Don't Miss!
- News Bullet train: ಬುಲೆಟ್ ರೈಲು ಸೇವೆ ಆರಂಭದ ಬಗ್ಗೆ ಅಶ್ವಿನಿ ವೈಷ್ಣವ್ ಅವರಿಂದ ಮಹತ್ವದ ಮಾಹಿತಿ
- Automobiles ಭರ್ಜರಿ ಮೈಲೇಜ್ನ ಹೈಬ್ರಿಡ್ ಮಾರುತಿ ಸ್ವಿಫ್ಟ್: ಇವಿ ಕಾರುಗಳನ್ನೂ ಹಿಂದಿಕ್ಕಲಿದೆ ಎಂದ ಭವಿಷ್ಯವಾಣಿ!
- Sports IPL 2024: ಮುಂಬೈ ಇಂಡಿಯನ್ಸ್ಗೆ ಭಾರೀ ಹಿನ್ನಡೆ; ಹಾರ್ಟ್ಬ್ರೇಕ್ ಪೋಸ್ಟ್ ಮಾಡಿದ ಸೂರ್ಯಕುಮಾರ್
- Technology Airtel & Noise: ಇನ್ಮುಂದೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಸ್ಮಾರ್ಟ್ವಾಚ್ನದ್ದೇ ಹವಾ! ಟ್ಯಾಪ್-ಟು-ಪೇ ಫೀಚರ್ಸ್..
- Finance ಬಾಬಾ ರಾಮ್ದೇವ್ಗೆ ಖುದ್ದು ಹಾಜರಾಗುವಂತೆ ಖಡಕ್ ಸೂಚನೆ ನೀಡಿದ ಸುಪ್ರೀಂ ಕೋರ್ಟ್
- Lifestyle ಈರುಳ್ಳಿ ಹಾಕದೆ 3 ಪದಾರ್ಥ ಹಾಕಿ 5 ನಿಮಿಷದಲ್ಲಿ ಚಟ್ನಿ ಮಾಡಬಹುದು.! ಇಲ್ಲಿದೆ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ದರ್ಶನ್-ರಾಕ್ಲೈನ್ ಚಿತ್ರಕ್ಕಾಗಿ ಸುದೀಪ್ ಇಷ್ಟೊಂದು ತ್ಯಾಗಕ್ಕೆ ಸಿದ್ಧವಾದ್ರಾ.?
Recommended Video
ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಬ್ಬರು 'ಮದಕರಿ ನಾಯಕ'ನ ಕುರಿತು ಸಿನಿಮಾ ಮಾಡ್ತಿದ್ದಾರೆ. ಇದು ಅಭಿಮಾನಿಗಳಲ್ಲಿ ಗೊಂದಲ ಉಂಟು ಮಾಡಿತ್ತು. ಜೊತೆ ಇಬ್ಬರು ಅಭಿಮಾನಿಗಳು 'ನೀನಾ-ನಾನಾ' ಎಂದು ಕಿತ್ತಾಡಿಕೊಂಡಿದ್ದರು.
ದರ್ಶನ್ ಮತ್ತು ಸುದೀಪ್ ಇಬ್ಬರು ಕೂಡ 'ಎರಡು ಸಿನಿಮಾ ಆಗಲಿ, ಇಬ್ಬರು ಮಾಡ್ತೀವಿ' ಎಂದು ಹೇಳಿದ್ದರು. ಈ ಮಧ್ಯೆ ವಾಲ್ಮೀಕಿ ಸಮುದಾಯದ ಸ್ವಾಮೀಜಿ ಅವರ ಹೇಳಿಕೆಯೊಂದು ಮತ್ತಷ್ಟು ವಿವಾದಕ್ಕೆ ಗುರಿಯಾಗಿತ್ತು.
'ಮದಕರಿ ನಾಯಕ' ಯಾರಾಗಬೇಕು, ಜನಾಭಿಮತ ಏನು ಹೇಳುತ್ತಿದೆ.?
ಇಷ್ಟೆಲ್ಲಾ ಬೆಳವಣಿಗೆ ಕಂಡು ಸುದೀಪ್ ಅವರು ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದರು. 'ನಾನೊಬ್ಬ ಮದಕರಿ, ನಾನು ಸಿನಿಮಾ ಮಾಡ್ತೀನಿ, ಅವ್ರು ಸಿನಿಮಾ ಮಾಡಲಿ, ಎರಡಕ್ಕೂ ಒಳ್ಳೆಯದಾಗಲಿ' ಎಂದಿದ್ದರು. ಆದ್ರೀಗ, ಈ ಪ್ರಾಜೆಕ್ಟ್ ಬಗ್ಗೆ ಮಾತನಾಡಿರುವ ಸುದೀಪ್ ಎಷ್ಟೊಂದು ತ್ಯಾಗ ಮಾಡಲು ನಿರ್ಧರಿಸಿದ್ದಾರೆ.
ಅವರ ಸಿನಿಮಾ ಖಂಡಿತಾ ಚೆನ್ನಾಗಿ ಆಗುತ್ತೆ
'ನಾವು ಮಾಡೋಕೆ ಹೊರಟಿರುವುದು ಓರ್ವ ಐತಿಹಾಸಿಕ ವ್ಯಕ್ತಿಯ ಬಗ್ಗೆ. ಅವರ ಸಿನಿಮಾನೂ ಚೆನ್ನಾಗಿ ಆಗುತ್ತೆ. ಅವರದ್ದು ಅನುಭವ ಹೊಂದಿರುವ ತಂಡ. ನನಗೆ ವಾದ ಮಾಡ್ಕೋಬೇಕು, ಆ ಟೈಟಲ್ ಬೇಕು ಅಂತ ಇಲ್ಲ. ಅವರು ಯಾವುದು ಬಳಸಿಕೊಳ್ತಾರೋ ಅದಾದ್ಮೇಲೆ ಅವರು ಬಿಟ್ಟಿದ್ದು ನಾನು ಇಟ್ಕೊಳ್ತೀನಿ'' ಎನ್ನುವಷ್ಟು ತ್ಯಾಗಕ್ಕೆ ಸುದೀಪ್ ಸಿದ್ಧವಾಗಿದ್ದಾರೆ.
ಮುರುಘಾಮಠಕ್ಕೆ ದರ್ಶನ್-ರಾಕ್ ಲೈನ್ ಭೇಟಿ ಹಿಂದೆ ಬಲವಾದ ಕಾರಣ.!
ಅವರ ಗಮನಕ್ಕೆ ಇರಲಿ ಅಂತ ಹೇಳಿದೆ
''ನಾನು ಸಿನಿಮಾ ಮಾಡೋಕೆ ಹೊರಟಿದ್ದೇನೆ ಹೊರತು ಯುದ್ಧ ಮಾಡ್ತಿಲ್ಲ. ಅವರು ಯಾರನ್ನ ಹಾಕ್ಕೊಂಡು ಸಿನಿಮಾ ಮಾಡ್ತಾರೆ, ಏನು ಅನ್ನೋದು ನನಗೆ ಬೇಕಾಗಿಲ್ಲ. ನಾನು ಐದಾರು ವರ್ಷದಿಂದ ಈ ಪ್ರಾಜೆಕ್ಟ್ ನಲ್ಲಿ ಕೆಲಸ ಮಾಡ್ತಿದ್ದೀನಿ. ಈ ಎರಡು ವರ್ಷದಿಂದ ಸ್ಕ್ರಿಪ್ಟ್ ಮಾಡ್ತಿದ್ದೀನಿ. ಅದು ಅವರಿಗೆ ಗೊತ್ತಿರಬೇಕು. ಅವರ ಗಮನಕ್ಕೆ ಇರಲಿ. ಯಾಕಂದ್ರೆ, ಬೇರೆ ಯಾರೂ ತಪ್ಪು ತಿಳಿದುಕೊಳ್ಳಬಾರದು'' ಎಂದು ಸುದೀಪ್ ಹೇಳಿದ್ದಾರೆ.
ಜನವರಿ ತಿಂಗಳಲ್ಲಿ ದರ್ಶನ್ ಅಭಿನಯದ ಎರಡು ಸಿನಿಮಾ ಆರಂಭ.!
ಅವರ ತಂಡ ಅನುಭವ ಹೊಂದಿದೆ
'ನಮ್ಮಗಿಂತ ಹಣಬಲ, ಭುಜಬಲ, ಅವರ ನಿರ್ದೇಶಕರಿಗೆ ಇರುವ ಅನುಭವ ನಮಗಿಲ್ಲ. ನಾನು ಮನಸ್ಸಿನಿಂದ ಹೇಳುತ್ತಿದ್ದೇನೆ. ಜನವರಿಯಲ್ಲಿ ಅವರ ಸಿನಿಮಾ ಆರಂಭವಾಗುತ್ತೆ ಎಂಬ ಸುದ್ದಿ ಕೇಳಿದೆ. ಬಟ್, ನನ್ನದು ಇನ್ನು ಲೇಟ್ ಆಗುತ್ತೆ. ಬಹುಶಃ ಮೇ ಅಥವಾ ಜೂನ್ ನಲ್ಲಿ ಶುರು ಮಾಡಬಹುದು. ಅಷ್ಟೋತ್ತಿಗೆ ಅವರ ಸಿನಿಮಾನೇ ಬಿಡುಗಡೆಯಾಗಬಹುದು. ಎಲ್ಲಿಂದ ವಾರ್ ಇರುತ್ತೆ.' - ಸುದೀಪ್
ದರ್ಶನ್ 'ಮದಕರಿ ನಾಯಕ' ಚಿತ್ರಕ್ಕೆ ನಾಯಕಿ ಇವರಾಗ್ಬೇಕಂತೆ
ಟೈಟಲ್ ಬೇಕಿದ್ರೂ ಬಿಡ್ತೀನಿ
'ನಾಳೆ ಇನ್ನೊಬ್ಬರು ಸಿನಿಮಾನ ಘೋಷಣೆ ಮಾಡಬಹುದು. ಅವರನ್ನ ತಡೆಯೋಕೆ ಆಗುತ್ತಾ. ಇದು ರೀಮೇಕ್ ಸಿನಿಮಾ ಆಗಿದ್ರೆ, ರೈಟ್ಸ್ ತಗೊಳ್ಳಬಹುದು. ಆದ್ರೆ, ಇದು ಐತಿಹಾಸಿಕ ಸಿನಿಮಾ. ಟೈಟಲ್ ನಲ್ಲಿ ಸ್ವಲ್ಪ ಚರ್ಚೆ ಆಯ್ತು. ನನಗೆ ಆ ಟೈಟಲ್ ಕೂಡ ಬೇಡ. ಅದನ್ನ ಬಿಟ್ಟು ಕೊಡ್ತೀನಿ. ನಾನು ಯಾವುದೇ ಭಯದಿಂದ ಹೇಳುತ್ತಿಲ್ಲ. ಪ್ರೀತಿಯಿಂದ ಹೇಳುತ್ತಿದ್ದೇನೆ'' ಎಂದು ಸುದೀಪ್ ಸ್ಪಷ್ಟನೆ ನೀಡಿದ್ದಾರೆ.
'ಮದಕರಿ' ವಿವಾದದ ಬಗ್ಗೆ ಮುನಿಸಿಕೊಂಡೆ ಮಾತನಾಡಿದ ಮುನಿರತ್ನ!
ನಾನು ಯಾವತ್ತು ಜಾತಿ ನೋಡಿಲ್ಲ
ಸ್ವಾಮೀಜಿ ಅವರು ಪ್ರೀತಿಯಿಂದ ಮಾತನಾಡಿದ್ದರು. ಅವರು ಎಲ್ಲೂ ಜಾತಿ ಬಗ್ಗೆ ಮಾತನಾಡಿಲ್ಲ. ಒಂದು ಸಿನಿಮಾದಿಂದ ಇದೆಲ್ಲಾ ಬೇಡ. ನಾನು ಯಾವತ್ತು ಜಾತಿ ನೋಡಿಲ್ಲ. ಎಲ್ಲರೂ ಕರ್ನಾಟಕದವರೇ. ಆ ಸಿನಿಮಾನೂ ಶತದಿನೋತ್ಸವ ಆಚರಿಸಲಿ. ನಮಗಿಂತ ದೊಡ್ಡ ಕಲೆಕ್ಷನ್ ಆಗಲಿ. ಸಾಮಾಜಿಕ ಜಾಲತಾಣದಲ್ಲಿ ಏನೇನೋ ನಡೆಯುತ್ತೆ. ಅದರ ಬಗ್ಗೆ ನಾವು ಕಲಾವಿದರ ಯಾವತ್ತೂ ಹೇಳಿಕೆ ಕೊಡಲ್ಲ. ವಿವಾದ ಆಗಲಿ ಅಂತ ಹೇಳಲ್ಲ'' ಎಂದು ಖಚಿತಪಡಿಸಿದರು.
ದರ್ಶನ್-ಸುದೀಪ್ ಸುಮ್ಮನಿದ್ರೂ 'ಜಾತಿವಾದಿ'ಗಳು ಸುಮ್ಮನಾಗುತ್ತಿಲ್ಲ.!