Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿಚ್ಚ ಸುದೀಪ್ ಇದುವರೆಗೂ ಯಾವುದೇ ಪುಸ್ತಕ ಓದಿಲ್ಲವಂತೆ!
ನಟ ಕಿಚ್ಚ ಸುದೀಪ್ ಇದುವರೆಗೆ ಯಾವುದೇ ಪುಸ್ತಕಗಳನ್ನು ಓದಿಲ್ಲವಂತೆ ಈ ವಿಷಯವನ್ನು ಸ್ವತಃ ಅವರೇ ನಗುತ್ತಾ ಹೇಳಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಪಾರ್ವತಮ್ಮ ರಾಜ್ ಕುಮಾರ್ ಬಗ್ಗೆ ಇರುವ 'ನಾನು ಪಾರ್ವತಿ' ಪುಸ್ತಕ ಬಿಡುಗಡೆಗೆ ಬಂದಿದ್ದ ಸುದೀಪ್ ಒಂದು ಕುತೂಹಲಕಾರಿ ವಿಷಯವನ್ನು ಹಂಚಿಕೊಂಡಿದ್ದಾರೆ.
ಶಿವಣ್ಣನ ಜೊತೆಗಿದ್ದ ಮನಸ್ತಾಪದ ಬಗ್ಗೆ ಓಪನ್ ಆಗಿ ಮಾತನಾಡಿದ ಸುದೀಪ್!
''ನಾನು ಇದುವರೆಗೆ ಯಾವ ಬುಕ್ ಓದಿಲ್ಲ. ಆದರೆ ಈ ಬುಕ್ ಖಂಡಿತ ಓದುತ್ತೇನೆ.'' ಎಂದು ಹೇಳಿದ ಸುದೀಪ್ ಒಂದು ಘಟನೆಯನ್ನು ನೆನಪು ಮಾಡಿಕೊಂಡರು. ''ನನಗೆ ಮತ್ತು ಪುಸ್ತಕಕ್ಕೆ ಆಗಿ ಬರುವುದಿಲ್ಲ. ಕಾಲೇಜ್ ಪುಸ್ತಕ ಬಿಟ್ಟು ನಾನು ಬೇರೆ ಯಾವ ಪುಸ್ತಕವನ್ನು ಓದಿಲ್ಲ. ಒಮ್ಮೆ ಹಾಗೆ ಪುಸ್ತಕ ಅಂಗಡಿಗೆ ಹೋದಾಗ ಯಾವ ಲೇಖಕರ ಹೆಸರು ತಿಳಿಯದೆ ದೊಡ್ಡ ಪುಸ್ತಕ ಕೊಡಿ ಅಂತ ಕೇಳಿದ್ದೆ. ಅವರು ಒಂದು ಇಂಗ್ಲೀಷ್ ಕಾದಂಬರಿ ಕೊಟ್ಟರು. ಅದನ್ನು ಓದುವುದಕ್ಕೆ ಶುರು ಮಾಡಿ ಹತ್ತು ಪುಟ ಓದಿದೆ. ಆದರೆ ಏನು ಅರ್ಧ ಆಗಲಿಲ್ಲ. ಅಲ್ಲಿಂದ ನಾನು ಪುಸ್ತಕವನ್ನು ಓದುವುದಕ್ಕೆ ಹೋಗಿಲ್ಲ.'' ಎಂದು ಕಾಮಿಡಿಯಾಗಿ ತಮ್ಮ ಸ್ಟೈಲ್ ನಲ್ಲಿ ಸುದೀಪ್ ಈ ವಿಷಯವನ್ನು ಹೇಳಿಕೊಂಡಿದ್ದಾರೆ.
ಜೋಗಿ ಬರೆದ 'ನಾನು ಪಾರ್ವತಿ' ಪುಸ್ತಕ ಬಿಡುಗಡೆ ಮಾಡಿದ ಸುದೀಪ್
ಅಂದಹಾಗೆ, ಈ ವೇಳೆ ಪುಸ್ತಕದ ಬಗ್ಗೆ ಮಾತು ಶುರು ಮಾಡಿದ ಸುದೀಪ್ ''ನಾನು ಓಪನ್ ಆಗಿ ಮಾತಾಡ್ಲಾ'' ಎಂದು ಶಿವರಾಜ್ ಕುಮಾರ್ ಜೊತೆ ಈ ಹಿಂದೆ ಇದ್ದ ಮನಸ್ತಾಪದ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ''ಪಾರ್ವತಮ್ಮ ರಾಜ್ ಕುಮಾರ್ ಅವರ ಸಾಧನೆ ಮುಂದೆ ನಾನು ತುಂಬ ಚಿಕ್ಕವನು. ಈ ಬುಕ್ ಕೈ ನಲ್ಲಿ ಹಿಡಿಯುವ ತನಕ ಅದರ ತೂಕ ನನಗೆ ಗೊತ್ತಾಗಿರಲಿಲ್ಲ. ಈ ಬುಕ್ ನಲ್ಲಿರುವ ವಿಷಯವನ್ನು ಜೀವನದಲ್ಲಿ ಅಳವಡಿಸಿ ಕೊಂಡ ಮೇಲೆ ಅದರ ಬಗ್ಗೆ ಮಾತನಾಡುವುದಕ್ಕೆ ನಾನು ಅರ್ಹನಾಗುತ್ತೇನೆ.'' ಎಂದು ಸುದೀಪ್ ಹೇಳಿದ್ದಾರೆ.