Just In
Don't Miss!
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮನೆ ಬಿಟ್ಟು ಹೋದ ಅಭಿಮಾನಿಗಾಗಿ ಸುದೀಪ್ ಮನವಿ

ದಿನ ಬೆಳಗಾದರೇ ಸುದೀಪ್ ಅವರನ್ನ ನೋಡಲು ಜೆಪಿ ನಗರದ ಮನೆ ಮುಂದೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿರುತ್ತಾರೆ. ದಿನ ದಿನ ದುಡ್ಡು ಕೂಡಿಟ್ಟು, ತಮ್ಮ ನೆಚ್ಚಿನ ನಟನನ್ನ ನೋಡಲು ಸಿಟಿ ಬಸ್ ಹತ್ತಿ ಬರ್ತಾರೆ. ಸುದೀಪ್ ಅವರನ್ನ ನೋಡಲೇಬೇಕೆಂದು ಉಪವಾಸ ಮಾಡಿರುವ ಉದಾಹರಣೆಯೂ ಇದೆ.
ಹೀಗೆ, ಸುದೀಪ್ ಅವರ ಮೇಲಿನ ಅಭಿಮಾನದಿಂದ ಅಭಿಮಾನಿಗಳು ಮಾಡುವ ಇಂತಹ ಕೆಲಸಗಳು, ನಟರಿಗೆ ಹೆಮ್ಮೆ ತರುತ್ತಾದರೂ, ಅವರ ಜೀವನ ಮತ್ತು ಸಮಯ ಮತ್ತು ದುಡ್ಡನ್ನ ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಕಿವಿ ಮಾತು ಕೂಡ ಹೇಳುತ್ತಿರುತ್ತಾರೆ.
ಟ್ರೆಂಡ್ ಆಯ್ತು ಸುದೀಪ್ ಅವರ ಹೊಸ ಸ್ಟೈಲ್
ಇದೀಗ, ಮತ್ತೊಂದು ಅಭಿಮಾನದ ಸಂಕಷ್ಟಕ್ಕೆ ಕಿಚ್ಚ ಸುದೀಪ್ ಸಿಲುಕಿದ್ದಾರೆ. ಸುದೀಪ್ ಅವರ ಅಭಿಮಾನಿಯಾಗಿರುವ ಮಣಿಕಂಠ ಎಂಬ ಯುವಕ ಮನೆ ಬಿಟ್ಟು ಹೋಗಿದ್ದಾರಂತೆ. ಮನೆಯವರ ಮೇಲೆ ಮುನಿಸಿಕೊಂಡಿರುವ ಮಣಿಕಂಠ ಮನೆ ಮತ್ತು ಊರು ಬಿಟ್ಟು ಬಂದಿದ್ದಾರಂತೆ.
ಈ ವಿಷ್ಯ ತಿಳಿದು ಸ್ವತಃ ಕಿಚ್ಚ ಸುದೀಪ್ ಅವರೇ ಮಣಿಕಂಠನ ಬಳಿ ಮನವಿ ಮಾಡಿಕೊಂಡಿದ್ದಾರೆ. ''ದಯವಿಟ್ಟು ಮನೆಗೆ ವಾಪಸ್ ಬಾ, ಮನೆಯವರು ಅಂದ್ಮೇಲೆ ಒಂದು ಮಾತು ಬರುತ್ತೆ, ಹೋಗುತ್ತೆ...ನೀನು ಎಲ್ಲೇ ಇದ್ದರೂ ಮನೆಗೆ ಹೋಗು, ನಂತರ ನಾನೇ ನಿನ್ನ ನೋಡಲು ನಿಮ್ಮ ಮನೆಗೆ ಬರ್ತೀನಿ'' ಎಂದು ಸುದೀಪ್ ಮನವಿ ಮಾಡಿಕೊಂಡಿದ್ದಾರೆ.
'ಮಣಿಕಂಠ' ಎಂಬ ಯುವಕನ ಬಗ್ಗೆ ಯಾವುದೇ ಮಾಹಿತಿ ಇಲ್ಲವಾದರೂ, ಸುದೀಪ್ ಅವರ ವಿಡಿಯೋ ನೋಡಿ, ಖಂಡಿತಾ ಎಲ್ಲೇ ಇದ್ದರೂ ಮನೆಗೆ ಹೋಗ್ತಾರೆ ಎಂಬ ನಂಬಿಕೆ ಇದೆ.