Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸ. ಹಿ. ಪ್ರಾ. ಪಾಠ ಶಾಲೆ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ?
ರಿಷಬ್ ಶೆಟ್ಟಿ ನಿರ್ದೇಶಿಸಿ ನಿರ್ಮಾಣ ಮಾಡಿರುವ ಸ. ಹಿ. ಪ್ರಾ. ಪಾಠ ಶಾಲೆ ಕಾಸರಗೋಡು ಚಿತ್ರದ ಹಾಡು ಬಿಡುಗಡೆ ಆಗಿ ಸಖತ್ ವೈರಲ್ ಆಗಿದೆ. ಸಾಂಗ್ ರಿಲೀಸ್ ಆದ 12 ದಿನಗಳಲ್ಲಿ 5 ಲಕ್ಷ ಜನರಿಂದ ವೀಕ್ಷಿಸಲ್ಪಟ್ಟಿದ್ದು ಸಿನಿ ಪ್ರೇಕ್ಷಕರು ಕೂಡ ಹಾಡನ್ನು ಮೆಚ್ಚಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಹಾಡು ಹಿಟ್ ಆಗಿರುವುದಕ್ಕೆ ಸಂತಸ ವ್ಯಕ್ತ ಪಡಿಸುವುದರ ಜೊತೆಯಲ್ಲಿ 'ಸ. ಹಿ. ಪ್ರಾ. ಪಾಠ ಶಾಲೆ ಕಾಸರಗೋಡು' ಸಿನಿಮಾದಲ್ಲಿ ತಾವು ಕೂಡ ಭಾಗಿ ಆಗಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದ್ದಾರೆ.
Congrats @shetty_rishab ....
— Kichcha Sudeepa (@KicchaSudeep) July 1, 2018
My bst wshs always . And Thank u for making me a part of the film when I have contributed nothing.
Cheers ... pic.twitter.com/jcHuWlEAEU
ಹೌದು ಕಿಚ್ಚ ಸುದೀಪ್ ರಿಷಬ್ ಶೆಟ್ಟಿ ಅವರಿಗೆ ಶುಭ ಕೋರುವುದರ ಜೊತೆ ಜೊತೆಗೆ "ನಾನು ಯಾವುದೇ ರೀತಿಯಲ್ಲಿ ಚಿತ್ರಕ್ಕೆ ಕೊಡುಗೆ ನೀಡದೇ ಇದ್ದರೂ ಕೂಡ ಚಿತ್ರದಲ್ಲಿ ನನ್ನನ್ನೂ ಭಾಗಿಯಾಗಿ ಮಾಡಿರುವುದಕ್ಕೆ ಧನ್ಯವಾದಗಳು" ಎಂದಿದ್ದಾರೆ.
ಚಂದನವನಕ್ಕೆ ಡಜನ್ ನಿರ್ದೇಶಕರನ್ನು ಕೊಟ್ಟ 'ಕುಂದಾಪುರ
ಹಾಗಂತ 'ಸ. ಹಿ. ಪ್ರಾ. ಪಾಠ ಶಾಲೆ ಕಾಸರಗೋಡು' ಚಿತ್ರದಲ್ಲಿ ಸುದೀಪ್ ಅಭಿನಯ ಮಾಡಿಲ್ಲ. ಆದರೆ ರಿಷಬ್ ಶೆಟ್ಟಿ ಅವರಿಗೆ ಕಿಚ್ಚನ ಮೇಲಿರುವ ಪ್ರೀತಿ ಮತ್ತು ಗೌರವಾರ್ಥವಾಗಿ ಕಿಚ್ಚ ಸುದೀಪ್ ಪ್ರಸೆಂಟ್ಸ್ ಎಂದು ತಮ್ಮ ಸಿನಿಮಾ ಪೋಸ್ಟರ್ ನಲ್ಲಿ ಹಾಕಿದ್ದಾರೆ.
'ಸ. ಹಿ. ಪ್ರಾ. ಪಾಠ ಶಾಲೆ ಕಾಸರಗೋಡು' ಸಿನಿಮಾದಲ್ಲಿ ಅನಂತ್ ನಾಗ್, ರಂಜನ್, ಸಂಪತ್, ಪ್ರಮೋದ್ ಶೆಟ್ಟಿ, ಸಂಪತ್ ಪವೂರ್, ಮಹೇಂದ್ರ ಇನ್ನೂ ಅನೇಕರು ಅಭಿನಯ ಮಾಡಿದ್ದಾರೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೊನೆಯ ಹಂತದಲ್ಲಿದ್ದು ಆಗಷ್ಟ್ 16 ರಂದು ಸಿನಿಮಾವನ್ನ ರಾಜ್ಯದ ಜನತೆ ಮುಂದೆ ತರಲಿದ್ದಾರೆ ನಿರ್ದೇಶಕರು.