twitter
    For Quick Alerts
    ALLOW NOTIFICATIONS  
    For Daily Alerts

    ರಸ್ತೆ ಬದಿ ತಿಂಡಿ ತಿಂದ ಕಿಚ್ಚ ಮಾಲೀಕರಿಗೆ ಕೊಟ್ಟ ಹಣ ಎಷ್ಟು?

    By Pavithra
    |

    ಕಿಚ್ಚ ಸುದೀಪ್ ಕಷ್ಟದಲ್ಲಿದ್ದವರಿಗೆ ಸದಾ ಸಹಾಯ ಹಸ್ತ ಚಾಚುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದಷ್ಟೇ ಅಲ್ಲದೆ ನಮ್ಮ ಜೊತೆಯಲ್ಲಿದ್ದವರನ್ನು ತಮ್ಮಂತೆ ಉತ್ತಮ ಸ್ಥಾನಕ್ಕೆ ತರುವಲ್ಲಿ ಸುದೀಪ್ ಅವರ ಪ್ರಯತ್ನ ಹೆಚ್ಚಾಗಿಯೇ ಇರುತ್ತದೆ.

    ಕೆಲವೊಮ್ಮೆ ಕಿಚ್ಚ ತನಗೆ ಪರಿಚಯವಿಲ್ಲದೇ ಇರುವ ವ್ಯಕ್ತಿಗಳಿಗೂ ಸಹಾಯ ಮಾಡಲು ಹಿಂದು ಮುಂದು ಯೋಚನೆ ಮಾಡುವುದಿಲ್ಲ. ಯಾರಿಗೂ ಗೊತ್ತಾಗದಂತೆ ಅಗತ್ಯವಿರುವ ವ್ಯಕ್ತಿಗಳ ಜೀವನದಲ್ಲಿ ಬೆಳಕಾಗಿ ಬಿಡುತ್ತಾರೆ. ಅಂತದೊಂದು ಘಟನೆ ಇತ್ತೀಚಿಗಷ್ಟೇ ನಡೆದಿದೆ.

    ಶ್ರೀರಾಮುಲು ಪರ ಪ್ರಚಾರ ಮಾಡಿದ ಕಿಚ್ಚ ಸುದೀಪ್ಶ್ರೀರಾಮುಲು ಪರ ಪ್ರಚಾರ ಮಾಡಿದ ಕಿಚ್ಚ ಸುದೀಪ್

    ಚುನಾವಣೆ ಪ್ರಚಾರಕ್ಕಾಗಿ ಹೋಗಿದ್ದಾಗ ರಸ್ತೆ ಬದಿಯಲ್ಲಿರುವ ಪುಟ್ಟ ಹೋಟೆಲ್ ನಲ್ಲಿ ಕಿಚ್ಚ ತಿಂಡಿ ತಿಂದು ಬಂದಿದ್ದಾರೆ. ಅಷ್ಟೇ ಅಲ್ಲದೆ ಹೋಟೆಲ್ ನಡೆಸುತ್ತಿದ್ದ ಮಾಲೀಕರಿಗೆ ನಿರೀಕ್ಷೆ ಮಾಡದ ಉಡುಗೊರೆ ನೀಡಿದ್ದಾರೆ. ಹಾಗಾದರೆ ಸುದೀಪ್ ಹೋಟೆಲ್ ನವರಿಗೆ ನೀಡಿದ ಹಣವೆಷ್ಟು? ಹೋಟೆಲ್ ನಲ್ಲಿ ನಡೆದ ಘಟನೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ

    ರಸ್ತೆ ಬದಿಯಲ್ಲಿ ಊಟ ಮಾಡಿದ ಸುದೀಪ್

    ರಸ್ತೆ ಬದಿಯಲ್ಲಿ ಊಟ ಮಾಡಿದ ಸುದೀಪ್

    ಕಿಚ್ಚ ಸುದೀಪ್ ಇತ್ತೀಚಿಗಷ್ಟೆ ಶ್ರೀರಾಮುಲು ಹಾಗೂ ಸೋಮಶೇಖರ್ ರೆಡ್ಡಿ ಪರ ಪ್ರಚಾರಕ್ಕೆ ಹೋದ ವೇಳೆ ಸುದೀಪ್ ಮತ್ತು ಸ್ನೇಹಿತರು ಮೊಳಕಾಲ್ಮೂರು ಗೆ ತೆರಳುವ ಮುನ್ನ ಆಂಧ್ರ ಗಡಿಭಾಗದ ಒಬಳಾಪುರಂ ಬಳಿಯ ರೋಡ್ ಬದಿಯಲ್ಲಿರುವ ಹೋಟೆಲ್ ನಲ್ಲಿ ತಿಂಡಿ ತಿಂದು ಟೀ ಕುಡಿದಿದ್ದಾರೆ.

    ಹೆಣ್ಣು ಮಕ್ಕಳ ಕಾರ್ಯಕ್ಕೆ ಶ್ಲಾಘನೆ

    ಹೆಣ್ಣು ಮಕ್ಕಳ ಕಾರ್ಯಕ್ಕೆ ಶ್ಲಾಘನೆ

    ರಸ್ತೆ ಪಕ್ಕದಲ್ಲಿ ರಾಧಾ ಎನ್ನುವ ಬಡ ಮಹಿಳೆ ಚಪ್ಪರ ಹಾಕಿಕೊಂಡು ಹೋಟೆಲ್ ನಡೆಸುತ್ತಿದ್ದರು ಅದೇ ಹೋಟೆಲ್ ನಲ್ಲಿ ಸುದೀಪ್ ಚಿತ್ರಾನ್ನ ತಿಂದು ಟೀ ಕುಡಿದಿದ್ದಾರೆ.

    ಬಳಿಕ 10 ಸಾವಿರ ರೂಪಾಯಿ ಹಣ ನೀಡಿದ್ದಾರೆ.

    ಮಕ್ಕಳಿಗೆ ಉಡುಗೊರೆ ತೆಗೆದು ಕೊಡಲು ಹಣ

    ಮಕ್ಕಳಿಗೆ ಉಡುಗೊರೆ ತೆಗೆದು ಕೊಡಲು ಹಣ

    ಹತ್ತು ಸಾವಿರ ಹಣವನ್ನು ಪಡೆಯಲು ಹೋಟೆಲ್ ಮಾಲೀಕರಾದ ರಾಧಾ ನಿರಾಕರಿಸಿದ್ದಾರೆ.ಆದರೆ ಇದಕ್ಕೂ ಚುನಾವಣೆಗೂ ಸಂಬಂಧವಿಲ್ಲ. ಮಕ್ಕಳಿಗೆ ಏನಾದರೂ ಕೊಡಿಸಿ ಎಂದು ಹತ್ತು ಸಾವಿರ ಹಣ ನೀಡಿದ್ದಾರೆ ಸುದೀಪ್.

    ಕಿಚ್ಚನ ಪ್ರೀತಿಗೆ ಖುಷಿಯಾದ ಜನರು

    ಕಿಚ್ಚನ ಪ್ರೀತಿಗೆ ಖುಷಿಯಾದ ಜನರು

    ಕಿಚ್ಚ ಸುದೀಪ್ ಯಾವುದೇ ರೀತಿಯ ಬೇಸರವಿಲ್ಲದೆ ಹೋಟೆಲ್ ನಲ್ಲಿ ಊಟ ಮಾಡಿ ಬಂದಿದ್ದಾರೆ. ನಾನು ಒಬ್ಬ ಸ್ಟಾರ್ ಎನ್ನುವುದನ್ನ ಲೆಕ್ಕಿಸದೇ ಅಲ್ಲಿಯ ಜನರ ಜೊತೆ ಸಮಯ ಕಳೆದಿದ್ದಾರೆ. ಹೋಟೆಲ್ ನಲ್ಲಿದ್ದವರು ಕೂಡ ಇದರಿಂದ ಖುಷಿಯಾಗಿದ್ದಾರೆ.

    ಸುದೀಪ್ ರನ್ನು ಭೇಟಿ ಮಾಡಿದ ಸಲ್ಮಾನ್ ಖಾನ್ ಸಹೋದರ ಸೋಹೆಲ್ಸುದೀಪ್ ರನ್ನು ಭೇಟಿ ಮಾಡಿದ ಸಲ್ಮಾನ್ ಖಾನ್ ಸಹೋದರ ಸೋಹೆಲ್

    English summary
    Kannada actor Kiccha Sudeep has given Rs.10,000 for the kids of Dhaaba Owner to purchase gifts. During election campaign in Molakalmuru, Sudeep had a meal in Roadside Dhaaba.
    Tuesday, May 8, 2018, 13:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X