ತೆಲುಗು ನಿರ್ದೇಶಕ ಪೂರಿ ಜಗನ್ನಾಥ್, ಸುಕುಮಾರ್ ಜೊತೆ ಕಿಚ್ಚ
ಕರುನಾಡ ಹೆಬ್ಬುಲಿ ಕಿಚ್ಚ ಸುದೀಪ್ ಗಡಿ ದಾಟಿ ಬೆಳೆದಿದ್ದಾರೆ. ಕನ್ನಡದ ಚಿತ್ರರಂಗದಿಂದ ಆಚೆ ಆಗಾಗ ಸಿನಿಮಾ ಮಾಡಿ ಬರುವ ಅವರು ಅನೇಕರ ಜೊತೆಗೆ ಸ್ನೇಹ ಸಂಬಂಧ ಹೊಂದಿದ್ದಾರೆ.
ಸದ್ಯ ತೆಲುಗು ಚಿತ್ರರಂಗದ ದಿಗ್ಗಜರನ್ನು ಸುದೀಪ್ ಭೇಟಿ ಮಾಡಿದ್ದಾರೆ. ನಿರ್ದೇಶಕ ಪೂರಿ ಜಗನ್ನಾಥ್, ಸುಕುಮಾರ್, ನಟಿ ಚಾರ್ಮಿ, ನಟ ಶ್ರೀಕಾಂತ್ ಅವರನ್ನು ಕಿಚ್ಚ ಮೀಟ್ ಮಾಡಿದ್ದು, ಆ ಫೋಟೋ ಹಂಚಿಕೊಳ್ಳಲಾಗಿದೆ. ಇನ್ನು 'ದಿ ವಿಲನ್' ಸಿನಿಮಾದಲ್ಲಿ ಸುದೀಪ್ ಜೊತೆಗೆ ಶ್ರೀಕಾಂತ್ ನಟಿಸಿದ್ದಾರೆ.

ಹೈದರಾಬಾದ್ ನಲ್ಲಿ ಸುದೀಪ್ ಅವರ 'ಪೈಲ್ವಾನ್' ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಚಿತ್ರೀಕರಣದ ಬಿಡುವಿನ ವೇಳೆ ತಮ್ಮ ಸ್ನೇಹಿತರನ್ನು ಸುದೀಪ್ ನೋಡಿಕೊಂಡು ಬಂದಿದ್ದಾರೆ. ಕೆಲ ಸಂತೋಷದ ಕ್ಷಣವನ್ನು ಅವರ ಜೊತೆಗೆ ಕಳೆದಿದ್ದಾರೆ.

ಸದ್ಯ ಸುದೀಪ್ 'ಪೈಲ್ವಾನ್' ಸಿನಿಮಾದಲ್ಲಿ ಬ್ಯುಸಿ ಇದ್ದು, ಇತ್ತೀಚಿಗಷ್ಟೆ ಹೈದರಾಬಾದ್ ನಲ್ಲಿಯೇ ಅವರು ಕನ್ನಡ ರಾಜ್ಯೋತ್ಸವ ಆಚರಿಸಿದ್ದರು.
More from Filmibeat
English summary
Kannada actor Sudeep met tollywood director Sukumar and Puri Jagannath.


Click it and Unblock the Notifications











