Don't Miss!
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- News ಕರ್ನಾಟಕಕ್ಕೆ ವಸೂಲಿಗೆ ಬಂದಿದ್ದ ರಣದೀಪ್ ಸುರ್ಜೇವಾಲ: ಪ್ರಹ್ಲಾದ್ ಜೋಶಿ
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಪ್ಪಿಗೆ ಆಸೆ ಹೇಳಿಕೊಂಡ ಸುದೀಪ್: ಕಿಚ್ಚನ ಆಸೆ ಈಡೇರಿಸುತ್ತಾರಾ ಬುದ್ಧಿವಂತ.?
Recommended Video
ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯದ 'ಐ ಲವ್ ಯೂ' ಸಿನಿಮಾ ಜೂನ್ 14 ರಂದು ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ. ಇತ್ತೀಚಿಗಷ್ಟೆ 'ಐ ಲವ್ ಯೂ' ಚಿತ್ರದ ಟ್ರೈಲರ್ ಮತ್ತು ಆಡಿಯೋ ಬಿಡುಗಡೆ ಸಮಾರಂಭವನ್ನ ಅಧಿಕೃತವಾಗಿ ಮಾಡಲಾಗಿತ್ತು.
ಈ ವಿಶೇಷ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಉಪ್ಪಿ ಅಂಡ್ ಟೀಮ್ ಗೆ ಶುಭ ಕೋರಿದ ಕಿಚ್ಚ, ರಿಯಲ್ ಸ್ಟಾರ್ ಬಳಿ ತಮ್ಮದೊಂದು ಮನವಿ ಮಾಡಿಕೊಂಡರು.
ಮುಕುಂದನ ಸಿನಿಮಾಗೆ ಸಾಥ್ ಕೊಡ್ತಿದ್ದಾರೆ ಮುರಾರಿ
''ನಾನು ಇಲ್ಲಿ ಐ ಲವ್ ಯೂ ಚಿತ್ರಕ್ಕೆ ವಿಶ್ ಮಾಡೋಕೆ ಬಂದಿಲ್ಲ. ಉಪೇಂದ್ರ ಅವರ ಬಳಿ ನನ್ನದೊಂದು ಮನವಿ ಮಾಡಲು ಬಂದಿದ್ದೇನೆ. ಅದನ್ನ ಈಡೇರಿಸಿದರೆ ಸಾಕು' ಎಂದು ಬಹಿರಂಗವಾಗಿ ಹೇಳಿಕೊಂಡರು. ಕಿಚ್ಚನ ಈ ಆಸೆ ಕೇಳಿ ಉಪ್ಪಿ ಸರಿ ಎಂದು ಭರವಸೆ ಕೂಡ ನೀಡಿದ್ರು. ಅಷ್ಟಕ್ಕೂ, ಬುದ್ಧಿವಂತನ ಬಳಿ ಸುದೀಪ್ ಕೇಳಿಕೊಂಡಿದ್ದೇನು? ಮುಂದೆ ಓದಿ.....
ಆ ವಿಷ್ಯದಲ್ಲಿ ಉಪ್ಪಿಗೆ ನಾನೊಬ್ಬನೇ ಎದುರಾಳಿ.!
ಉಪ್ಪಿ ಡ್ಯಾನ್ಸ್ ನೋಡಿ ಸರ್ಪ್ರೈಸ್ ಆದ ಸುದೀಪ್ ''ಉಪೇಂದ್ರ ಅವರಿಗೆ ನಾನೊಬ್ಬನೇ ಎದುರಾಳಿ. ಈ ಚಿತ್ರದಲ್ಲಿ ಅವರ ಡ್ಯಾನ್ಸ್ ನೋಡಿದ್ಮೇಲೆ ನಾನು ಎಫರ್ಟ್ ಹಾಕಬೇಕು ಅನಿಸುತ್ತಿದೆ. ಇದು ನನ್ನ ಮರ್ಯಾದೆ ಪ್ರಶ್ನೆ'' ಎಂದು ಖುಷಿಯಾಗಿ ಹೇಳಿಕೊಂಡರು.
ಉಪೇಂದ್ರ 50ನೇ ಸಿನಿಮಾ ಯಾವ ಹಂತದಲ್ಲಿದೆ? ಉಪ್ಪಿ ಹೇಳಿದ್ದೇನು?
ನಮಗೆ ಅವರು ದೊಡ್ಡ ಸ್ಫೂರ್ತಿ
''ಉಪೇಂದ್ರ ಅವರು ನಮಗೆಲ್ಲ ದೊಡ್ಡ ಸ್ಫೂರ್ತಿ. ಇಂದು ನಾವೇನಾದರೂ ಬೇರೆ ರಾಜ್ಯಗಳಲ್ಲಿ ಸ್ವಲ್ಪ ಕೆಲಸ ಮಾಡಿದ್ದೀವಿ ಅಂದ್ರೆ ಅದಕ್ಕೆ ಇಂತವರು ಸ್ಫೂರ್ತಿ. ಅದನ್ನೆಲ್ಲ ಉಪೇಂದ್ರ ಅವರು ಮಾಡಿಬಿಟ್ಟಿದ್ದಾರೆ'' ಎಂದು ಉಪ್ಪಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದರು.
ಆಗ ದರ್ಶನ್ ಗೆ ಗೆಳೆಯ, ಈಗ ಉಪ್ಪಿಗೆ ವಿಲನ್ ಆದ ಆದಿತ್ಯ.!
ನಿಮ್ಮ ಸಿನಿಮಾದಲ್ಲಿ ನೀವು ಅಭಿನಯಿಸಿ
''ಸಿನಿಮಾಗಳಲ್ಲಿ ಅಭಿನಯಿಸುವುದರ ಮೂಲಕ ಎಲ್ಲರಿಗೂ ಸ್ಫೂರ್ತಿಯಾಗಿರುವ ನೀವು, ದಯವಿಟ್ಟು ಚಿತ್ರವನ್ನ ನಿರ್ದೇಶನ ಮಾಡುವ ಮೂಲಕ ಸ್ಫೂರ್ತಿ ನೀಡಿ, ನಿಮ್ಮ ನಿರ್ದೇಶನದಲ್ಲಿ ನೀವೇ ಆಕ್ಟ್ ಮಾಡಿ'' ಎಂದು ಕೇಳಿಕೊಂಡರು.
ಪ್ಲೀಸ್ ಡೈರೆಕ್ಷನ್ ಮಾಡಿ
''ಕೆಲವು ನಿರ್ದೇಶಕರು ಮಲಗಬಾರದು. ಇಂಡಸ್ಟ್ರಿಗೆ ಅವರು ಬೇಕು. ಅದರಲ್ಲಿ ಎತ್ತಿದ ಕೈ ಉಪೇಂದ್ರ. ಆರ್ ಚಂದ್ರು, ಪ್ರೇಮ್ ಇನ್ನು ಹಲವರು ಉಪ್ಪಿ ಸರ್ ಅವರ ಸ್ಫೂರ್ತಿಯಿಂದ ಕೆಲಸ ಕಲಿತವರು. ನಾನು ಈ ಕಾರ್ಯಕ್ರಮಕ್ಕೆ ಬರಿ ವಿಶ್ ಮಾಡೋಕೆ ಬರಲಿಲ್ಲ. ನೀವು ಡೈರೆಕ್ಷನ್ ಮಾಡಿ ಎಂದು ಕೇಳೋಕೆ ಬಂದಿದ್ದು. ಪ್ಲೀಸ್ ಡೈರೆಕ್ಷನ್ ಮಾಡಿ'' ಎಂದು ಮನವಿ ಮಾಡಿದರು.
ಡೈರೆಕ್ಷನ್ ಗೆ ಸಿದ್ಧತೆ.!
ಹಾಗ್ನೋಡಿದ್ರೆ, ಉಪೇಂದ್ರ ಅವರು ತಮ್ಮದೇ 50ನೇ ಚಿತ್ರವನ್ನ ನಿರ್ದೇಶನ ಮಾಡಲಿದ್ದಾರೆ. ಸ್ವತಃ ಉಪ್ಪಿ ಈ ಸುದ್ದಿಯನ್ನ ಖಚಿತಪಡಿಸಿದ್ದಾರೆ. ಆದರೆ ಈ ಪ್ರಾಜೆಕ್ಟ್ ಗೆ ಸಂಬಂಧಿಸಿದಂತೆ ಪ್ರಿ-ಪ್ರೊಡಕ್ಷನ್ ಕೆಲಸ ಮಾಡ್ತಿದ್ದು, ಸದ್ಯದಲ್ಲೇ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರಂತೆ.