Don't Miss!
- News ತುಷ್ಟೀಕರಣ ರಾಜಕೀಯಕ್ಕೆ ಮುಸ್ಲೀಮರಿಗೆ ಮೀಸಲಾತಿಗೆ ಕಾಂಗ್ರೆಸ್ ಬೆಂಬಲ: ಬಸವರಾಜ ಬೊಮ್ಮಾಯಿ ಕಿಡಿ
- Automobiles Hero: ಮಧ್ಯಮ ವರ್ಗದವರ ನೆಚ್ಚಿನ ಬೈಕ್.. ರೂ.75 ಸಾವಿರ ಬೆಲೆ.. ಮೈಲೇಜ್ನಲ್ಲಿ ಸರಿ ಸಾಟಿಯಿಲ್ಲ!
- Lifestyle 3ನೇ ಬಾರಿ ಬಾಹ್ಯಾಕಾಶಕ್ಕೆ ಹಾರಲು ಮುಂದಾದ ಸುನೀತಾ ವಿಲಿಯಮ್ಸ್..!
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನೂರು ಚಿತ್ರಮಂದಿರಗಳಲ್ಲಿ ಕಿಚ್ಚ ಸುದೀಪ್ ಹಳೆ ಚಿತ್ರ
ಕಿಚ್ಚ ಸುದೀಪ್ ಅಭಿಯನದ ಹಳೆಯ ಚಿತ್ರವೊಂದಕ್ಕೆ ಮರುಜೀವ ಸಿಕ್ಕಿದೆ. 2010ರಲ್ಲಿ ತೆರೆಕಂಡಿದ್ದ ಸುದೀಪ್ ಹಾಗೂ ಗೋಲ್ಡನ್ ಗರ್ಲ್ ರಮ್ಯಾ ಅಭಿನಯದ ರೀಮೇಕ್ ಚಿತ್ರ 'ಕಿಚ್ಚ ಹುಚ್ಚ'. ಈ ಚಿತ್ರ ತೆಲುಗು ಭಾಷೆಗೆ ಡಬ್ ಆಗಿದ್ದು ಆಂಧ್ರಪ್ರದೇಶದಲ್ಲಿ ಸೆಪ್ಟೆಂಬರ್ 21ರಂದು ನೂರು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.
ಈ ಚಿತ್ರದ ಡಬ್ಬಿಂಗ್ ರೈಟ್ಸ್ ತೆಲುಗು ಚಿತ್ರಗಳ ನಿರ್ಮಾಪಕ ಅರಿಗೇಳ ಕಿಶೋರ್ ಪಡೆದಿದ್ದರು. ಇತ್ತೀಚೆಗೆ ಈ ಚಿತ್ರದ ಆಡಿಯೋ ಕೂಡ ಬಿಡುಗಡೆಯಾಗಿದ್ದು ಚಿತ್ರದ ಟ್ರೇಲರ್ ಗಳು ಆಂಧ್ರದಲ್ಲಿ ಭಾರಿ ಕ್ರೇಜ್ ಹುಟ್ಟಿಸಿವೆ.
ಗುರುದತ್ ನಿರ್ದೇಶನದ 'ಕಿಚ್ಚ ಹುಚ್ಚ' ಪಕ್ಕಾ ಆಕ್ಷನ್ ಪ್ರಧಾನ ಚಿತ್ರವಾಗಿದೆ. ಕೆ ಮಂಜು ನಿರ್ಮಾಣದ ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಕನ್ನಡದಲ್ಲಿ ಈ ಚಿತ್ರ ತಕ್ಕಮಟ್ಟಿಗೆ ದುಡ್ಡು ಮಾಡಿದರೂ ಹೇಳಿಕೊಳ್ಳುವಂತಹ ಸದ್ದು ಮಾಡಿರಲಿಲ್ಲ.
ಈಗ ತೆಲುಗಿಗೆ ಡಬ್ ಆಗಿರುವ ಈ ಚಿತ್ರ ತೆಲುಗು ಪ್ರೇಕ್ಷಕರಲ್ಲಿ ಒಂದಷ್ಟು ಕುತೂಹಲವನ್ನು ಮೂಡಿಸಿದೆ. ಹೇಳಿ ಕೇಳಿ ತೆಲುಗು ಚಿತ್ರರಂಗದ ಪ್ರೇಕ್ಷಕರು ಪಕ್ಕಾ ಮಾಸ್ ಪ್ರಿಯರು. ಹಾಗಾಗಿ ಈ ಚಿತ್ರದ ಅಡಿಬರಹವನ್ನು 'ಪಕ್ಕಾ ಮಾಸ್' ಎಂದು ಇಡಲಾಗಿದೆ.
ಪ್ರಣಯ ರಾಜ ಶ್ರೀನಾಥ್, ರಂಗಾಯಣ ರಘು, ಐಂದ್ರಿತಾ ರೇ (ಅತಿಥಿ ಪಾತ್ರ) ಮುಂತಾದವರು ಅಭಿನಯಿಸಿರುವ ಈ ಚಿತ್ರ ತಮಿಳಿನ 'ಚಿತ್ರಂ ಪೆಸುತಾಡಿ' ರೀಮೇಕ್. ತಮಿಳು ಚಿತ್ರವನ್ನು ಫ್ರೇಂ ಟು ಫ್ರೇಂ ಭಟ್ಟಿ ಇಳಿಸದೆ ಇಲ್ಲಿನ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ತೆರೆಗೆ ತಂದಿದ್ದರು ಗುರುದತ್. ತಮಿಳಿನಿಂದ ಕನ್ನಡಕ್ಕೆ ರೀಮೇಕ್ ಆಗಿ ಕನ್ನಡದಿಂದ ತೆಲುಗಿಗೆ ಡಬ್ ಆಗಿರುವುದು ವಿಚಿತ್ರ ಎನ್ನಬೇಕು.
ಎಸ್ ಎಸ್ ರಾಜಮೌಳಿ ನಿರ್ದೇಶನದ 'ಈಗ' ಚಿತ್ರದ ಮೂಲಕ ತೆಲುಗು ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಸುದೀಪ್ ತಮ್ಮ 'ಕಿಚ್ಚ' ಚಿತ್ರವೂ ಮೂಲಕ ಖಂಡಿತ ಪ್ರೇಕ್ಷಕರ ಮನಗೆಲ್ಲುತ್ತಾರೆ ಎಂದು ತೆಲುಗು ನಿರ್ಮಾಪಕ ಅರಿಗೇಳ ಕಿಶೋರ್ ತಿಳಿಸಿದ್ದಾರೆ.