twitter
    For Quick Alerts
    ALLOW NOTIFICATIONS  
    For Daily Alerts

    ಅಂಬರೀಶ್ ಪುಣ್ಯಸ್ಮರಣೆ; ಅಂಬಿ ಮಾಮನನ್ನು ನೆನೆದ ಕಿಚ್ಚ ಸುದೀಪ್

    |

    ನಟ, ರೆಬಲ್ ಸ್ಟಾರ್ ಅಂಬರೀಶ್ ಅವರ ಎರಡನೇ ವರ್ಷದ ಪುಣ್ಯ ತಿಥಿಯನ್ನು ಇಂದು (ನವೆಂಬರ್ 24) ನೆರವೇರಿಸಲಾಗಿದೆ. ಇಂದು ಚಿತ್ರರಂಗದ ಅನೇಕ ಗಣ್ಯರು ಅಂಬರೀಶ್ ನೆನೆದು ಭಾವುಕ ಟ್ವೀಟ್ ಮಾಡಿದ್ದಾರೆ. ಪ್ರೀತಿಯ ಅಂಬಿಮಾಮನ ಬಗ್ಗೆ ನಟ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    Recommended Video

    ಅಂಬಿ ಅಪ್ಪಾಜಿ ಬಯ್ಯೋದನ್ನ ತುಂಬಾ ಮಿಸ್ ಮಾಡ್ಕೋತಾ ಇದ್ದೀನಿ ಎಂದ ದರ್ಶನ್ | Filmibeat Kannada

    'ನಿಮ್ಮ ಬಗ್ಗೆ ಏನೇ ಹೇಳಿದ್ರು ಕಡಿಮೆ ಆಗುತ್ತೆ ಮಾಮ. ನಿಮ್ಮ ಸುತ್ತ ಇದ್ದ ಪ್ರತಿಯೊಬ್ಬರು ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನಿಮ್ಮ ಸುತ್ತ ಇರುವುದನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ' ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಅಂಬರೀಶ್ ಮತ್ತು ಸುದೀಪ್ ಅಭಿನಯದ ಕೊನೆಯ ಸಿನಿಮಾ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿಸಿನಿಮಾದ ಫೋಟೋವನ್ನು ಹಂಚಿಕೊಂಡಿದ್ದಾರೆ.

    Big News: ಬಿಗ್ ಬಾಸ್‌ ಕನ್ನಡ ಹೊಸ ಆವೃತ್ತಿಗೆ ಕೆಲಸ ಆರಂಭಿಸಿದ ಸುದೀಪ್Big News: ಬಿಗ್ ಬಾಸ್‌ ಕನ್ನಡ ಹೊಸ ಆವೃತ್ತಿಗೆ ಕೆಲಸ ಆರಂಭಿಸಿದ ಸುದೀಪ್

    ಫೋಟೋದಲ್ಲಿ 'ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲೂ ಚಿರಸ್ಥಾಯಿಯಾಗಿದ್ದೀರ. ನಿಮ್ಮ ನೆನಪು ಸದಾ ನಮ್ಮೊಂದಿಗೆ ಅಜರಾಮರ' ಎಂದು ಬರೆದಿದೆ.

     Sudeep remembers Ambareesh on his second death anniversary

    ಅಂಬರೀಶ್ ಗೆ ಬಹಳ ಹತ್ತಿರವಾಗಿದ್ದ ಚಿತ್ರರಂಗದ ಕಲಾವಿದರಲ್ಲಿ ಸುದೀಪ್ ಕೂಡ ಒಬ್ಬರು. ಬಾಲ್ಯದಿಂದ ಅಂಬರೀಶ್ ಜೊತೆಗೆ ಸುದೀಪ್ ಗೆ ಉತ್ತಮ ಒಡನಾಡ ಇತ್ತು. ತಮ್ಮ ಕುಟುಂಬದ ಹಿರಿಯಣ್ಣನಂತೆ ಅಂಬರೀಶ್ ಇದ್ದರು.

    ಅಂದಹಾಗೆ ಇಂದು ಅವರ ಪುಣ್ಯಸ್ಮರಣೆ ಅಂಗವಾಗಿ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳು ಕಂಠೀರವ ಸ್ಟುಡಿಯೋದಲ್ಲಿರುವ ಅಂಬರೀಶ್ ಸಮಾಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ನಟಿ ಮತ್ತು ಸಂಸದೆ ಸುಮಲತಾ ಅಂಬರೀಶ್, ಪುತ್ರ ಅಭಿಷೇಕ್, ನಟ ದರ್ಶನ್ ಮತ್ತು ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಅನೇಕ ಗಣ್ಯರು ಸಮಾಧಿಗೆ ಪೂಜೆ ಮಾಡಿ, ಅಂಬರೀಶ್ ಗೆ ಗೌರವ ಸಲ್ಲಿಸಿದರು.

    English summary
    Actor Sudeep remembers Ambareesh on his second death anniversary.
    Wednesday, November 25, 2020, 9:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X