ್ಯಂತ ಅಗತ್ಯವಿದ್ದ ಸಹಾಯವನ್ನು ಮಾಡಿ ಆ ಹೆಣ್ಣುಮಕ್ಕಳ ಮುಖದಲ್ಲಿ ನಗು ಮೂಡುವಂತೆ ಮಾಡಿದ್ದಾರೆ.
ನನ್ನನ್ನು ತಲೆ ತಗ್ಗಿಸಲು ಬಿಟ್ಟಿಲ್ಲ ಆ ವ್ಯಕ್ತಿ: ಕೊನೆಯುಸಿರೋ ತನಕ ಆ ಸಹಾಯ ಮರೆಯಲ್ಲ- ಸುದೀಪ್
ಹುಬ್ಬಳ್ಳಿಯ ಹರಿಜನ ಅನುದಾನಿತ ಹೆಣ್ಣುಮಕ್ಕಳ ಶಾಲೆಯ ಸ್ಥಳವನ್ನು ಗಾಂಧಿವಾಡ ಕೋ ಅಪರೇಟಿವ್ ಸೊಸೈಟಿಯವರು ಖರೀದಿ ಮಾಡಿ ಬಡಾವಣೆ ನಿರ್ಮಿಸಿ ಮಾರಾಟಕ್ಕೆ ಇಟ್ಟಿದ್ದರು. ಶಾಲೆಗಾಗಿ ತಾತ್ಕಾಲಿಕವಾಗಿ ಜಾಗವೊಂದನ್ನು ನೀಡಿದ್ದರು.
ಕೊನೆಗೆ ಸೊಸೈಟಿಯವರು ಶಾಲೆಯ ಜಾಗವನ್ನು ಖಾಲಿ ಮಾಡಿಸಲು ಮುಂದಾಗಿದ್ದಾಗ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದರು. ಈ ವಿಡಿಯೋ ಎಲ್ಲೆಡೆ ಹರಿದಾಡಿತ್ತು. ಅಂತೆಯೆ ಸುದೀಪ್ ಅವರ ಕಣ್ಣಿಗೂ ಈ ವಿಡಿಯೋ ಬಿದ್ದು ಸುದೀಪ್ ಮನಸ್ಸು ಕರಗಿತು.
ಕಿಚ್ಚ ಸುದೀಪ ಚಾರಿಟೇಬಲ್ ಟ್ರಸ್ಟ್ನವರು ಹುಬ್ಬಳ್ಳಿಗೆ ಬಂದು ಶಾಲೆಯ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಇದೇ ಸಮಯ ಚಾರಿಟೇಬಲ್ ಸೊಸೈಟಿ ಸದಸ್ಯರು ಸುದೀಪ್ಗೆ ವಿಡಿಯೋ ಕಾಲ್ ಮಾಡಿ ವಿದ್ಯಾರ್ಥಿಗಳು ಸುದೀಪ್ ಅವರೊಟ್ಟಿಗೆ ಮಾತನಾಡುವಂತೆ ಮಾಡಿದರು. ಕಿಚ್ಚನ ಭರವಸೆಯಿಂದ ಖುಷಿಯಾದ ವಿದ್ಯಾರ್ಥಿನಿಯರು ಸುದೀಪ್ಗೆ ಧನ್ಯವಾದ ಹೇಳಿದರು. ಶಾಲೆಯ ಮುಖ್ಯೋಪಾಧ್ಯಾಯರಂತೂ ದೇವರ ಬದಲಿಗೆ ಸುದೀಪ್ ಅವರಿಗೆ ಕೈ ಮುಗಿಯುವುದಾಗಿ, ಸುದೀಪ್ ಅವರ ದೊಡ್ಡ ಬಾವುಟವನ್ನು ಶಾಲೆಯ ಮುಂದೆ ಹಾರಿಸುವುದಾಗಿ ಹೇಳಿದರು.
ನಾನು ಕಪ್ಪು ಬಟ್ಟೆ ಹಾಕಲು ಕಾರಣನೇ ರವಿ ಸರ್; ಕಿಚ್ಚ ಸುದೀಪ್
ಸುದೀಪ್ ಸಾರಥ್ಯದ ಕಿಚ್ಚ ಚಾರಿಟೇಬಲ್ ಸೊಸೈಟಿಯು ಕೊರೊನಾ ಕಾಲದಲ್ಲಿ ಹಲವಾರು ಮಂದಿಗೆ ಸಹಾಯ ಮಾಡಿತು. ಆ ನಂತರವೂ ಸಮಾಜ ಸೇವಾ ಕಾರ್ಯವನ್ನು ಮುಂದುವರೆಸಿದೆ.