ರಕ್ಷಿತಾ ಅವರನ್ನ ಮತ್ತೆ ಮತ್ತೆ ಕಾಲೆಳೆದ ಅಭಿನಯ ಚಕ್ರವರ್ತಿ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಇಂದು ದುಬಾಂಗ್ 3 ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಲು ಮುಂಬೈಗೆ ತೆರಳಿದ್ದಾರೆ. ಹೋಗುವಾಗ ಜೊತೆಯಲ್ಲಿ ನಿರ್ದೇಶಕ ಪ್ರೇಮ್ ಅವರನ್ನ ಕರೆದುಕೊಂಡು ಹೋಗಿದ್ದಾರೆ.
ಇದು ನಟಿ ಹಾಗೂ ಪ್ರೇಮ್ ಪತ್ನಿ ರಕ್ಷಿತಾಗೆ ಬೇಸರ ತಂದಿದೆ. ''ಸಲ್ಮಾನ್ ಖಾನ್ ಅಂದ್ರೆ ನನಗೆ ತುಂಬಾ ಇಷ್ಟ. ಆದ್ರೆ, ನೀನು ಪ್ರೇಮ್ ಒಬ್ಬರನ್ನೇ ಕರೆದುಕೊಂಡು ಹೋಗಿದ್ದಿಯಾ. ನಾನು ಏನು ಮಾಡಿದ್ದೆ ನಿನಗೆ'' ಎಂದು ರಕ್ಷಿತಾ ಸುದೀಪ್ ಗೆ ಪ್ರಶ್ನಿಸಿದ್ದರು.

ಇದಕ್ಕೆ ಉತ್ತರಿಸಿರುವ ಸುದೀಪ್ ಪ್ರೇಮ್ ಪತ್ನಿಯ ಕಾಲೆಳೆದಿದ್ದಾರೆ. ''ನೀನು ಒಮ್ಮೆಯೂ ನಮ್ಮನ್ನು ನೋಡಲು ನಮ್ಮ ವಿಲನ್ ಸಿನಿಮಾದ ಸೆಟ್ ಗೆ ಬಂದಿಲ್ಲ (ಈ ಚಿತ್ರವನ್ನ ನಿಮ್ಮ ಪತಿಯೇ ನಿರ್ದೇಶನ ಮಾಡಿದ್ದರು. ಸುಮಾರು ಎರಡು ವರ್ಷ). ಚಂದ್ರ ಲೇಔಟ್ ನಿಂದ ಮಿನರ್ವ್ ಮಿಲ್ ಗೆ ನಿನ್ನಿಂದ ಪ್ರಯಾಣ ಮಾಡಲು ಸಾಧ್ಯವಾಗಲಿಲ್ಲ. ಸೋ, ಮುಂಬೈಗೆ ನಿನ್ನನ್ನು ಕರೆದು ಯಾಕೆ ತೊಂದರೆ ಕೊಡಬೇಕು ಅಂತ ಸುಮ್ಮನಾದ್ವಿ'' ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಅಂದ್ಹಾಗೆ, ರಕ್ಷಿತಾ ಪ್ರೇಮ್ ಮತ್ತು ಸುದೀಪ್ ಒಳ್ಳೆಯ ಸ್ನೇಹಿತರು. ಅದಕ್ಕೂ ಹೆಚ್ಚಾಗಿ ಸಲ್ಮಾನ್ ಖಾನ್ ಅಂದ್ರೆ ರಕ್ಷಿತಾಗೆ ತುಂಬಾ ಇಷ್ಟ. ಸೋ, ಸುಲ್ಮಾನ್ ಜೊತೆ ಸುದೀಪ್ ನಟಿಸುತ್ತಿದ್ದಾರೆ. ಪ್ರೇಮ್ ಜೊತೆಯಲ್ಲಿ ಹೋಗಿದ್ದಾರೆ. ಇದು ಸಹಜವಾಗಿ ರಕ್ಷಿತಾ ಅವರಿಗೆ ಬೇಸರ ತರಿಸಿದೆ. ಅದಕ್ಕೆ ಸುದೀಪ್ ತಮ್ಮದೇ ಸ್ಟೈಲ್ ನಲ್ಲಿ ಉತ್ತರಿಸಿ ಸಮಾಧಾನ ಪಡಿಸಿದ್ದಾರೆ.


Click it and Unblock the Notifications











