twitter
    For Quick Alerts
    ALLOW NOTIFICATIONS  
    For Daily Alerts

    ಯಾವುದೇ ಕಾರ್ಯಕ್ರಮಕ್ಕೆ ಹೋದ್ರು ಸುದೀಪ್ ಈ ಸಾಂಗ್ ಹಾಡ್ತಾರೆ ಯಾಕೆ.?

    By Bharath Kumar
    |

    Recommended Video

    ಈ ಹಾಡನ್ನು ತಪ್ಪದೇ ಹಾಡ್ತಾರೆ ಕಿಚ್ಚ ಯಾಕೆ ಗೊತ್ತಾ..? | Filmibeat Kannada

    ಕಿಚ್ಚ ಸುದೀಪ್ ಕನ್ನಡದ ಚಿತ್ರರಂಗದಲ್ಲಿ ಬಹುದೊಡ್ಡ ಅಭಿಮಾನಿ ಬಳಗವನ್ನ ಹೊಂದಿರುವ ನಟ. ಕನ್ನಡದಲ್ಲಿ ಮಾತ್ರವಲ್ಲದೇ ಪರಭಾಷೆಯಲ್ಲೂ ತನ್ನ ನಟನೆಯಿಂದ ಗಮನ ಸೆಳೆದಿರುವ ಕಲಾವಿದ.

    ಇಂತಹ ಕಲಾವಿದ ಒಂದು ವಿಷ್ಯದಲ್ಲಿ ತುಂಬಾ ವಿಶೇಷವೆನಿಸಿಕೊಳ್ಳುತ್ತಿದ್ದಾರೆ. ಸಾಹಸಸಿಂಹ, ದಿವಂಗತ ನಟ ಡಾ ವಿಷ್ಣುವರ್ಧನ್ ಅವರಂದ್ರೆ ಕಿಚ್ಚನಿಗೆ ಹೆಚ್ಚು ಅಭಿಮಾನ ಎನ್ನುವುದು ಗೊತ್ತಿರುವ ಸಂಗತಿ. ಈ ಅಭಿಮಾನವನ್ನ ಹಲವು ರೀತಿಯಲ್ಲಿ ಹೊರಹಾಕಿದ್ದಾರೆ.

    ಆದ್ರೆ, ಈ ಒಂದು ವಿಧಾನ ಮಾತ್ರ ಆಗಾಗ ಚರ್ಚೆಯಾಗುತ್ತಲೇ ಇರುತ್ತೆ. ಹೌದು, ಸುದೀಪ್ ಭಾಗವಹಿಸುವ ಬಹುತೇಕ ಮನರಂಜನಾ ಕಾರ್ಯಕ್ರಮಗಳಲ್ಲಿ ವಿಷ್ಣುವರ್ಧನ್ ಅವರ ಈ ಒಂದು ಹಾಡನ್ನ ಹಾಡ್ತಾರೆ ಅಥವಾ ನೆನಪು ಮಾಡಿಕೊಳ್ತಾರೆ. ಇದು ಹಲವು ಬಾರಿ ನೋಡಿದ್ದೇವೆ.

    sudeep sings dr vishnuvardhan song

    ಡಾ ವಿಷ್ಣು ಸಾವಿಗೂ ಮುನ್ನ ಸುದೀಪ್ ಬಳಿ ಈ ವಿಷ್ಯವನ್ನ ಚರ್ಚಿಸಿದ್ರಂತೆ ಡಾ ವಿಷ್ಣು ಸಾವಿಗೂ ಮುನ್ನ ಸುದೀಪ್ ಬಳಿ ಈ ವಿಷ್ಯವನ್ನ ಚರ್ಚಿಸಿದ್ರಂತೆ

    ಅಷ್ಟಕ್ಕೂ, ಯಾವುದು ಆ ಹಾಡು ಅಂತ ಯೋಚನೆ ಮಾಡ್ತೀದ್ದೀರಾ.! ಜಿಮ್ಮಿಗಲ್ಲು ಚಿತ್ರದ ''ತುತ್ತು ಅನ್ನ ತಿನ್ನೋಕೆ, ಬೊಗಸೇ ನೀರು ಕುಡಿಯೋಕೆ......''.

    <strong></strong>ಚುಂಚನಕಟ್ಟೆ ಜಲಪಾತೋತ್ಸವದಲ್ಲಿ ನಟ ಸುದೀಪ್ಚುಂಚನಕಟ್ಟೆ ಜಲಪಾತೋತ್ಸವದಲ್ಲಿ ನಟ ಸುದೀಪ್

    ಈ ಹಾಡಂದ್ರೆ ಸುದೀಪ್ ಅವರಿಗೆ ತುಂಬಾ ಇಷ್ಟ. ಸಂದರ್ಭಕ್ಕೆ ತಕ್ಕ ಹಾಗೆ ಈ ಹಾಡನ್ನ ಹೆಚ್ಚು ಕೇಳ್ತಾರೆ. ಇತ್ತೀಚಿಗಷ್ಟೆ ಚುಂಚನಕಟ್ಟೆಯ ಜಲಪಾತೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುದೀಪ್ ವೇದಿಕೆ ಮೇಲೆ ಈ ಹಾಡನ್ನ ಹಾಡಿ ಅಭಿಮಾನಿಗಳನ್ನ ರಂಜಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    English summary
    Kannada actor, kiccha sudeep has sing dr vishnuvardhan movie song in chunchanakatte jalapathotsava.
    Monday, August 13, 2018, 16:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X