ಯಾವುದೇ ಕಾರ್ಯಕ್ರಮಕ್ಕೆ ಹೋದ್ರು ಸುದೀಪ್ ಈ ಸಾಂಗ್ ಹಾಡ್ತಾರೆ ಯಾಕೆ.?
Recommended Video

ಕಿಚ್ಚ ಸುದೀಪ್ ಕನ್ನಡದ ಚಿತ್ರರಂಗದಲ್ಲಿ ಬಹುದೊಡ್ಡ ಅಭಿಮಾನಿ ಬಳಗವನ್ನ ಹೊಂದಿರುವ ನಟ. ಕನ್ನಡದಲ್ಲಿ ಮಾತ್ರವಲ್ಲದೇ ಪರಭಾಷೆಯಲ್ಲೂ ತನ್ನ ನಟನೆಯಿಂದ ಗಮನ ಸೆಳೆದಿರುವ ಕಲಾವಿದ.
ಇಂತಹ ಕಲಾವಿದ ಒಂದು ವಿಷ್ಯದಲ್ಲಿ ತುಂಬಾ ವಿಶೇಷವೆನಿಸಿಕೊಳ್ಳುತ್ತಿದ್ದಾರೆ. ಸಾಹಸಸಿಂಹ, ದಿವಂಗತ ನಟ ಡಾ ವಿಷ್ಣುವರ್ಧನ್ ಅವರಂದ್ರೆ ಕಿಚ್ಚನಿಗೆ ಹೆಚ್ಚು ಅಭಿಮಾನ ಎನ್ನುವುದು ಗೊತ್ತಿರುವ ಸಂಗತಿ. ಈ ಅಭಿಮಾನವನ್ನ ಹಲವು ರೀತಿಯಲ್ಲಿ ಹೊರಹಾಕಿದ್ದಾರೆ.
ಆದ್ರೆ, ಈ ಒಂದು ವಿಧಾನ ಮಾತ್ರ ಆಗಾಗ ಚರ್ಚೆಯಾಗುತ್ತಲೇ ಇರುತ್ತೆ. ಹೌದು, ಸುದೀಪ್ ಭಾಗವಹಿಸುವ ಬಹುತೇಕ ಮನರಂಜನಾ ಕಾರ್ಯಕ್ರಮಗಳಲ್ಲಿ ವಿಷ್ಣುವರ್ಧನ್ ಅವರ ಈ ಒಂದು ಹಾಡನ್ನ ಹಾಡ್ತಾರೆ ಅಥವಾ ನೆನಪು ಮಾಡಿಕೊಳ್ತಾರೆ. ಇದು ಹಲವು ಬಾರಿ ನೋಡಿದ್ದೇವೆ.

ಅಷ್ಟಕ್ಕೂ, ಯಾವುದು ಆ ಹಾಡು ಅಂತ ಯೋಚನೆ ಮಾಡ್ತೀದ್ದೀರಾ.! ಜಿಮ್ಮಿಗಲ್ಲು ಚಿತ್ರದ ''ತುತ್ತು ಅನ್ನ ತಿನ್ನೋಕೆ, ಬೊಗಸೇ ನೀರು ಕುಡಿಯೋಕೆ......''.
ಈ ಹಾಡಂದ್ರೆ ಸುದೀಪ್ ಅವರಿಗೆ ತುಂಬಾ ಇಷ್ಟ. ಸಂದರ್ಭಕ್ಕೆ ತಕ್ಕ ಹಾಗೆ ಈ ಹಾಡನ್ನ ಹೆಚ್ಚು ಕೇಳ್ತಾರೆ. ಇತ್ತೀಚಿಗಷ್ಟೆ ಚುಂಚನಕಟ್ಟೆಯ ಜಲಪಾತೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುದೀಪ್ ವೇದಿಕೆ ಮೇಲೆ ಈ ಹಾಡನ್ನ ಹಾಡಿ ಅಭಿಮಾನಿಗಳನ್ನ ರಂಜಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


Click it and Unblock the Notifications











