Don't Miss!
- News KRS ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ: ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಇದೇ ಕಾರಣಕ್ಕೆ 'ಹುಚ್ಚ' ಚಿತ್ರವನ್ನು ಬೇರೆ ನಟರು ಬಿಟ್ರು, ಸುದೀಪ್ ಒಪ್ಪಿಕೊಂಡ್ರು
Recommended Video
'ಹುಚ್ಚ' ಸುದೀಪ್ ಸಿನಿ ಕೆರಿಯರ್ ಅನ್ನು ಬದಲು ಮಾಡಿದ್ದ ಸಿನಿಮಾ. ಓಂ ಪ್ರಕಾಶ್ ರಾವ್ ನಿರ್ದೇಶಕನ ಮಾಡಿದ್ದ ಈ ಸಿನಿಮಾ ಕಿಚ್ಚನಿಗೆ ಅದೃಷ್ಟ ತಂದುಕೊಟ್ಟಿತ್ತು.
'ಹುಚ್ಚ' ಸಿನಿಮಾ ಸುದೀಪ್ ಕೈಗೆ ಹೇಗೆ ಬಂತು ಎನ್ನುವ ಸಂಗತಿಯನ್ನು ಅವರೇ ಇದೀಗ ಹೇಳಿಕೊಂಡಿದ್ದಾರೆ. 'ದಬಾಂಗ್ 3' ಸಿನಿಮಾದ ವಿಶೇಷವಾಗಿ ಬಾಲಿವುಡ್ ಸಂದರ್ಶನದಲ್ಲಿ ಮಾತನಾಡುವ ವೇಳೆ ತಮ್ಮ ಸಿನಿಮಾ ಪ್ರಾರಂಭದ ದಿನಗಳನ್ನು ನೆನೆದಿದ್ದಾರೆ. ಈ ಸಮಯದಲ್ಲಿ 'ಹುಚ್ಚ' ಚಿತ್ರದ ಕುತೂಹಲಕಾರಿ ಘಟನೆಯನ್ನು ಪ್ರೇಕ್ಷಕರ ಮುಂದೆ ಬಿಟ್ಟಿದ್ದಾರೆ.
ಬಾಲಿವುಡ್ ಸಂದರ್ಶನದಲ್ಲಿ 'ಹುಚ್ಚ' ಸಿನಿಮಾ ನೆನೆದ ಸುದೀಪ್
'ಹುಚ್ಚ' ಸಿನಿಮಾ ಸಿಕ್ಕದ್ದು, ಬಿಡುಗಡೆ ದಿನ ನಡೆದ ಘಟನೆ, ಕಿಚ್ಚ ಹೆಸರು ಬಂದಿದ್ದು, ಸುದೀಪ್ ಕಣ್ಣೀರು ಹಾಕಿದ್ದು ಈ ಘಟನೆಗಳನ್ನು ಮುಕ್ತವಾಗಿ ವಿವರಿಸಿದ್ದಾರೆ.
ಯಾವ ಸಿನಿಮಾಗಳು ಬಿಡುಗಡೆ ಆಗುತ್ತಿರಲಿಲ್ಲ
ಪ್ರಾರಂಭದಲ್ಲಿ ಸುದೀಪ್ ನಟನೆಯ ಯಾವ ಸಿನಿಮಾಗಳು ಬಿಡುಗಡೆ ಆಗುತ್ತಿರಲಿಲ್ಲ. ಕೆಲವು ಸಿನಿಮಾಗಳು ಅರ್ಧದಲ್ಲಿಯೇ ನಿಂತು ಹೋಗುತ್ತಿದ್ದವು. ಹೀಗಾಗಿ ಅವರನ್ನು 'ಐರಾನ್ ಲೆಗ್' ಎಂದು ಟೀಕಿಸುತ್ತಿದ್ದರು. ಆದರೆ, ಮೊದಲ ಬಾರಿಗೆ ಸುದೀಪ್ ನಟನೆಯ ಒಂದು ಸಿನಿಮಾ ಬಿಡುಗಡೆಯಾಯ್ತು. ಚಿತ್ರಮಂದಿರಕ್ಕೆ ಸುದೀಪ್ ಹೋದ್ರೆ, ಕೇವಲ ಐದು ಜನ ಸಿನಿಮಾ ನೋಡುತ್ತಿದ್ದರು. ಇದರಿಂದ ಸುದೀಪ್ ತುಂಬ ಬೇಸರಗೊಂಡರು.
ತಲೆ ಬೋಳಿಸಿಕೊಳ್ಳಬೇಕು.. ರೆಡಿನಾ..?
'ಹುಚ್ಚ' ಸಿನಿಮಾ ತಮಿಳಿನ 'ಸೇತು' ಸಿನಿಮಾದ ರಿಮೇಕ್. ಈ ಚಿತ್ರದ ಆಫರ್ ಮೊದಲು ಕನ್ನಡದ ಬೇರೆ ಬೇರೆ ನಟರಿಗೆ ಹೋಗಿತ್ತು. ಸಿನಿಮಾದ ಕೊನೆಯಲ್ಲಿ ನಾಯಕ ತಲೆ ಬೋಳಿಸಿಕೊಳ್ಳಬೇಕಾಗಿತ್ತು. ಇದೇ ಕಾರಣಕ್ಕೆ ಯಾವ ನಟರೂ ಈ ಸಿನಿಮಾ ಒಪ್ಪಿಕೊಳ್ಳಲಿಲ್ಲ. ನಂತರ ಸುದೀಪ್ ಬಳಿ ಪ್ರಾಜೆಕ್ಟ್ ಬಂತು. ನಿರ್ಮಾಪಕರು ನೀವು ತಲೆ ಬೋಳಿಸಿಕೊಳ್ಳಬೇಕು.. ರೆಡಿನಾ..? ಎಂದರು. ಆಗ ಸುದೀಪ್ ನನಗೆ ಸಿನಿಮಾ ನೀಡಿ... ಅದಕ್ಕಾಗಿ ಏನನ್ನು ಬೇಕಾದರು ಬೊಳಿಸಿಕೊಳ್ಳುತ್ತೇನೆ ಎಂದರಂತೆ.
ಮೂರನೇ ಮಹಡಿಯಿಂದ ಬಿದ್ದ ಸುದೀಪ್
ಸಿನಿಮಾದ ಏಳನೇ ದಿನದ ಚಿತ್ರೀಕರಣ ನಡೆಯುತ್ತಿತ್ತು. ಆಗ ಮೂರನೇ ಮಹಡಿಯಿಂದ ಸುದೀಪ್ ಬಿದ್ದು ಬಿಟ್ಟರು. ಮೂಳೆಗೆ ಬಲವಾದ ಪೆಟ್ಟಾಗಿತ್ತು. ಕಾಲು ಗಾಯ ಆಗಿತ್ತು. ಇದೆಲ್ಲ ಇದ್ದರೂ ಸಹಿಸಿಕೊಂಡು ಸುದೀಪ್ ಸಿನಿಮಾ ಮಾಡಿದರು. ಅಂತು ಸಿನಿಮಾ ಮುಗಿದು, ಬಿಡುಗಡೆಯಾಯ್ತು. ಒಂದು ಸಣ್ಣ ಚಿತ್ರಮಂದಿರ ಸಿನಿಮಾದ ಮೈನ್ ಥಿಯೇಟರ್ ಆಗಿ ಸಿಕ್ಕಿತ್ತು.
ಕಣ್ಣೀರು ಹಾಕಿದ ಸುದೀಪ್
'ಹುಚ್ಚ' ಸಿನಿಮಾ ಬಿಡುಗಡೆಯಾದ ದಿನ ಬೆಳಗ್ಗೆ 8 ಗಂಟೆ.. ಮತ್ತೆ ನಾಲ್ಕೇ ಜನರು ನಿಂತಿದ್ದರು. ಚಿತ್ರಮಂದಿರದ ಒಳಗೆ ಹೋದ ಸುದೀಪ್ ಗೆ ಥಿಯೇಟರ್ ಮ್ಯಾನೆಜರ್ ಸಿಕ್ಕರು. ಏಕೆ ಬೇಸರ ಮಾಡಿಕೊಂಡಿದ್ದೀರಿ..? ಎಂದರು. ಆಗ ಇದ್ದೇನೂ ಜನರೇ ಇಲ್ಲವಲ್ಲ ಎಂದು ಬೇಸರಗೊಂಡರು. ಹೀಗೆ ಹೇಳಿದ್ದೇ ತಡ, ಅಯ್ಯೋ ಸಿನಿಮಾ ಹೌಸ್ ಫುಲ್ ಆಗಿದೆ. ಎಲ್ಲರೂ ಟಿಕೆಟ್ ತೆಗೆದುಕೊಂಡು ಹೋಗಿದ್ದಾರೆ. ಶೋಗೆ ಸಮಯ ಇರುವ ಕಾರಣಸ ಜನ ಬಂದಿಲ್ಲ. ಸಂಜೆ ಶೋಗೂ ಟಿಕೆಟ್ ಸೇಲ್ ಆಗಿದೆ ಎಂದರಂತೆ. ಈ ಮಾತು ಕೇಳಿ ಸುದೀಪ್ ಕಣ್ಣೀರು ಹಾಕಿದರು.
ಜನ ಸಾಗರದ ನಡುವೆ ಕಿಚ್ಚ
ಥಿಯೇಟರ್ ಮುಂದೆ ಸಿಕ್ಕಾಪಟ್ಟೆ ಜನ ಸೇರಿದರು. ಸಿನಿಮಾ ನೋಡಿ ಖುಷಿಯಾದ ಅವರು ಸುದೀಪ್ ರನ್ನು ಎತ್ತಿಕೊಂಡರು. ಸುದೀಪ್ ಹೆಸರು ತಿಳಿಯದ ಜನ ಚಿತ್ರದ ಪಾತ್ರದ ಹೆಸರು 'ಕಿಚ್ಚ' ಎಂದು ಕೂಗಿದರು. ಜೈ ಕಾರ ಹಾಕಿದರು. ಆ ದಿನ ಸುದೀಪ್ ನಾನು ಏನೋ ಸಾಧಿಸಿದೆ ಎಂದುಕೊಂಡರು. ಜನರು ನೀಡಿದ ಕಿಚ್ಚ ಎನ್ನುವ ಹೆಸರನ್ನು ಹಾಗೆಯೇ ಉಳಿಸಿಕೊಂಡರು. ಇಂದಿಗೂ ಆ ಹೆಸರು ಅಭಿಮಾನಿಗಳ ಪ್ರೀತಿ ಅವರ ಜೊತೆಗೆ ಇದೆ.