Don't Miss!
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- News Darshan: ಡಿ.ಕೆ. ಸುರೇಶ್ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ
- Lifestyle ನೀವು ಸಹ ಈ ಶರ್ಬತ್ನ ರುಚಿ ಸವಿದಿದ್ದೀರಾ..? ಮರೆಯಾಯ್ತು ಈ ಹಳೆಯ ನೆನಪು
- Sports LSG vs CSK IPL 2024: ಲಕ್ನೋ vs ಚೆನ್ನೈ ಮಹಾಕದನ; ಟಾಸ್ ವರದಿ, ಆಡುವ 11ರ ಬಳಗ
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನೆ ಬಿಟ್ಟು ಹೋದ ಅಭಿಮಾನಿಗಾಗಿ ಸುದೀಪ್ ಮನವಿ
Recommended Video
ದಿನ ಬೆಳಗಾದರೇ ಸುದೀಪ್ ಅವರನ್ನ ನೋಡಲು ಜೆಪಿ ನಗರದ ಮನೆ ಮುಂದೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿರುತ್ತಾರೆ. ದಿನ ದಿನ ದುಡ್ಡು ಕೂಡಿಟ್ಟು, ತಮ್ಮ ನೆಚ್ಚಿನ ನಟನನ್ನ ನೋಡಲು ಸಿಟಿ ಬಸ್ ಹತ್ತಿ ಬರ್ತಾರೆ. ಸುದೀಪ್ ಅವರನ್ನ ನೋಡಲೇಬೇಕೆಂದು ಉಪವಾಸ ಮಾಡಿರುವ ಉದಾಹರಣೆಯೂ ಇದೆ.
ಹೀಗೆ, ಸುದೀಪ್ ಅವರ ಮೇಲಿನ ಅಭಿಮಾನದಿಂದ ಅಭಿಮಾನಿಗಳು ಮಾಡುವ ಇಂತಹ ಕೆಲಸಗಳು, ನಟರಿಗೆ ಹೆಮ್ಮೆ ತರುತ್ತಾದರೂ, ಅವರ ಜೀವನ ಮತ್ತು ಸಮಯ ಮತ್ತು ದುಡ್ಡನ್ನ ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಕಿವಿ ಮಾತು ಕೂಡ ಹೇಳುತ್ತಿರುತ್ತಾರೆ.
ಟ್ರೆಂಡ್ ಆಯ್ತು ಸುದೀಪ್ ಅವರ ಹೊಸ ಸ್ಟೈಲ್
ಇದೀಗ, ಮತ್ತೊಂದು ಅಭಿಮಾನದ ಸಂಕಷ್ಟಕ್ಕೆ ಕಿಚ್ಚ ಸುದೀಪ್ ಸಿಲುಕಿದ್ದಾರೆ. ಸುದೀಪ್ ಅವರ ಅಭಿಮಾನಿಯಾಗಿರುವ ಮಣಿಕಂಠ ಎಂಬ ಯುವಕ ಮನೆ ಬಿಟ್ಟು ಹೋಗಿದ್ದಾರಂತೆ. ಮನೆಯವರ ಮೇಲೆ ಮುನಿಸಿಕೊಂಡಿರುವ ಮಣಿಕಂಠ ಮನೆ ಮತ್ತು ಊರು ಬಿಟ್ಟು ಬಂದಿದ್ದಾರಂತೆ.
ಈ ವಿಷ್ಯ ತಿಳಿದು ಸ್ವತಃ ಕಿಚ್ಚ ಸುದೀಪ್ ಅವರೇ ಮಣಿಕಂಠನ ಬಳಿ ಮನವಿ ಮಾಡಿಕೊಂಡಿದ್ದಾರೆ. ''ದಯವಿಟ್ಟು ಮನೆಗೆ ವಾಪಸ್ ಬಾ, ಮನೆಯವರು ಅಂದ್ಮೇಲೆ ಒಂದು ಮಾತು ಬರುತ್ತೆ, ಹೋಗುತ್ತೆ...ನೀನು ಎಲ್ಲೇ ಇದ್ದರೂ ಮನೆಗೆ ಹೋಗು, ನಂತರ ನಾನೇ ನಿನ್ನ ನೋಡಲು ನಿಮ್ಮ ಮನೆಗೆ ಬರ್ತೀನಿ'' ಎಂದು ಸುದೀಪ್ ಮನವಿ ಮಾಡಿಕೊಂಡಿದ್ದಾರೆ.
'ಮಣಿಕಂಠ' ಎಂಬ ಯುವಕನ ಬಗ್ಗೆ ಯಾವುದೇ ಮಾಹಿತಿ ಇಲ್ಲವಾದರೂ, ಸುದೀಪ್ ಅವರ ವಿಡಿಯೋ ನೋಡಿ, ಖಂಡಿತಾ ಎಲ್ಲೇ ಇದ್ದರೂ ಮನೆಗೆ ಹೋಗ್ತಾರೆ ಎಂಬ ನಂಬಿಕೆ ಇದೆ.