Don't Miss!
- Finance ಆದಾಯ ತೆರಿಗೆ ಇಲಾಖೆಯಿಂದ ಕಾಂಗ್ರೆಸ್ಗೆ 1,823 ಕೋಟಿ ರೂ. ನೋಟಿಸ್: ತೆರಿಗೆ ಭಯೋತ್ಪಾದನೆ ನಿಲ್ಲಲೇಬೇಕು ಎಂದ ಪಕ್ಷ
- News Namma Metro Purple Line: ದೈನಂದಿನ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಇಳಿಕೆ, ಕಾರಣಗಳೇನು?
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Technology Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
22 ವರ್ಷದ ಹಿಂದೆ ಸೋತ ಜಾಗದಲ್ಲಿಂದು ಸುದೀಪ್ ಸಂಭ್ರಮಾಚರಣೆ
Recommended Video
ಕಿಚ್ಚ ಸುದೀಪ್ ಸಿನಿಮಾ ಜಗತ್ತಿಗೆ ಬಂದು ಸುಮಾರು 22 ವರ್ಷ ಆಗಿದೆ. ಎಲ್ಲರಿಗೂ ಗೊತ್ತಿರವಾಗೆ 2000 ರಲ್ಲಿ ತೆರೆಕಂಡಿದ್ದ 'ಸ್ಪರ್ಶ' ಸುದೀಪ್ ನಾಯಕನಾಗಿ ಅಭಿನಯಿಸಿದ ಮೊದಲ ಸಿನಿಮಾ. ಆದ್ರೆ, ಅದಕ್ಕಿಂತ ಮುಂಚೆಯೇ ಸುದೀಪ್ ನಾಯಕನಾಗಿ ಬಣ್ಣ ಹಚ್ಚಿದ್ದರು. ದುರದೃಷ್ಟವಶಾತ್ ಆ ಸಿನಿಮಾ ಬಿಡುಗಡೆಯಾಗಿಲ್ಲ.
ಅಷ್ಟಕ್ಕೂ, ಈಗ ಯಾಕೆ ಈ ವಿಷ್ಯ ಅಂದ್ರಾ, ವಿಷ್ಯ ಇದೆ. ಸುಮಾರು 22 ವರ್ಷಗಳ ಹಿಂದೆ ತನ್ನ ಮೊದಲ ಚಿತ್ರದ ಸುದ್ದಿಗೋಷ್ಠಿ ಮಾಡಿದ್ದ ಸ್ಥಳದಲ್ಲೇ ಈಗ ಸುದೀಪ್ ಮತ್ತೆ ಪ್ರೆಸ್ ಮೀಟ್ ಮಾಡ್ತಿದ್ದಾರೆ. ಹಾಗಾಗಿ, ಈ ವಿಷ್ಯ ನೆನಪಿಗೆ ಬಂದಿದೆ.
'ನಟಸಾರ್ವಭೌಮ' ನಿರ್ದೇಶಕನ ಜೊತೆಯಲ್ಲಿ ಕಿಚ್ಚ ಸುದೀಪ್.!
ಕಿಚ್ಚ ಸುದೀಪ್ ಮತ್ತು ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ 'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಬಿಡುಗಡೆ ಕುರಿತು ಬೆಂಗಳೂರಿನಲ್ಲಿರುವ ಏಟ್ರಿಯಾ ಹೋಟೆಲ್ ನಲ್ಲಿ ಇಂದು ಚಿತ್ರತಂಡ ಸುದ್ದಿಗೋಷ್ಠಿ ಆಯೋಜಿಸಿದೆ.
ಈ ಹೋಟೆಲ್ ಜೊತೆ ಸುದೀಪ್ ಗೂ ಒಂಥರಾ ಕಹಿ ನೆನಪು. 'ಸ್ಪರ್ಶ' ಚಿತ್ರಕ್ಕೂ ಮೊದಲು ಸುದೀಪ್ ನಾಯಕನಾಗಿ ಅಭಿನಯಿಸಿದ್ದ ಸಿನಿಮಾದ ಪ್ರೆಸ್ ಮೀಟ್ ಇದೇ ಹೋಟೆಲ್ ನಲ್ಲಿ ಆಗಿತ್ತು. ಆದ್ರೆ, ಆ ಸಿನಿಮಾ ಬಿಡುಗಡೆಯಾಗಿಲ್ಲ. ಇದೀಗ, ತುಂಬಾ ವರ್ಷದ ನಂತರ ಮತ್ತದೇ ಹೊಟೆಲ್ ನಲ್ಲಿ ಕಿಚ್ಚನ ಸಿನಿಮಾ ಪ್ರೆಸ್ ಮೀಟ್ ಮಾಡುತ್ತಿದೆ.
ಇವರನ್ನ ಕಂಡ್ರೆ ಸುದೀಪ್ ಸ್ವಾಭಾವಿಕವಾಗಿ ತಲೆ ಬಾಗುತ್ತಾರಂತೆ
ಅಂದ್ಹಾಗೆ, 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ಚಿತ್ರೀಕರಣ ಮುಗಿಸಿದ್ದು, ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಸುದೀಪ್, ಅಂಬರೀಶ್, ಶ್ರುತಿ ಹರಿಹರನ್, ಸುಹಾಸಿನಿ, ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ ಗುರುದತ್ ಗಾಣಿಗ ಈ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ.