Don't Miss!
- News Acid Attack: ಆಸ್ತಿ ವಿವಾದ: ಮಗನ ಮೇಲೆ 'ಆಸಿಡ್' ಎರಚಿದ ತಂದೆ
- Automobiles ಜೀವದ ಗೆಳೆಯನಿಗೆ ಸರ್ಪ್ರೈಸ್ ಆಗಿ 'ಬೈಕ್' ಉಡುಗೊರೆ ನೀಡಿದ ವಧು.. ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ!
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Lifestyle ಮೈ ತೂಕ ಕಡಿಮೆಯಾಗಲು ಈ ಪುದೀನಾ ನೀರು ಸಹಕಾರಿಯೇ? ಇದರ ಇತರ ಪ್ರಯೋಜನಗಳೇನು?
- Technology ಬಜೆಟ್ ದರದಲ್ಲಿ ಬೆಸ್ಟ್ 5G ಫೋನ್ ಬೇಕಿದ್ರೆ, ಈ ಲಿಸ್ಟ್ ಒಮ್ಮೆ ಗಮನಿಸಿ!
- Sports Kohli vs Gambhir: ಹೈ-ವೋಲ್ಟೇಜ್ ಪಂದ್ಯದ ಬಗ್ಗೆ ಕೌಂಟರ್ ನೀಡಿದ ದಿನೇಶ್ ಕಾರ್ತಿಕ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮಾಣಿಕ್ಯ'ದ ಮಧುರ ನೆನಪುಗಳನ್ನು ಹಂಚಿಕೊಂಡ ಕಿಚ್ಚ ಸುದೀಪ್
Recommended Video
ಮಾಣಿಕ್ಯ... 2014 ರಲ್ಲಿ ಬಿಡುಗಡೆ ಆದ ಸಿನಿಮಾ. ಕ್ರೇಜಿ ಸ್ಟಾರ್ ರವಿಚಂದ್ರನ್, ವರಲಕ್ಷ್ಮಿ ಶರತ್ ಕುಮಾರ್, ರನ್ಯ ರಾವ್ ಅಭಿನಯದ ಕಿಚ್ಚ ಸುದೀಪ್ ನಟಿಸಿ, ನಿರ್ದೇಶನದ 'ಮಾಣಿಕ್ಯ' ಸಿನಿಮಾ ಅಂದು ಸೂಪರ್ ಡ್ಯೂಪರ್ ಹಿಟ್ ಆಗಿತ್ತು.
ತೆಲುಗಿನ 'ಮಿರ್ಚಿ' ಚಿತ್ರದ ರೀಮೇಕ್ ಆಗಿರುವ 'ಮಾಣಿಕ್ಯ' ಕಲೆಕ್ಷನ್ ವಿಚಾರದಲ್ಲಿ ದಾಖಲೆ ಬರೆದಿತ್ತು. ವಿಮರ್ಶಕರಿಂದಲೂ ಮೆಚ್ಚುಗೆ ಪಡೆದ 'ಮಾಣಿಕ್ಯ' ಬಗ್ಗೆ ಇಂದು ನಾವು ನೆನಪು ಮಾಡಿಕೊಳ್ಳಲು ಒಂದು ಕಾರಣ ಇದೆ.
ಇಂದಿಗೆ (ಮೇ 1) ಸರಿಯಾಗಿ ನಾಲ್ಕು ವರ್ಷಗಳ ಹಿಂದೆ 'ಮಾಣಿಕ್ಯ' ಚಿತ್ರ ತೆರೆಕಂಡಿತ್ತು. ಇದೇ ಖುಷಿಯಲ್ಲಿ 'ಮಾಣಿಕ್ಯ' ಚಿತ್ರದ ಮಧುರ ನೆನಪುಗಳನ್ನು ಕಿಚ್ಚ ಸುದೀಪ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿರಿ...
ಆ ದಿನ ಮರೆಯಲಾರೆ...
''ನಮ್ಮನ್ನೆಲ್ಲ ಒಟ್ಟಿಗೆ ಸೇರಿಸಿದ ಕೆಲ ಕ್ಷಣಗಳು, ವ್ಯಕ್ತಿಗಳು ಹಾಗೂ ಸನ್ನಿವೇಶಗಳನ್ನು ಮತ್ಯಾವುದರಿಂದಲೂ ತುಂಬಲು ಸಾಧ್ಯವಿಲ್ಲ. ತಾಂತ್ರಿಕ ಬ್ರಹ್ಮ ರವಿಚಂದ್ರನ್ ಅವರಿಗೆ 'ಅಕ್ಷನ್' ಎಂದು ಹೇಳಿದ ಆ ದಿನವನ್ನು ನಾನು ಮರೆಯಲಾರೆ'' ಎಂದು ಕಿಚ್ಚ ಸುದೀಪ್ ಬರೆದುಕೊಂಡಿದ್ದಾರೆ.
ಚಿತ್ರ ವಿಮರ್ಶೆ: ಮನ ಗೆದ್ದ ಸುದೀಪ್ 'ಮಾಣಿಕ್ಯ'
ಸವಾಲಿನ ಕೆಲಸ
''ಮಾನವೀಯತೆ ಹಾಗೂ ಸಂಬಂಧಗಳ ಮೌಲ್ಯಗಳನ್ನು ಸಾರುವ 'ಮಾಣಿಕ್ಯ' ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇತ್ತು. ಮಿತವಾದ ಬಜೆಟ್ ನಲ್ಲಿ ಅದ್ಭುತವಾದ ಸೆಟ್ ಹಾಕಿ ಚಿತ್ರೀಕರಣ ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ಆ ಸವಾಲನ್ನ ನಾನು ಸ್ವೀಕರಿಸಿ, ಜಯಿಸಿದೆ'' - ಕಿಚ್ಚ ಸುದೀಪ್
ಬಹುನಿರೀಕ್ಷಿತ 'ಮಾಣಿಕ್ಯ' ಧ್ವನಿಸುರುಳಿ ವಿಮರ್ಶೆ
ಸಾರ್ಥಕ ಭಾವ ಮೂಡಿತು
''ಸಿನಿಮಾದ ಪ್ರೀ-ಪ್ರೊಡಕ್ಷನ್, ಮೇಕಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸವೇ ಒಂದು ಅತ್ಯದ್ಭುತ ಅನುಭವ ನೀಡಿತು. ಚಿತ್ರದ ಮೊದಲ ಪ್ರತಿ ನಾನು ನೋಡಲಾದಿದ್ದರೂ, ಬಿಡುಗಡೆಯಾದ ಮೊದಲ ದಿನ ಅಭಿಮಾನಿಗಳ ಜೊತೆ 'ಮಾಣಿಕ್ಯ' ನೋಡಿದ್ದು ಖುಷಿ ತಂತು. ಸಿನಿಮಾ ನೋಡಿದ ಅಭಿಮಾನಿಗಳ ಮೊಗದಲ್ಲಿ ಮಂದಹಾಸ ಕಂಡು ಸಾರ್ಥಕ ಭಾವ ಮೂಡಿತು'' - ಕಿಚ್ಚ ಸುದೀಪ್
ಸ್ಫೂರ್ತಿ ನೀಡುತ್ತವೆ
''ಮಾಣಿಕ್ಯ ಸಿನಿಮಾ ನನಗೆ ಒಳ್ಳೆಯ ನೆನಪುಗಳನ್ನು ನೀಡಿವೆ. ಆ ನೆನಪುಗಳೇ ಪ್ರತಿ ದಿನ ನನ್ನನ್ನ ಎಚ್ಚರಗೊಳಸಿ, ಮತ್ತಷ್ಟು ಒಳ್ಳೆ ಸಿನಿಮಾಗಳನ್ನು ಮಾಡಲು ಸ್ಫೂರ್ತಿ ನೀಡುತ್ತವೆ'' - ಕಿಚ್ಚ ಸುದೀಪ್