Don't Miss!
- News ರಾತ್ರೋ ರಾತ್ರಿ ಪತ್ರಿಕಾಗೋಷ್ಠಿ ನಡೆಸಿ ವಿ.ಶ್ರೀನಿವಾಸ ಪ್ರಸಾದ್ ಅಳಿಯ ಏನು ಹೇಳಿದ್ರು ಗೊತ್ತಾ?
- Sports IPL 2024: ಮುಂಬೈ ಇಂಡಿಯನ್ಸ್ ತಂಡ ಸೇರಿದ ಮಾಜಿ ನಾಯಕ: ಹಾಲಿ ನಾಯಕನ ಆತಂಕ ದೂರ
- Lifestyle ಫ್ಲ್ಯಾಟ್ನಲ್ಲಿ ವಾಸಿಸಲು ಹೋಗುವಾಗ ಸಮೃದ್ಧಿ, ಆರೋಗ್ಯಕ್ಕಾಗಿ ವಾಸ್ತು ಹೀಗಿದೆಯೇ ಎಂದು ನೋಡಬೇಕು
- Technology ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಇನ್ಫಿನಿಕ್ಸ್ ನೋಟ್ 40 ಪ್ರೊ ಪ್ಲಸ್ 5G ಫೋನ್: ಫೀಚರ್ಸ್ ಹೇಗಿದೆ?
- Automobiles ಡಿ ಬಾಸ್ ಪತ್ನಿ ಖರೀದಿಸಿದ್ದು ಸಾಮಾನ್ಯ ಕಾರಲ್ಲ: ಬಂಗಲೆಯಂತಹ ಇಂಟೀರಿಯರ್!
- Finance ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ, ನಿಮ್ಮ ನಗರದಲ್ಲಿ 24 ಕ್ಯಾರೆಟ್ ಚಿನ್ನದ ದರ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಂದು ಅಷ್ಟೇ, ಇಂದು ಅಷ್ಟೇ : ಹೈದರಾಬಾದ್ ನಲ್ಲಿ ಕಿಚ್ಚನ ಕನ್ನಡ ಪ್ರೇಮ
Recommended Video
ಕನ್ನಡದ ಕಿಚ್ಚ ಸುದೀಪ್ ತೆಲುಗು ಸಿನಿಮಾ ಮಾಡಿದ್ದಾರೆ. ತಮಿಳು ಸಿನಿಮಾ ಮಾಡಿದ್ದಾರೆ. ಹಿಂದಿ ಸಿನಿಮಾವನ್ನೂ ಮಾಡಿದ್ದಾರೆ. ಆದರೆ, ಎಂದಿಗೂ ಸುದೀಪ್ ತಮ್ಮ ಕನ್ನಡ ಪ್ರೇಮವನ್ನು ಮರೆತಿಲ್ಲ.
ನಿನ್ನೆ ಹೈದರಾಬಾದ್ ನಲ್ಲಿ 'ಪೈಲ್ವಾನ್' ಪ್ರಿ ರಿಲೀಸ್ ಕಾರ್ಯಕ್ರಮ ನಡೆಯಿತು. ವೇದಿಕೆ ಮೇಲೆ ನಿಂತ ಸುದೀಪ್ ಮಾತು ಶುರು ಮಾಡಿದರು. ತೆಲುಗು ನೆಲದಲ್ಲಿ ಇದ್ದರೂ, ಮೊದಲು ಸುದೀಪ್ ಮಾತು ಶುರು ಮಾಡಿದ್ದು ಕನ್ನಡದಲ್ಲಿ.
'ಪೈಲ್ವಾನ್' ಸುದೀಪ್ ಅಬ್ಬರ ನೋಡಿ ಬೆರಗಾದ ಪಾರೂಲ್ ಯಾದವ್
'ಎಲ್ಲರಿಗೂ ನಮಸ್ಕಾರ..' ಎಂದು ಕನ್ನಡದಲ್ಲಿ ಮಾತನಾಡಿದ ಕಿಚ್ಚ ನಂತರ ತೆಲುಗಿನಲ್ಲಿ ನಮಸ್ಕಾರ ಹೇಳಿದರು. ಬಳಿಕ ತಮಗೆ ತೆಲುಗು ಮಾತನಾಡಲು ಸರಿಯಾಗಿ ಬರುವುದಿಲ್ಲ ಎಂದು ಹೇಳಿ ಇಂಗ್ಲೀಷ್ ನಲ್ಲಿ ಮಾತು ಮುಂದುವರೆಸಿದರು.
ಸುದೀಪ್ ಈ ರೀತಿ ಕನ್ನಡ ಪ್ರೇಮ ತೋರುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಬೇರೆ ಭಾಷೆಯ ಅನೇಕ ಸಿನಿಮಾ ಕಾರ್ಯಕ್ರಮಗಳಲ್ಲಿ ಸುದೀಪ್ ತಮ್ಮ ಮಾತು ಶುರು ಮಾಡುವುದು ಕನ್ನಡದಲ್ಲಿಯೇ. 'ಈಗ' ಸಿನಿಮಾದ ಸಮಯದಲ್ಲಿಯೂ ಸುದೀಪ್ ಇದೇ ರೀತಿ ಕನ್ನಡಿಗರ ಮೆಚ್ಚುಗೆ ಪಡೆದಿದ್ದರು.
''ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು'' ಎನ್ನುವ ಕುವೆಂಪು ಅವರ ನುಡಿಯ ಹಾಗೆ ಸುದೀಪ್ ಅನ್ಯ ರಾಜ್ಯದಲ್ಲಿಯೂ ಕನ್ನಡಾಭಿಮಾನ ತೋರಿಸುತ್ತಿದ್ದಾರೆ.