Don't Miss!
- News Rain: ಬರದಿಂದ ತತ್ತರಿಸಿದ ಮಲೆನಾಡು: ಕೊಪ್ಪ ಮೇರುತಿ ಶಿಖರದಲ್ಲಿ ವರುಣನಿಗೆ ಹೋಮ-ಹವನ
- Technology Tecno: ಬಹುನಿರೀಕ್ಷಿತ ಟೆಕ್ನೋ ಪೋವಾ 6 ಪ್ರೊ ಲಾಂಚ್! 12GB RAM.. 6000mAh ಬ್ಯಾಟರಿ.. ಬೆಲೆ ಎಷ್ಟು?
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರಸ್ತೆ ಬದಿ ತಿಂಡಿ ತಿಂದ ಕಿಚ್ಚ ಮಾಲೀಕರಿಗೆ ಕೊಟ್ಟ ಹಣ ಎಷ್ಟು?
ಕಿಚ್ಚ ಸುದೀಪ್ ಕಷ್ಟದಲ್ಲಿದ್ದವರಿಗೆ ಸದಾ ಸಹಾಯ ಹಸ್ತ ಚಾಚುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದಷ್ಟೇ ಅಲ್ಲದೆ ನಮ್ಮ ಜೊತೆಯಲ್ಲಿದ್ದವರನ್ನು ತಮ್ಮಂತೆ ಉತ್ತಮ ಸ್ಥಾನಕ್ಕೆ ತರುವಲ್ಲಿ ಸುದೀಪ್ ಅವರ ಪ್ರಯತ್ನ ಹೆಚ್ಚಾಗಿಯೇ ಇರುತ್ತದೆ.
ಕೆಲವೊಮ್ಮೆ ಕಿಚ್ಚ ತನಗೆ ಪರಿಚಯವಿಲ್ಲದೇ ಇರುವ ವ್ಯಕ್ತಿಗಳಿಗೂ ಸಹಾಯ ಮಾಡಲು ಹಿಂದು ಮುಂದು ಯೋಚನೆ ಮಾಡುವುದಿಲ್ಲ. ಯಾರಿಗೂ ಗೊತ್ತಾಗದಂತೆ ಅಗತ್ಯವಿರುವ ವ್ಯಕ್ತಿಗಳ ಜೀವನದಲ್ಲಿ ಬೆಳಕಾಗಿ ಬಿಡುತ್ತಾರೆ. ಅಂತದೊಂದು ಘಟನೆ ಇತ್ತೀಚಿಗಷ್ಟೇ ನಡೆದಿದೆ.
ಶ್ರೀರಾಮುಲು ಪರ ಪ್ರಚಾರ ಮಾಡಿದ ಕಿಚ್ಚ ಸುದೀಪ್
ಚುನಾವಣೆ ಪ್ರಚಾರಕ್ಕಾಗಿ ಹೋಗಿದ್ದಾಗ ರಸ್ತೆ ಬದಿಯಲ್ಲಿರುವ ಪುಟ್ಟ ಹೋಟೆಲ್ ನಲ್ಲಿ ಕಿಚ್ಚ ತಿಂಡಿ ತಿಂದು ಬಂದಿದ್ದಾರೆ. ಅಷ್ಟೇ ಅಲ್ಲದೆ ಹೋಟೆಲ್ ನಡೆಸುತ್ತಿದ್ದ ಮಾಲೀಕರಿಗೆ ನಿರೀಕ್ಷೆ ಮಾಡದ ಉಡುಗೊರೆ ನೀಡಿದ್ದಾರೆ. ಹಾಗಾದರೆ ಸುದೀಪ್ ಹೋಟೆಲ್ ನವರಿಗೆ ನೀಡಿದ ಹಣವೆಷ್ಟು? ಹೋಟೆಲ್ ನಲ್ಲಿ ನಡೆದ ಘಟನೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ. ಮುಂದೆ ಓದಿ
ರಸ್ತೆ ಬದಿಯಲ್ಲಿ ಊಟ ಮಾಡಿದ ಸುದೀಪ್
ಕಿಚ್ಚ ಸುದೀಪ್ ಇತ್ತೀಚಿಗಷ್ಟೆ ಶ್ರೀರಾಮುಲು ಹಾಗೂ ಸೋಮಶೇಖರ್ ರೆಡ್ಡಿ ಪರ ಪ್ರಚಾರಕ್ಕೆ ಹೋದ ವೇಳೆ ಸುದೀಪ್ ಮತ್ತು ಸ್ನೇಹಿತರು ಮೊಳಕಾಲ್ಮೂರು ಗೆ ತೆರಳುವ ಮುನ್ನ ಆಂಧ್ರ ಗಡಿಭಾಗದ ಒಬಳಾಪುರಂ ಬಳಿಯ ರೋಡ್ ಬದಿಯಲ್ಲಿರುವ ಹೋಟೆಲ್ ನಲ್ಲಿ ತಿಂಡಿ ತಿಂದು ಟೀ ಕುಡಿದಿದ್ದಾರೆ.
ಹೆಣ್ಣು ಮಕ್ಕಳ ಕಾರ್ಯಕ್ಕೆ ಶ್ಲಾಘನೆ
ರಸ್ತೆ ಪಕ್ಕದಲ್ಲಿ ರಾಧಾ ಎನ್ನುವ ಬಡ ಮಹಿಳೆ ಚಪ್ಪರ ಹಾಕಿಕೊಂಡು ಹೋಟೆಲ್ ನಡೆಸುತ್ತಿದ್ದರು ಅದೇ ಹೋಟೆಲ್ ನಲ್ಲಿ ಸುದೀಪ್ ಚಿತ್ರಾನ್ನ ತಿಂದು ಟೀ ಕುಡಿದಿದ್ದಾರೆ.
ಬಳಿಕ 10 ಸಾವಿರ ರೂಪಾಯಿ ಹಣ ನೀಡಿದ್ದಾರೆ.
ಮಕ್ಕಳಿಗೆ ಉಡುಗೊರೆ ತೆಗೆದು ಕೊಡಲು ಹಣ
ಹತ್ತು ಸಾವಿರ ಹಣವನ್ನು ಪಡೆಯಲು ಹೋಟೆಲ್ ಮಾಲೀಕರಾದ ರಾಧಾ ನಿರಾಕರಿಸಿದ್ದಾರೆ.ಆದರೆ ಇದಕ್ಕೂ ಚುನಾವಣೆಗೂ ಸಂಬಂಧವಿಲ್ಲ. ಮಕ್ಕಳಿಗೆ ಏನಾದರೂ ಕೊಡಿಸಿ ಎಂದು ಹತ್ತು ಸಾವಿರ ಹಣ ನೀಡಿದ್ದಾರೆ ಸುದೀಪ್.
ಕಿಚ್ಚನ ಪ್ರೀತಿಗೆ ಖುಷಿಯಾದ ಜನರು
ಕಿಚ್ಚ ಸುದೀಪ್ ಯಾವುದೇ ರೀತಿಯ ಬೇಸರವಿಲ್ಲದೆ ಹೋಟೆಲ್ ನಲ್ಲಿ ಊಟ ಮಾಡಿ ಬಂದಿದ್ದಾರೆ. ನಾನು ಒಬ್ಬ ಸ್ಟಾರ್ ಎನ್ನುವುದನ್ನ ಲೆಕ್ಕಿಸದೇ ಅಲ್ಲಿಯ ಜನರ ಜೊತೆ ಸಮಯ ಕಳೆದಿದ್ದಾರೆ. ಹೋಟೆಲ್ ನಲ್ಲಿದ್ದವರು ಕೂಡ ಇದರಿಂದ ಖುಷಿಯಾಗಿದ್ದಾರೆ.